ನೈಸರ್ಗಿಕವಾಗಿ ಬಂದು ಸೇರುವ ಹೂಳಿನ ಜತೆಗೆ ಇಂತಹ ತ್ಯಾಜ್ಯ ತಂದು ಹಾಕಿದರೆ, ಹೂಳು ಸಂಗ್ರಹದ ಪ್ರಮಾಣ ಹೆಚ್ಚಾಗಲಿದೆ. ಹಿನ್ನೀರು ನಿಲ್ಲುವ ಇದೇ ಜಾಗದಲ್ಲಿ ದ್ವಿಪಥವಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಕ್ಕೆ ವಿಸ್ತರಿಸಲಾಗುತ್ತಿದೆ. ರಸ್ತೆ ನಿರ್ಮಾಣಕ್ಕಾಗಿಯೂ ಕಲ್ಲು, ಮಣ್ಣು ತಂದು ಸುರಿಯಲಾಗುತ್ತಿದೆ. ಅದನ್ನು ನೋಡಿದ ಸಾರ್ವಜನಿಕರೂ ಕಟ್ಟಡಗಳ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ.