<p><strong>ತೇರದಾಳ: ‘</strong>ಅವಧೂತ ಸಂಪ್ರದಾಯವು ಆಧ್ಯಾತ್ಮಿಕ ವೈಶಿಷ್ಟ್ಯ ಹೊಂದಿದೆ. ಧರ್ಮ ಜಾಗೃತಿ ಹಾಗೂ ಗುರು ಪರಂಪರೆಯಲ್ಲಿ ಉನ್ನತ ತತ್ವಗಳನ್ನು ಹುಟ್ಟುಹಾಕಿದೆ. ಭಾರತೀಯ ಸಂಸ್ಕೃತಿ ಮತ್ತು ಧರ್ಮದ ಉನ್ನತಿಗಾಗಿ ಇಂತಹ ಮಠಗಳ ಕೊಡುಗೆ ಅನನ್ಯ’ ಎಂದು ರಬಕವಿಯ ಬ್ರಹ್ಮಾನಂದ ಅಶ್ರಮದ ಗುರುಸಿದ್ಧೇಶ್ವರ ಶ್ರೀ ಹೇಳಿದರು.</p>.<p>ತಾಲ್ಲೂಕಿನ ಹನಗಂಡಿ ಗ್ರಾಮದ ಅವಧೂತ ಆಶ್ರಮದಲ್ಲಿ ರಾಮಾನಂದ ಅವಧೂತ ಶ್ರೀಗಳ 28ನೇ ಪುಣ್ಯಾರಾಧನೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಶೇಗುಣಸಿ ಹನಮಂತ ಮಹಾರಾಜರು, ಆಶ್ರಮದ ಜಗದೀಶ್ವರ ಶ್ರೀ, ಚಿದಾನಂದ ಅವಧೂತ ಶ್ರೀ, ಘೆನಮ್ಮತಾಯಿ, ಹಳಿಂಗಳಿ ಕಮರಿಮಠದ ಶರಣಬಸವದೇವರು, ಬನಹಟ್ಟಿಯ ಶಿವಶರಣೆ ಅಶ್ವಿನಿ ಗೆದ್ದಪ್ಪನವರ ಮಾತನಾಡಿದರು.</p>.<p>ಮುಖಂಡರಾದ ನೀಲೇಶ ದೇಸಾಯಿ, ಪ್ರಸನ್ನಕುಮಾರ ದೇಸಾಯಿ, ಬಾಗಪ್ಪ ಹನಗಂಡಿ, ಸಿದ್ದಪ್ಪ ಪೂಜಾರಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಇದಕ್ಕೂ ಮುಂಚೆ ಆಶ್ರಮದಲ್ಲಿ ವಿಶೇಷ ಪೂಜೆಗಳು ನಡೆದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಭಾವಚಿತ್ರ, ಪಲ್ಲಕ್ಕಿ ಉತ್ಸವ, ಪೂರ್ಣಕುಂಭಮೆರವಣಿಗೆ ವಿವಿಧ ವಾದ್ಯಗಳೊಂದಿಗೆ ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇರದಾಳ: ‘</strong>ಅವಧೂತ ಸಂಪ್ರದಾಯವು ಆಧ್ಯಾತ್ಮಿಕ ವೈಶಿಷ್ಟ್ಯ ಹೊಂದಿದೆ. ಧರ್ಮ ಜಾಗೃತಿ ಹಾಗೂ ಗುರು ಪರಂಪರೆಯಲ್ಲಿ ಉನ್ನತ ತತ್ವಗಳನ್ನು ಹುಟ್ಟುಹಾಕಿದೆ. ಭಾರತೀಯ ಸಂಸ್ಕೃತಿ ಮತ್ತು ಧರ್ಮದ ಉನ್ನತಿಗಾಗಿ ಇಂತಹ ಮಠಗಳ ಕೊಡುಗೆ ಅನನ್ಯ’ ಎಂದು ರಬಕವಿಯ ಬ್ರಹ್ಮಾನಂದ ಅಶ್ರಮದ ಗುರುಸಿದ್ಧೇಶ್ವರ ಶ್ರೀ ಹೇಳಿದರು.</p>.<p>ತಾಲ್ಲೂಕಿನ ಹನಗಂಡಿ ಗ್ರಾಮದ ಅವಧೂತ ಆಶ್ರಮದಲ್ಲಿ ರಾಮಾನಂದ ಅವಧೂತ ಶ್ರೀಗಳ 28ನೇ ಪುಣ್ಯಾರಾಧನೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಶೇಗುಣಸಿ ಹನಮಂತ ಮಹಾರಾಜರು, ಆಶ್ರಮದ ಜಗದೀಶ್ವರ ಶ್ರೀ, ಚಿದಾನಂದ ಅವಧೂತ ಶ್ರೀ, ಘೆನಮ್ಮತಾಯಿ, ಹಳಿಂಗಳಿ ಕಮರಿಮಠದ ಶರಣಬಸವದೇವರು, ಬನಹಟ್ಟಿಯ ಶಿವಶರಣೆ ಅಶ್ವಿನಿ ಗೆದ್ದಪ್ಪನವರ ಮಾತನಾಡಿದರು.</p>.<p>ಮುಖಂಡರಾದ ನೀಲೇಶ ದೇಸಾಯಿ, ಪ್ರಸನ್ನಕುಮಾರ ದೇಸಾಯಿ, ಬಾಗಪ್ಪ ಹನಗಂಡಿ, ಸಿದ್ದಪ್ಪ ಪೂಜಾರಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಇದಕ್ಕೂ ಮುಂಚೆ ಆಶ್ರಮದಲ್ಲಿ ವಿಶೇಷ ಪೂಜೆಗಳು ನಡೆದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಭಾವಚಿತ್ರ, ಪಲ್ಲಕ್ಕಿ ಉತ್ಸವ, ಪೂರ್ಣಕುಂಭಮೆರವಣಿಗೆ ವಿವಿಧ ವಾದ್ಯಗಳೊಂದಿಗೆ ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>