<p><strong>ಕೂಡಲಸಂಗಮ:</strong> ಮಲಪ್ರಭಾ ನದಿಯನ್ನು ಒಡಲಲ್ಲಿಯೇ ತುಂಬಿಕೊಂಡಿರುವ ಖೈರವಾಡಗಿ, ಪಾಪಥನಾಳ, ಹಿರೇಮಳಗಾವಿ, ಚಿಕ್ಕಮಳಗಾವಿ ಹಾಗೂ ಗಂಜಿಹಾಳ ಗ್ರಾಮದ ಜನರು ಕಳೆದ ಎರಡು ತಿಂಗಳುಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಇದಕ್ಕೆ ಪರಿಹಾರ ಕಲ್ಪಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿದ್ದಾರೆ.<br /> <br /> ಈ ಗ್ರಾಮಗಳಿಗೆ ಅಧಿಕಾರಿಗಳು ಸಮರ್ಪಕ ಕುಡಿಯುವ ನೀರಿನ ಯೋಜನೆಯನ್ನು ರೂಪಿಸದ ಕಾರಣ ಮಲಪ್ರಭೆ ನದಿಯಲ್ಲಿನ ನೀರೇ ಇಲ್ಲಿಯ ಜನರಿಗೆ ಮೂಲ ಆಧಾರವಾಗಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ನದಿ ಸಂಪೂರ್ಣ ಬತ್ತಿದ ಪರಿಣಾಮ ಗ್ರಾಮಸ್ಥರು ಬೊಗಸೆ ನೀರಿಗಾಗಿ ದಿನವಿಡೀ ಪರದಾಡಬೇಕಿದೆ.<br /> <br /> ಖೈರವಾಡಗಿ ಹಾಗೂ ಪಾಪಥನಾಳ ಗ್ರಾಮದಲ್ಲಿ ಯವಾಗಲೋ ಕೊರೆಯಲಾದ ಕೊಳವೆ ಬಾವಿಗಳು ಸಮರ್ಪಕ ದುರಸ್ತಿ ಇಲ್ಲದೇ ಈಗ ಅವುಗಳೆಲ್ಲ ಕೆಟ್ಟು ನಿಂತಿವೆ. ಪಕ್ಕದಲ್ಲಿ ಇರುವ ಮಲಪ್ರಭೆ ನದಿಯಲ್ಲಿ ಆಳದವರೆಗೆ ಒರತಿ ತೋಡಿದರೂ ನೀರು ಬರದ ಕಾರಣ ಈ ಗ್ರಾಮಗಳಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಗಂಜಿಹಾಳ ಸಮಿಪ ಬಾಗಲಕೋಟೆ ರಸ್ತೆಯಲ್ಲಿರುವ ಕೊಳವೆ ಬಾವಿಯಿಂದ ಟ್ರ್ಯಾಕ್ಟರ್ ಮೂಲಕವೇ ದಿನನಿತ್ಯ ಕುಡಿಯಲು ನೀರು ತರಬೇಕು. ಈ ಗ್ರಾಮಗಳಲ್ಲಿನ ಜಾನುವಾರುಗಳಿಗೆ ಗ್ರಾಮದಿಂದ ದೂರದಲ್ಲಿ ಮಲಪ್ರಭೆ ನದಿಯಲ್ಲಿ ಇರುವ ತೆಗ್ಗಿನಲ್ಲಿ ನಿಂತ ಮಲಿನ ನೀರೇ ಗತಿಯಾಗಿದೆ.<br /> <br /> ಜಿಲ್ಲಾ ಪಂಚಾಯಿತಿ ಮೂಲಕ ಕಿರು ನೀರು ಯೋಜನೆಯಡಿ ಹಿರೇಮಳಗಾವಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು 2007ರಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದರೆ, ಈ ಯೋಜನೆಗೆ ಹಣ ಖರ್ಚು ಮಾಡಲಾಯಿತೇ ಹೊರತು ಈ ಯೋಜನೆಯಿಂದ ಗ್ರಾಮಕ್ಕೆ ಒಂದು ದಿನವೂ ನೀರು ಬರಲಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.<br /> <br /> 1994ರಲ್ಲಿ ಡೆನಿಡಾ ಯೊಜನೆಯಡಿ ಮಲಪ್ರಭಾ ನದಿಯಲ್ಲಿ ನಿರ್ಮಿಸಿದ ಜಾಕವೆಲ್ ಮೂಲಕ ಇಂದಿಗೂ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಜಾಕವೆಲ್ನಲ್ಲಿ ತುಂಬಿದ ಹೂಳಿನಿಂದ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಸರಬರಾಜು ಮಾಡುವ ನೀರು ಅರ್ಧ ಗಂಟೆ ಕೂಡಾ ಬರುವುದಿಲ್ಲ. ಮೇಲಾಗಿ ಈ ನೀರು ಕುಡಿಯಲು ಯೋಗ್ಯವಿಲ್ಲ.<br /> <br /> ಒರತಿ ನೀರೇ ಗತಿ: ಹಿರೇಮಳಗಾವಿ ಗ್ರಾಮದ ಜನರಿಗೆ ಕುಡಿಯಲು ಒರತಿ ನೀರೇ ಗತಿಯಾಗಿದೆ. ಗ್ರಾಮದಿಂದ ಸುಮಾರು ದೂರದಲ್ಲಿರುವ ಮಲಪ್ರಭೆ ನದಿಯಲ್ಲಿ ತೋಡಲಾದ ಒಂದೆರಡು ಒರತಿಗಳಲ್ಲಿ ಮಾತ್ರ ಸಣ್ಣ ಪ್ರಮಾಣದಲ್ಲಿ ನೀರಿನ ಸೆಲೆ ಬರುತ್ತಿದ್ದು, ಈ ನೀರಿಗಾಗಿ ಮನೆ ಮಂದಿಯೆಲ್ಲ ನಿತ್ಯ ನೀರಿಗಾಗಿಯೇ ಅಲೆಯಬೇಕಿದೆ. ಒಂದು ಕೊಡ ನೀರು ತುಂಬಲು ಕನಿಷ್ಠ ಅರ್ಧ ಗಂಟೆ ಸಮಯ ಬೇಕಾಗಿರುವುದರಿಂದ ಜನ ಖಾಲಿ ಕೊಡಗಳನ್ನು ಹಿಡಿದು ಸಾಲುಗಟ್ಟಲೇ ನಿಲ್ಲುವ ದಶ್ಯ ಸಾಮಾನ್ಯವಾಗಿದೆ.<br /> <br /> ಇನ್ನು ಚಿಕ್ಕಮಳಗಾವಿ ಹಾಗೂ ಗಂಜಿಹಾಳ ಗ್ರಾಮಗಳ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಇಲ್ಲಿ ಯೂ ನೀರಿನ ಮೂಲ ಇಲ್ಲದ ಕಾರಣ ಈ ಗ್ರಾಮಗಳ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.<br /> <br /> ಬೇಸಿಗೆಯಲ್ಲಿ ಯಾವುದೇ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತದಿಂದ ಅಗತ್ಯ ಅನುದಾನ ಬಿಡುಗಡೆಯಾಗಿದೆ. ನೀರಿನ ಸಮಸ್ಯೆ ನಿಗಿಸುವ ನಿಟ್ಟಿನಲ್ಲಿ ಎಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಆಡಳಿತ ಹೇಳುತ್ತಿದೆ. ಆದರೆ ನದಿ ದಡದಲ್ಲಿ ರುವ ಈ ಗ್ರಾಮಗಳಲ್ಲಿ ಉಂಟಾದ ತೀವ್ರ ನೀರಿನ ಸಮಸ್ಯೆ ನಿವಾರಣೆ ಏನು ಕ್ರಮ ಕೈಗೊಂಡಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡಲಸಂಗಮ:</strong> ಮಲಪ್ರಭಾ ನದಿಯನ್ನು ಒಡಲಲ್ಲಿಯೇ ತುಂಬಿಕೊಂಡಿರುವ ಖೈರವಾಡಗಿ, ಪಾಪಥನಾಳ, ಹಿರೇಮಳಗಾವಿ, ಚಿಕ್ಕಮಳಗಾವಿ ಹಾಗೂ ಗಂಜಿಹಾಳ ಗ್ರಾಮದ ಜನರು ಕಳೆದ ಎರಡು ತಿಂಗಳುಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಇದಕ್ಕೆ ಪರಿಹಾರ ಕಲ್ಪಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿದ್ದಾರೆ.<br /> <br /> ಈ ಗ್ರಾಮಗಳಿಗೆ ಅಧಿಕಾರಿಗಳು ಸಮರ್ಪಕ ಕುಡಿಯುವ ನೀರಿನ ಯೋಜನೆಯನ್ನು ರೂಪಿಸದ ಕಾರಣ ಮಲಪ್ರಭೆ ನದಿಯಲ್ಲಿನ ನೀರೇ ಇಲ್ಲಿಯ ಜನರಿಗೆ ಮೂಲ ಆಧಾರವಾಗಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ನದಿ ಸಂಪೂರ್ಣ ಬತ್ತಿದ ಪರಿಣಾಮ ಗ್ರಾಮಸ್ಥರು ಬೊಗಸೆ ನೀರಿಗಾಗಿ ದಿನವಿಡೀ ಪರದಾಡಬೇಕಿದೆ.<br /> <br /> ಖೈರವಾಡಗಿ ಹಾಗೂ ಪಾಪಥನಾಳ ಗ್ರಾಮದಲ್ಲಿ ಯವಾಗಲೋ ಕೊರೆಯಲಾದ ಕೊಳವೆ ಬಾವಿಗಳು ಸಮರ್ಪಕ ದುರಸ್ತಿ ಇಲ್ಲದೇ ಈಗ ಅವುಗಳೆಲ್ಲ ಕೆಟ್ಟು ನಿಂತಿವೆ. ಪಕ್ಕದಲ್ಲಿ ಇರುವ ಮಲಪ್ರಭೆ ನದಿಯಲ್ಲಿ ಆಳದವರೆಗೆ ಒರತಿ ತೋಡಿದರೂ ನೀರು ಬರದ ಕಾರಣ ಈ ಗ್ರಾಮಗಳಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಗಂಜಿಹಾಳ ಸಮಿಪ ಬಾಗಲಕೋಟೆ ರಸ್ತೆಯಲ್ಲಿರುವ ಕೊಳವೆ ಬಾವಿಯಿಂದ ಟ್ರ್ಯಾಕ್ಟರ್ ಮೂಲಕವೇ ದಿನನಿತ್ಯ ಕುಡಿಯಲು ನೀರು ತರಬೇಕು. ಈ ಗ್ರಾಮಗಳಲ್ಲಿನ ಜಾನುವಾರುಗಳಿಗೆ ಗ್ರಾಮದಿಂದ ದೂರದಲ್ಲಿ ಮಲಪ್ರಭೆ ನದಿಯಲ್ಲಿ ಇರುವ ತೆಗ್ಗಿನಲ್ಲಿ ನಿಂತ ಮಲಿನ ನೀರೇ ಗತಿಯಾಗಿದೆ.<br /> <br /> ಜಿಲ್ಲಾ ಪಂಚಾಯಿತಿ ಮೂಲಕ ಕಿರು ನೀರು ಯೋಜನೆಯಡಿ ಹಿರೇಮಳಗಾವಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು 2007ರಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದರೆ, ಈ ಯೋಜನೆಗೆ ಹಣ ಖರ್ಚು ಮಾಡಲಾಯಿತೇ ಹೊರತು ಈ ಯೋಜನೆಯಿಂದ ಗ್ರಾಮಕ್ಕೆ ಒಂದು ದಿನವೂ ನೀರು ಬರಲಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.<br /> <br /> 1994ರಲ್ಲಿ ಡೆನಿಡಾ ಯೊಜನೆಯಡಿ ಮಲಪ್ರಭಾ ನದಿಯಲ್ಲಿ ನಿರ್ಮಿಸಿದ ಜಾಕವೆಲ್ ಮೂಲಕ ಇಂದಿಗೂ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಜಾಕವೆಲ್ನಲ್ಲಿ ತುಂಬಿದ ಹೂಳಿನಿಂದ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಸರಬರಾಜು ಮಾಡುವ ನೀರು ಅರ್ಧ ಗಂಟೆ ಕೂಡಾ ಬರುವುದಿಲ್ಲ. ಮೇಲಾಗಿ ಈ ನೀರು ಕುಡಿಯಲು ಯೋಗ್ಯವಿಲ್ಲ.<br /> <br /> ಒರತಿ ನೀರೇ ಗತಿ: ಹಿರೇಮಳಗಾವಿ ಗ್ರಾಮದ ಜನರಿಗೆ ಕುಡಿಯಲು ಒರತಿ ನೀರೇ ಗತಿಯಾಗಿದೆ. ಗ್ರಾಮದಿಂದ ಸುಮಾರು ದೂರದಲ್ಲಿರುವ ಮಲಪ್ರಭೆ ನದಿಯಲ್ಲಿ ತೋಡಲಾದ ಒಂದೆರಡು ಒರತಿಗಳಲ್ಲಿ ಮಾತ್ರ ಸಣ್ಣ ಪ್ರಮಾಣದಲ್ಲಿ ನೀರಿನ ಸೆಲೆ ಬರುತ್ತಿದ್ದು, ಈ ನೀರಿಗಾಗಿ ಮನೆ ಮಂದಿಯೆಲ್ಲ ನಿತ್ಯ ನೀರಿಗಾಗಿಯೇ ಅಲೆಯಬೇಕಿದೆ. ಒಂದು ಕೊಡ ನೀರು ತುಂಬಲು ಕನಿಷ್ಠ ಅರ್ಧ ಗಂಟೆ ಸಮಯ ಬೇಕಾಗಿರುವುದರಿಂದ ಜನ ಖಾಲಿ ಕೊಡಗಳನ್ನು ಹಿಡಿದು ಸಾಲುಗಟ್ಟಲೇ ನಿಲ್ಲುವ ದಶ್ಯ ಸಾಮಾನ್ಯವಾಗಿದೆ.<br /> <br /> ಇನ್ನು ಚಿಕ್ಕಮಳಗಾವಿ ಹಾಗೂ ಗಂಜಿಹಾಳ ಗ್ರಾಮಗಳ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಇಲ್ಲಿ ಯೂ ನೀರಿನ ಮೂಲ ಇಲ್ಲದ ಕಾರಣ ಈ ಗ್ರಾಮಗಳ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.<br /> <br /> ಬೇಸಿಗೆಯಲ್ಲಿ ಯಾವುದೇ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತದಿಂದ ಅಗತ್ಯ ಅನುದಾನ ಬಿಡುಗಡೆಯಾಗಿದೆ. ನೀರಿನ ಸಮಸ್ಯೆ ನಿಗಿಸುವ ನಿಟ್ಟಿನಲ್ಲಿ ಎಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಆಡಳಿತ ಹೇಳುತ್ತಿದೆ. ಆದರೆ ನದಿ ದಡದಲ್ಲಿ ರುವ ಈ ಗ್ರಾಮಗಳಲ್ಲಿ ಉಂಟಾದ ತೀವ್ರ ನೀರಿನ ಸಮಸ್ಯೆ ನಿವಾರಣೆ ಏನು ಕ್ರಮ ಕೈಗೊಂಡಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>