<p>ಬೀಳಗಿ: ಸಚಿವ ಮುರುಗೇಶ ನಿರಾಣಿ ಭಾನುವಾರ ಪಟ್ಟಣದ ನೀಲಕಂಠೇಶ್ವರ ದೇವಾಲಯ, ಬೀರೇಶ್ವರ ದೇವಾಲಯ, ಮರಗಮ್ಮ ದೇವಾಲಯಗಳಲ್ಲಿ ಜನಸಂಪರ್ಕ ಸಭೆ ನಡೆಸಿದರು.<br /> <br /> ಪಟ್ಟಣ ಪಂಚಾಯಿತಿಯ ಕಾರ್ಯವೈಖರಿಯ ಬಗ್ಗೆ, ಕಳಪೆ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರಿಂದ ಖುದ್ದಾಗಿ ತಾವೇ ಪರಿಶೀಲಿಸಲು ಬಂದಿದ್ದಾಗಿ ಸಚಿವರು ತಿಳಿಸಿದರು.<br /> <br /> ಪಟ್ಟಣ ಪಂಚಾಯಿತಿ ನೀರು ಸರಬರಾಜು ಕಾರ್ಯದಲ್ಲಿ ವ್ಯತ್ಯಯ ಉಂಟಾಗಿದೆ. ಇದಕ್ಕಾಗಿ ಜಾಕ್ವೆಲ್ನಲ್ಲಿಯ ಹಳೆಯ ವಿದ್ಯುತ್ ಮೋಟಾರುಗಳನ್ನು ತಕ್ಷಣವೇ ಬದಲಾಯಿಸಿ, ಹೊಸ ವಿದ್ಯುತ್ ಮೋಟಾರ್ಗಳನ್ನು ಕೂಡಿಸಿ ನೀರಿನ ಪೂರೈಕೆ ಸಮರ್ಪಕವಾಗಿ ನಡೆಯುವಂತೆ ಅವರು ಸೂಚಿಸಿದರು. <br /> <br /> ಮುಂದಿನ 25 ವರ್ಷಗಳ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ರೂ.25ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವು ಎಂದರು. <br /> <br /> ರೂ.16ಕೋಟಿ ವೆಚ್ಚದಲ್ಲಿ ಪಟ್ಟಣದ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.<br /> ಈಗಾಗಲೇ ಪಟ್ಟಣ ಪಂಚಾಯಿತಿಗೆ ಮಂಜೂರಾದ ರೂ.5ಕೋಟಿ ಹಣದಲ್ಲಿ ಪುರಸಭಾ ಭವನಕ್ಕೆ ರೂ.1.5ಕೋಟಿ, ನದಿಯಿಂದ ಪೈಪ್ಲೈನ್ಗಾಗಿ ರೂ.2.5ಕೋಟಿ, ಪಟ್ಟಣದಲ್ಲಿಯ ಹಳೇ ಬಾವಿಗಳ ಹೂಳೆತ್ತಲು ರೂ.1.5ಕೋಟಿ ತೆಗೆದಿರಿಸಲಾಗಿದೆ ಎಂದರು. <br /> <br /> ಪಡಿತರ ಚೀಟಿಗಳ ಮನವಿಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕೇವಲ ಒಂದು ತಿಂಗಳೊಳಗಾಗಿ ಹೊಸ ಪಡಿತರ ಚೀಟಿಗಳನ್ನು ವಿತರಿಸಿ ಹಳೆಯ ಚೀಟಿಗಳನ್ನು ಹಿಂಪಡೆಯಲಾಗುವದೆಂದು ಹೇಳಿದರು.<br /> <br /> ಪಟ್ಟಣದ ಸಮಸ್ಯೆಗಳ ಕುರಿತು ನಾಗರಿಕರು ಪಟ್ಟಿ ಮಾಡಿಕೊಟ್ಟಲ್ಲಿ ಹಂತಹಂತವಾಗಿ ಅವುಗಳ ಪರಿಹಾರಕ್ಕಾಗಿ ಯತ್ನಿಸುವುದಾಗಿ ಭರವಸೆ ನೀಡಿದರಿ. <br /> <br /> ತಹಸೀಲ್ದಾರ ಎಲ್.ಬಿ.ಕುಲಕರ್ಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಉಗ್ರಾಣ, ಸದಸ್ಯರಾದ ಅಜೀಜ ಭಾಯಿಸರ್ಕಾರ, ಮುತ್ತು ಮೋದಿ, ರೇಣುಕಾ ಬುಡ್ಡರ, ಅನಿಲ ದೇಶಪಾಂಡೆ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಆರ್.ನಿರಾಣಿ, ಎಸ್.ಎಂ.ಕಟಗೇರಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀಳಗಿ: ಸಚಿವ ಮುರುಗೇಶ ನಿರಾಣಿ ಭಾನುವಾರ ಪಟ್ಟಣದ ನೀಲಕಂಠೇಶ್ವರ ದೇವಾಲಯ, ಬೀರೇಶ್ವರ ದೇವಾಲಯ, ಮರಗಮ್ಮ ದೇವಾಲಯಗಳಲ್ಲಿ ಜನಸಂಪರ್ಕ ಸಭೆ ನಡೆಸಿದರು.<br /> <br /> ಪಟ್ಟಣ ಪಂಚಾಯಿತಿಯ ಕಾರ್ಯವೈಖರಿಯ ಬಗ್ಗೆ, ಕಳಪೆ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರಿಂದ ಖುದ್ದಾಗಿ ತಾವೇ ಪರಿಶೀಲಿಸಲು ಬಂದಿದ್ದಾಗಿ ಸಚಿವರು ತಿಳಿಸಿದರು.<br /> <br /> ಪಟ್ಟಣ ಪಂಚಾಯಿತಿ ನೀರು ಸರಬರಾಜು ಕಾರ್ಯದಲ್ಲಿ ವ್ಯತ್ಯಯ ಉಂಟಾಗಿದೆ. ಇದಕ್ಕಾಗಿ ಜಾಕ್ವೆಲ್ನಲ್ಲಿಯ ಹಳೆಯ ವಿದ್ಯುತ್ ಮೋಟಾರುಗಳನ್ನು ತಕ್ಷಣವೇ ಬದಲಾಯಿಸಿ, ಹೊಸ ವಿದ್ಯುತ್ ಮೋಟಾರ್ಗಳನ್ನು ಕೂಡಿಸಿ ನೀರಿನ ಪೂರೈಕೆ ಸಮರ್ಪಕವಾಗಿ ನಡೆಯುವಂತೆ ಅವರು ಸೂಚಿಸಿದರು. <br /> <br /> ಮುಂದಿನ 25 ವರ್ಷಗಳ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ರೂ.25ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವು ಎಂದರು. <br /> <br /> ರೂ.16ಕೋಟಿ ವೆಚ್ಚದಲ್ಲಿ ಪಟ್ಟಣದ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.<br /> ಈಗಾಗಲೇ ಪಟ್ಟಣ ಪಂಚಾಯಿತಿಗೆ ಮಂಜೂರಾದ ರೂ.5ಕೋಟಿ ಹಣದಲ್ಲಿ ಪುರಸಭಾ ಭವನಕ್ಕೆ ರೂ.1.5ಕೋಟಿ, ನದಿಯಿಂದ ಪೈಪ್ಲೈನ್ಗಾಗಿ ರೂ.2.5ಕೋಟಿ, ಪಟ್ಟಣದಲ್ಲಿಯ ಹಳೇ ಬಾವಿಗಳ ಹೂಳೆತ್ತಲು ರೂ.1.5ಕೋಟಿ ತೆಗೆದಿರಿಸಲಾಗಿದೆ ಎಂದರು. <br /> <br /> ಪಡಿತರ ಚೀಟಿಗಳ ಮನವಿಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕೇವಲ ಒಂದು ತಿಂಗಳೊಳಗಾಗಿ ಹೊಸ ಪಡಿತರ ಚೀಟಿಗಳನ್ನು ವಿತರಿಸಿ ಹಳೆಯ ಚೀಟಿಗಳನ್ನು ಹಿಂಪಡೆಯಲಾಗುವದೆಂದು ಹೇಳಿದರು.<br /> <br /> ಪಟ್ಟಣದ ಸಮಸ್ಯೆಗಳ ಕುರಿತು ನಾಗರಿಕರು ಪಟ್ಟಿ ಮಾಡಿಕೊಟ್ಟಲ್ಲಿ ಹಂತಹಂತವಾಗಿ ಅವುಗಳ ಪರಿಹಾರಕ್ಕಾಗಿ ಯತ್ನಿಸುವುದಾಗಿ ಭರವಸೆ ನೀಡಿದರಿ. <br /> <br /> ತಹಸೀಲ್ದಾರ ಎಲ್.ಬಿ.ಕುಲಕರ್ಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಉಗ್ರಾಣ, ಸದಸ್ಯರಾದ ಅಜೀಜ ಭಾಯಿಸರ್ಕಾರ, ಮುತ್ತು ಮೋದಿ, ರೇಣುಕಾ ಬುಡ್ಡರ, ಅನಿಲ ದೇಶಪಾಂಡೆ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಆರ್.ನಿರಾಣಿ, ಎಸ್.ಎಂ.ಕಟಗೇರಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>