<p><strong>ಬಾಗಲಕೋಟೆ</strong>: ಕಲಾವಿದರ ಕುಟುಂಬವೊಂದು ಹೊಟ್ಟೆ ಪಾಡಿಗಾಗಿ ಬಾಗಲಕೋಟೆ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಬೀದಿಯಲ್ಲಿ ನೃತ್ಯ ಮಾಡುತ್ತಾ, ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿರುವುದನ್ನು ನೋಡಿದರೆ ಎಂಹವರಿಗೂ ಅನುಕಂಪ ಮೂಡದಿರದು.<br /> <br /> ಮೈಸೂರು ಜಿಲ್ಲೆಯ ಕೆ.ಆರ್.ನಗರದ ಸಾತಿಗ್ರಾಮದವರಾದ ಈ ಕಲಾವಿದ ಕುಟುಂಬ, ಬಾಗಲಕೋಟೆ ನಗರದ ಹಳೆಯ ನಗರವನದ ಬಳಿ ಇರುವ ತಂಗುದಾಣದಲ್ಲಿ ಇದೀಗ ವಾಸ್ತವ್ಯ ಹೂಡಿದೆ.<br /> <br /> ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆ ತಮ್ಮ ಸರಕು ಸರಂಜಾಮು ತೆಗೆದುಕೊಂಡು ವಿವಿಧ ಬಡಾವಣೆಗಳಲ್ಲಿ ಚಲನಚಿತ್ರದ ಹಾಡುಗಳು, ಚಿತ್ರದ ದೃಶ್ಯಗಳನ್ನು ಅಭಿನಯಿಸುವ ಮೂಲಕ ಜನರಿಗೆ ಮನರಂಜನೆ ನೀಡಿ, ಅವರು ಕೊಟ್ಟ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. <br /> <br /> ಮಹಿಳೆಯರು, ಮಕ್ಕಳನ್ನು ಕಟ್ಟಿಕೊಂಡು ತಮ್ಮ ಕುಟುಂಬ ಸಮೇತ ಅಲೆಮಾರಿ ಜೀವನ ಸಾಗಿಸುತ್ತಾ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿಸಂಚಾರ ಮಾಡಿ ತಮ್ಮ ಕಲೆಯನ್ನು ತೋರ್ಪಡಿಸುತ್ತಿದ್ದಾರೆ. <br /> <br /> ಪ್ರತಿದಿನ ಸಂಜೆಯಾಗುತ್ತಿದ್ದಂತೆ ದೇವಾಲಯ, ಸಮುದಾಯ ಭವನ, ಪ್ರಮುಖ ವೃತ್ತಗಳು, ಗ್ರಾಮದ ಅಗಸಿ ಮುಂಭಾಗದಲ್ಲಿ ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಸ್ಥಳೀಯರನ್ನು ಗಮನಸೆಳೆಯುತ್ತಿದ್ದಾರೆ.<br /> `ನಮ್ಮ ನೃತ್ಯ ನೋಡಿದ ಜನತೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಇದೇ ನಮ್ಮ ಉಪಜೀವನಕ್ಕೆ ದಾರಿಯಾಗುತ್ತದೆ~ ಎಂದು ಕಲಾವಿದೆ ನಿರ್ಮಲಾ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಅಲೆಮಾರಿ ಕಲಾವಿದರಾಗಿರುವ ನಮಗೆ ಸಮುದಾಯ ಭವನ, ದೇವಾಲಯ ಸೇರಿದಂತೆ ಮತ್ತಿತರ ಕಡೆ ನಾವು ಆಶ್ರಯ ಪಡೆದುಕೊಳ್ಳುತ್ತೇವೆ~ ಎಂದರು. <br /> <br /> `ಮೈಸೂರಿನ ವೆಂಕಟೇಶ ನಾಟಕ ಕಂಪೆನಿ ಮಂಜುನಾಥ ನಾಟಕ ಕಂಪೆನಿ ಸೇರಿದಂತೆ ವಿವಿಧ ಕಂಪೆನಿ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದೇನೆ. `ಸತಿ ಸಾವಿತ್ರಿ~, `ಹೇಮರಡ್ಡಿ ಮಲ್ಲಮ್ಮ~, `ಹರಿಶ್ಚಂದ್ರ~ ಸೇರಿದಂತೆ ವಿವಿಧ ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದೇನೆ~ ಎಂದು ನಿರ್ಮಾಲ ಹೇಳಿದರು. <br /> <br /> `ವಂಶಪರಂಪರೆಯಾಗಿ ಕಲೆಯನ್ನು ಬೆಳೆಸಿಕೊಂಡು ಬಂದಿರುವ ನಮ್ಮ ಕುಟುಂಬದವರು ಅಲೆಮಾರಿಯಾಗಿ ಕಲೆಯನ್ನು ತೋರ್ಪಡಿಸಿಕೊಂಡು ಉಪಜೀವನ ಸಾಗಿಸುತ್ತಿದ್ದರು. ತಾತನ ಕಾಲದಲ್ಲಿ ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡುವದರೊಂದಿಗೆ ಉಪಜೀವನ ಸಾಗಿಸುತ್ತಿದ್ದರು~ ಎಂದರು. <br /> <br /> `ಇಂದಿನ ಆಧುನಿಕ ಯುಗದ ಭರಾಟೆಯಿಂದಾಗಿ ನಾಟಕ ಕಂಪೆನಿಗಳು ನಷ್ಟ ಹೊಂದಿ ತೊಂದರೆ ಪಡೆಯುವಂತಾಗಿದೆ. ಇದರಿಂದಾಗಿ ಊರು ಊರು ಅಲೆಯುತ್ತಾ ನೆರಳು ಸಿಕ್ಕಲ್ಲಿ ಮನೆಯನ್ನಾಗಿ ಮಾಡಿಕೊಂಡು ಸಂಜೆ ನೃತ್ಯ ಮಾಡಿ ಬಂದ ಹಣದಲ್ಲೇ ಕುಟುಂಬದ ಎಲ್ಲ ಸದಸ್ಯರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ~ ಎಂದು ಕಲಾವಿದ ಮೋಹನ `ಪತ್ರಿಕೆ~ಗೆ ತಿಳಿಸಿದರು. <br /> <br /> ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಕಲಾವಿದರಿಗೆ ದೊರಕುವ ಯಾವುದೇ ಮಾಸಾಶನವನ್ನು ಪಡೆದುಕೊಂಡಿಲ್ಲ ಎಂದು ತಿಳಿಸಿದರು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಕಲಾವಿದರ ಕುಟುಂಬವೊಂದು ಹೊಟ್ಟೆ ಪಾಡಿಗಾಗಿ ಬಾಗಲಕೋಟೆ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಬೀದಿಯಲ್ಲಿ ನೃತ್ಯ ಮಾಡುತ್ತಾ, ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿರುವುದನ್ನು ನೋಡಿದರೆ ಎಂಹವರಿಗೂ ಅನುಕಂಪ ಮೂಡದಿರದು.<br /> <br /> ಮೈಸೂರು ಜಿಲ್ಲೆಯ ಕೆ.ಆರ್.ನಗರದ ಸಾತಿಗ್ರಾಮದವರಾದ ಈ ಕಲಾವಿದ ಕುಟುಂಬ, ಬಾಗಲಕೋಟೆ ನಗರದ ಹಳೆಯ ನಗರವನದ ಬಳಿ ಇರುವ ತಂಗುದಾಣದಲ್ಲಿ ಇದೀಗ ವಾಸ್ತವ್ಯ ಹೂಡಿದೆ.<br /> <br /> ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆ ತಮ್ಮ ಸರಕು ಸರಂಜಾಮು ತೆಗೆದುಕೊಂಡು ವಿವಿಧ ಬಡಾವಣೆಗಳಲ್ಲಿ ಚಲನಚಿತ್ರದ ಹಾಡುಗಳು, ಚಿತ್ರದ ದೃಶ್ಯಗಳನ್ನು ಅಭಿನಯಿಸುವ ಮೂಲಕ ಜನರಿಗೆ ಮನರಂಜನೆ ನೀಡಿ, ಅವರು ಕೊಟ್ಟ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. <br /> <br /> ಮಹಿಳೆಯರು, ಮಕ್ಕಳನ್ನು ಕಟ್ಟಿಕೊಂಡು ತಮ್ಮ ಕುಟುಂಬ ಸಮೇತ ಅಲೆಮಾರಿ ಜೀವನ ಸಾಗಿಸುತ್ತಾ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿಸಂಚಾರ ಮಾಡಿ ತಮ್ಮ ಕಲೆಯನ್ನು ತೋರ್ಪಡಿಸುತ್ತಿದ್ದಾರೆ. <br /> <br /> ಪ್ರತಿದಿನ ಸಂಜೆಯಾಗುತ್ತಿದ್ದಂತೆ ದೇವಾಲಯ, ಸಮುದಾಯ ಭವನ, ಪ್ರಮುಖ ವೃತ್ತಗಳು, ಗ್ರಾಮದ ಅಗಸಿ ಮುಂಭಾಗದಲ್ಲಿ ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಸ್ಥಳೀಯರನ್ನು ಗಮನಸೆಳೆಯುತ್ತಿದ್ದಾರೆ.<br /> `ನಮ್ಮ ನೃತ್ಯ ನೋಡಿದ ಜನತೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಇದೇ ನಮ್ಮ ಉಪಜೀವನಕ್ಕೆ ದಾರಿಯಾಗುತ್ತದೆ~ ಎಂದು ಕಲಾವಿದೆ ನಿರ್ಮಲಾ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಅಲೆಮಾರಿ ಕಲಾವಿದರಾಗಿರುವ ನಮಗೆ ಸಮುದಾಯ ಭವನ, ದೇವಾಲಯ ಸೇರಿದಂತೆ ಮತ್ತಿತರ ಕಡೆ ನಾವು ಆಶ್ರಯ ಪಡೆದುಕೊಳ್ಳುತ್ತೇವೆ~ ಎಂದರು. <br /> <br /> `ಮೈಸೂರಿನ ವೆಂಕಟೇಶ ನಾಟಕ ಕಂಪೆನಿ ಮಂಜುನಾಥ ನಾಟಕ ಕಂಪೆನಿ ಸೇರಿದಂತೆ ವಿವಿಧ ಕಂಪೆನಿ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದೇನೆ. `ಸತಿ ಸಾವಿತ್ರಿ~, `ಹೇಮರಡ್ಡಿ ಮಲ್ಲಮ್ಮ~, `ಹರಿಶ್ಚಂದ್ರ~ ಸೇರಿದಂತೆ ವಿವಿಧ ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದೇನೆ~ ಎಂದು ನಿರ್ಮಾಲ ಹೇಳಿದರು. <br /> <br /> `ವಂಶಪರಂಪರೆಯಾಗಿ ಕಲೆಯನ್ನು ಬೆಳೆಸಿಕೊಂಡು ಬಂದಿರುವ ನಮ್ಮ ಕುಟುಂಬದವರು ಅಲೆಮಾರಿಯಾಗಿ ಕಲೆಯನ್ನು ತೋರ್ಪಡಿಸಿಕೊಂಡು ಉಪಜೀವನ ಸಾಗಿಸುತ್ತಿದ್ದರು. ತಾತನ ಕಾಲದಲ್ಲಿ ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡುವದರೊಂದಿಗೆ ಉಪಜೀವನ ಸಾಗಿಸುತ್ತಿದ್ದರು~ ಎಂದರು. <br /> <br /> `ಇಂದಿನ ಆಧುನಿಕ ಯುಗದ ಭರಾಟೆಯಿಂದಾಗಿ ನಾಟಕ ಕಂಪೆನಿಗಳು ನಷ್ಟ ಹೊಂದಿ ತೊಂದರೆ ಪಡೆಯುವಂತಾಗಿದೆ. ಇದರಿಂದಾಗಿ ಊರು ಊರು ಅಲೆಯುತ್ತಾ ನೆರಳು ಸಿಕ್ಕಲ್ಲಿ ಮನೆಯನ್ನಾಗಿ ಮಾಡಿಕೊಂಡು ಸಂಜೆ ನೃತ್ಯ ಮಾಡಿ ಬಂದ ಹಣದಲ್ಲೇ ಕುಟುಂಬದ ಎಲ್ಲ ಸದಸ್ಯರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ~ ಎಂದು ಕಲಾವಿದ ಮೋಹನ `ಪತ್ರಿಕೆ~ಗೆ ತಿಳಿಸಿದರು. <br /> <br /> ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಕಲಾವಿದರಿಗೆ ದೊರಕುವ ಯಾವುದೇ ಮಾಸಾಶನವನ್ನು ಪಡೆದುಕೊಂಡಿಲ್ಲ ಎಂದು ತಿಳಿಸಿದರು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>