ದೀಪಾವಳಿ ಹಬ್ಬದ ಮುನ್ನ ಸುಮಾರು 5 ಎಕರೆ ಮೆಕ್ಕೆಜೋಳವನ್ನು ಕೊಯ್ಲು ಮಾಡಿ ಅಲ್ಲಲ್ಲಿ ರಾಶಿಯಾಗಿ ಹೊಲದಲ್ಲಿಯೇ ದುಂಡು ಹಾಕಲಾಗಿತ್ತು. ಹಬ್ಬ ಇದುದ್ದರಿಂದ 7 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಕೊಯ್ಲು ಮಾಡದೆ ಹಾಗೆಯೇ ಉಳಿಸಿಕೊಂಡಿದ್ದರು. ಆದರೆ, ಬುಧವಾರ ಕೂಲಿ ಕಾರ್ಮಿಕರನ್ನು ಜೋಡಿಸಿಕೊಂಡು ಗುರುವಾರ ಹೊಲಕ್ಕೆ ಹೋಗುವ ಮೊದಲೇ ಹೊಲಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದೆ.