‘ಬಳ್ಳಾರಿ ತಾಲ್ಲೂಕಿನ ಕುಡತಿನಿ, ಹರಗಿನದೋಣಿ, ಜಾನೆಕುಂಟೆ, ವೇಣಿ ವೀರಾಪುರ, ಕೊಳಗಲ್ಲು, ಕುರುಗೋಡು ತಾಲ್ಲೂಕಿನ ಸಿದ್ದಮ್ಮನಹಳ್ಳಿ, ಯರಂಗಳಿ ಗ್ರಾಮಗಳಲ್ಲಿ ‘ಆರ್ಸೆಲರ್ ಮಿತ್ತಲ್’, ಬ್ರಹ್ಮಿಣಿ ಸ್ಟೀಲ್ಸ್ (ಉತ್ತಮ ಗಾಲ್ವ), ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ಎಂಡಿಸಿ) ಕೈಗಾರಿಕೆ ಉದ್ದೇಶಕ್ಕೆ 12,414.85 ಎಕರೆ ಪ್ರದೇಶ 13 ವರ್ಷಗಳ ಹಿಂದೆ ಸ್ವಾಧೀನ ಪಡಿಸಿಕೊಂಡಿತು. ಆದರೆ, ಕೈಗಾರಿಕೆಗಳು ನಿರ್ಮಾಣಗೊಂಡಿಲ್ಲ. ರೈತರಿಗೆ ಪರಿಹಾರವೂ ಸಿಕ್ಕಿಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.