ಮೂಲತಃ ಬಣಜಿಗರಾದ ಅವರು 2018ರ ಜನವರಿ 24ರಂದು ಜೈನ ಮುನಿಯಾಗಿ ದೀಕ್ಷೆ ಪಡೆದ ದಿನದಿಂದ ಇಲ್ಲಿಯವರೆಗೆ ಅಂಬಿಲ್ ವ್ರತ ಆಚರಿಸುತ್ತಿದ್ದು, ಸಪ್ಪೆ ಊಟವನ್ನಷ್ಟೆ ಸೇವಿಸಿದ್ದಾರೆ. ಬೇಯಿಸಿದ ಹೆಸರು ಬೇಳೆ, ಅನ್ನವಷ್ಟೇ ಅವರ ಆಹಾರ. ಅದೂ ಒಂದು ಹೊತ್ತು ಮಾತ್ರ ಸೇವನೆ. ಈ ನಡುವೆ ಅವರು31 ದಿನಗಳಅವಧಿಯ ಮಾಸಕ್ಷಮಣ್ ವ್ರತ (ಮೃತ್ಯುಂಜಯ ವ್ರತ)ವನ್ನು ಆಚರಿಸಿದ್ದಾರೆ. ಈ ಅವಧಿಯಲ್ಲಿಅವರು ದಿನವೂ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಕುದಿಸಿ ಆರಿಸಿದ ಬಿಸಿ ನೀರನ್ನಷ್ಟೆ ಸೇವಿಸಿದ್ದಾರೆ. ದಿನವೂ ಕನಿಷ್ಠ ಎರಡು ಲೀಟರ್ ನೀರು ಸೇವಿಸಿ ಮೌನವಾಗಿರುವ ಈ ವ್ರತ ಮಂಗಳವಾರಕ್ಕೆ ಮುಗಿಯಲಿದೆ. ನೇಮಿನಾಥರು ದೀಕ್ಷೆ ಪಡೆದ ದಿನವೇ ಈ ವ್ರತ ಮುಕ್ತಾಯವಾಗಲಿದೆ.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಜೈನರ ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ಮೋಜಿನ ಜೀವನ ನಡೆಸುತ್ತಿದ್ದೆ.ಡಾಬಾಗಳೇ ನನ್ನ ಮನೆಯಾಗಿದ್ದವು. ದಿನವೂ ನೂರಾರು ರೂಪಾಯಿ ಖರ್ಚು ಮಾಡುತ್ತಿದ್ದೆ.ಅನೈತಿಕ ಸಂಬಂಧದಿಂದ ನನ್ನ ಗೆಳೆಯನೊಬ್ಬನ ಜೀವನ ದುರಂತ ಕಂಡ ಬಳಿಕ ನನ್ನಲ್ಲಿ ಜಿಗುಪ್ಸೆ ಮೂಡಿತ್ತು. ಈರ್ ಚಂದ್ರ ಸುರ್ಜಿ ದೀಕ್ಷೆ ನೀಡಿದರು’ ಎಂದು ಸ್ಮರಿಸಿದರು.