<p><strong>ಕಂಪ್ಲಿ</strong>: ಇಲ್ಲಿಯ ಕರ್ನಾಟಕ ಸೇವಾ ಸ್ನೇಹಿತರ ಸಮಿತಿ ಪದಾಧಿಕಾರಿಗಳು ಹೊಸ ವರ್ಷಾಚರಣೆ ನಿಮಿತ್ತ ಸತ್ಯನಾರಾಯಣಪೇಟೆ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಂಗವಿಕಲರಿಗೆ ನೆರವು ನೀಡಿದರು.</p>.<p>ಪ್ರಭುಕ್ಯಾಂಪ್ನ ಅಂಗವಿಕಲ ಕಿರಣ್ ಅವರಿಗೆ ₹5,500 ಮೌಲ್ಯದ ವೀಲ್ ಚೇರ್ ವಿತರಣೆ ಮಾಡುವುದರ ಜೊತೆಗೆ ಸ್ವಾವಲಂಬನೆಗಾಗಿ ನಡೆಸುತ್ತಿದ್ದ ಈತನ ಅಂಗಡಿಯನ್ನು ದುರಸ್ತಿ ಮಾಡಿಸಿ ಮಾರಾಟಕ್ಕಾಗಿ ₹ 5 ಸಾವಿರ ಮೌಲ್ಯದ ತಿಂಡಿ ತಿನಿಸುಗಳನ್ನು ವಿತರಿಸಿದರು.</p>.<p>₹2 ಸಾವಿರ ವೆಚ್ಚದಲ್ಲಿ ಅಂಗವಿಕಲ ದೇವದಾಸಿ ಮಹಿಳೆ ಲಕ್ಷ್ಮಿಗೆ ಎರಡು ಊರುಗೋಲು ಮತ್ತು ಚಿಕ್ಕಜಾಯಿಗ ನೂರು ಗ್ರಾಮದ ಅಂದ ಮಲ್ಲೇಶ್ಗೆ ವಾಕಿಂಗ್ ಸ್ಟಿಕ್ ನೀಡಿ ಮಾದರಿಯಾದರು.</p>.<p>ಸಮಾರಂಭದಲ್ಲಿ ಕಂಪ್ಲಿಯ ಆಯುಷ್ ವೈದ್ಯ ಡಾ. ಮಲ್ಲೇಶಪ್ಪ ಮಾತನಾಡಿದರು. ಕರ್ನಾಟಕ ಸೇವಾ ಸ್ನೇಹಿತರ ಸಮಿತಿ ಮುಖಂಡ ಪೇಂಟರ್ ನೀಲಪ್ಪ ಮಾತನಾಡಿ, ‘ಕಳೆದ ಮೂರು ವರ್ಷಗಳಿಂದ ಅಂಗವಿಕಲರಿಗಾಗಿ ತಮ್ಮ ಸಮಿತಿ ವತಿಯಿಂದ ಸಹಾಯ ಹಸ್ತ ನೀಡಲಾಗುತ್ತಿದೆ’ ಎಂದು ಹೇಳಿದರು.</p>.<p>ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ವೀಣಾ ಗೋಣಿ ಉಪನ್ಯಾಸ, ಮಲ್ಲಿಕಾರ್ಜುನ, ಮುರುಗೇಶ್ ತಂಡ ಪ್ರದರ್ಶಿಸಿದ ಕಿರು ನಾಟಕ ಹಾಗೂ ಕಾವ್ಯ, ವೈಷ್ಣವಿ ಅವರ ಹಾಡು ಜನಮನಸೂರೆಗೊಂಡಿತು.</p>.<p>ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ಚನ್ನಬಸವರಾಜ, ಬಸವರಾಜ, ಹೊಸಪೇಟೆ ಡಾನ್ ಬೋಸ್ಕೊ ಕ್ರೀಮ್ ವಿಭಾಗದ ಎಂ.ಡಿ ಕ್ಯಾಂಪ್ ಅನಿತಾ, ಸ್ನೇಹಿತರ ಸಮಿತಿಯ ಪ್ರಿಂಟಿಂಗ್ ಪ್ರೆಸ್ ಬಿ. ಬಸವರಾಜ, ಸ್ಪ್ರೇ ಪೇಂಟರ್ ಬಸವರಾಜ, ರೆಗ್ಯುಲೇಟರ್ ಕ್ಯಾಂಪ್ ಅಶೋಕ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ</strong>: ಇಲ್ಲಿಯ ಕರ್ನಾಟಕ ಸೇವಾ ಸ್ನೇಹಿತರ ಸಮಿತಿ ಪದಾಧಿಕಾರಿಗಳು ಹೊಸ ವರ್ಷಾಚರಣೆ ನಿಮಿತ್ತ ಸತ್ಯನಾರಾಯಣಪೇಟೆ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಂಗವಿಕಲರಿಗೆ ನೆರವು ನೀಡಿದರು.</p>.<p>ಪ್ರಭುಕ್ಯಾಂಪ್ನ ಅಂಗವಿಕಲ ಕಿರಣ್ ಅವರಿಗೆ ₹5,500 ಮೌಲ್ಯದ ವೀಲ್ ಚೇರ್ ವಿತರಣೆ ಮಾಡುವುದರ ಜೊತೆಗೆ ಸ್ವಾವಲಂಬನೆಗಾಗಿ ನಡೆಸುತ್ತಿದ್ದ ಈತನ ಅಂಗಡಿಯನ್ನು ದುರಸ್ತಿ ಮಾಡಿಸಿ ಮಾರಾಟಕ್ಕಾಗಿ ₹ 5 ಸಾವಿರ ಮೌಲ್ಯದ ತಿಂಡಿ ತಿನಿಸುಗಳನ್ನು ವಿತರಿಸಿದರು.</p>.<p>₹2 ಸಾವಿರ ವೆಚ್ಚದಲ್ಲಿ ಅಂಗವಿಕಲ ದೇವದಾಸಿ ಮಹಿಳೆ ಲಕ್ಷ್ಮಿಗೆ ಎರಡು ಊರುಗೋಲು ಮತ್ತು ಚಿಕ್ಕಜಾಯಿಗ ನೂರು ಗ್ರಾಮದ ಅಂದ ಮಲ್ಲೇಶ್ಗೆ ವಾಕಿಂಗ್ ಸ್ಟಿಕ್ ನೀಡಿ ಮಾದರಿಯಾದರು.</p>.<p>ಸಮಾರಂಭದಲ್ಲಿ ಕಂಪ್ಲಿಯ ಆಯುಷ್ ವೈದ್ಯ ಡಾ. ಮಲ್ಲೇಶಪ್ಪ ಮಾತನಾಡಿದರು. ಕರ್ನಾಟಕ ಸೇವಾ ಸ್ನೇಹಿತರ ಸಮಿತಿ ಮುಖಂಡ ಪೇಂಟರ್ ನೀಲಪ್ಪ ಮಾತನಾಡಿ, ‘ಕಳೆದ ಮೂರು ವರ್ಷಗಳಿಂದ ಅಂಗವಿಕಲರಿಗಾಗಿ ತಮ್ಮ ಸಮಿತಿ ವತಿಯಿಂದ ಸಹಾಯ ಹಸ್ತ ನೀಡಲಾಗುತ್ತಿದೆ’ ಎಂದು ಹೇಳಿದರು.</p>.<p>ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ವೀಣಾ ಗೋಣಿ ಉಪನ್ಯಾಸ, ಮಲ್ಲಿಕಾರ್ಜುನ, ಮುರುಗೇಶ್ ತಂಡ ಪ್ರದರ್ಶಿಸಿದ ಕಿರು ನಾಟಕ ಹಾಗೂ ಕಾವ್ಯ, ವೈಷ್ಣವಿ ಅವರ ಹಾಡು ಜನಮನಸೂರೆಗೊಂಡಿತು.</p>.<p>ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ಚನ್ನಬಸವರಾಜ, ಬಸವರಾಜ, ಹೊಸಪೇಟೆ ಡಾನ್ ಬೋಸ್ಕೊ ಕ್ರೀಮ್ ವಿಭಾಗದ ಎಂ.ಡಿ ಕ್ಯಾಂಪ್ ಅನಿತಾ, ಸ್ನೇಹಿತರ ಸಮಿತಿಯ ಪ್ರಿಂಟಿಂಗ್ ಪ್ರೆಸ್ ಬಿ. ಬಸವರಾಜ, ಸ್ಪ್ರೇ ಪೇಂಟರ್ ಬಸವರಾಜ, ರೆಗ್ಯುಲೇಟರ್ ಕ್ಯಾಂಪ್ ಅಶೋಕ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>