‘ಅಕ್ರಮ ಮರಳು ದಂಧೆಕೋರರ ಬಳಿ ತಹಶೀಲ್ದಾರರು ವ್ಯವಹಾರ ಕುದರಿಸಿಕೊಂಡಿದ್ದಲ್ಲದೇ ಅಧಿಕೃತ ಪರವಾನಗಿ ಹೊಂದಿದ ಮರಳು ಸಾಗಣೆದಾರರಿಗೂ ಲಂಚದ ಬೇಡಿಕೆ ಇರಿಸಿದ್ದಾರೆ. ನಿಯಮಾನುಸಾರ ಮರಳು ಸಾಗಣೆ ಮಾಡುವವರಿಗೆ ತಹಶೀಲ್ದಾರ್ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ, ವಾರ, ತಿಂಗಳ ಲೆಕ್ಕದಲ್ಲಿ ತಹಶೀಲ್ದಾರ್ ಲಂಚ ಕೇಳಿರುವ ಆಡಿಯೋ ಸಂಭಾಷಣೆ ಸಮೇತ ಕಂದಾಯ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಶನಿವಾರ ದೂರು ನೀಡಿದ್ದರು.