ಸುಪ್ರಭಾತ, ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಕೃಷ್ಣಾರತಿ, ಮಹಾಭಿಷೇಕಗಳನ್ನು ಮಾಡಿ ರಾಮ ನಾಮ ಜಪಿಸಲಾಯಿತು. ರಾಮಮಂದಿರಗಳಲ್ಲಿ ಶಾಸಕ ಭರತ್ರೆಡ್ಡಿ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಮೋತಿ ವೃತ್ತದಲ್ಲಿರುವ ಶ್ರೀರಾಮ ಮಂದಿರ 250 ವರ್ಷ ಇತಿಹಾಸ ಹೊಂದಿದ್ದು, ‘ಭಕ್ತರ ಇಷ್ಟಾರ್ಥ ಸಿದ್ಧಿಯಾಗಿದೆ’ ಎಂದು ಅರ್ಚಕರು ತಿಳಿಸಿದರು.