<p><strong>ಬಳ್ಳಾರಿ:</strong> ಬಳ್ಳಾರಿಯಿಂದ ಗುಜರಾತ್ಗೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ 523 ಚೀಲ ಅನ್ನಭಾಗ್ಯ ಅಕ್ಕಿಯನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ. </p>.<p>ಗುರುವಾರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಉಪ ವಿಭಾಗಾಧಿಕಾರಿ(ಎ.ಸಿ) ರಾಜೇಶ್ ಎಚ್.ಡಿ ನೇತೃತ್ವದ ತಂಡ ಅಕ್ಕಿಯ ಜತೆಗೆ ಒಂದು ಲಾರಿ, ಎರಡು ಪಿಕಪ್ ವಾಹನಗಳುನ್ನೂ ವಶಕ್ಕೆ ಪಡೆದಿದ್ದಾರೆ. ಜತೆಗೆ, ಒಬ್ಬ ಚಾಲಕ ಐವರು ಹಮಾಲಿಗಳನ್ನೂ ಬಂಧಿಸಲಾಗಿದೆ. </p>.<p>ನ್ಯಾಯಬೆಲೆ ಅಗಂಡಿಗಳಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿಯನ್ನು ಪಿಕಪ್ ವಾಹನಗಳ ಮೂಲಕ ನಗರದ ಎಸ್ಎಲ್ಎನ್ ಮಾಲ್ ಬಳಿ ಇರುವ ಪುಲ್ಲಯ್ಯ ಕಾಂಪೌಂಡ್ ಆವರಣಕ್ಕೆ ಸಾಗಿಸಿ, ಅಲ್ಲಿ ಲಾರಿಗೆ ತುಂಬಲಾಗುತ್ತಿತ್ತು. ಈ ಕುರಿತ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ರಾತ್ರಿ 2 ಗಂಟೆಯಲ್ಲಿ ದಾಳಿ ಮಾಡಿದ್ದಾರೆ. </p>.<p>ಈ ವೇಳೆ 523 ಚೀಲ ಅಕ್ಕಿ ಅಧಿಕಾರಿಗಳ ತಂಡಕ್ಕೆ ಸಿಕ್ಕಿದೆ. ದಾಳಿ ವೇಳೆ ಐವರು ಹಮಾಲಿಗಳು, ಒಬ್ಬ ಚಾಲಕ ಪರಾರಿಯಾಗಿದ್ದಾನೆ ಎಂದು ಎಸಿ ರಾಜೇಶ್ ಎಚ್.ಡಿ ತಿಳಿಸಿದ್ದಾರೆ.</p>.<p>ಅಕ್ಕಿ ಚೀಲಗಳನ್ನು ಅಕ್ರಮವಾಗಿ ಗುಜರಾತ್ಗೆ ತೆಗೆದುಕೊಂಡು ಹೋಗಲು ತಯಾರಿ ನಡೆಸಲಾಗಿತ್ತು ಎಂದು ವಿಚಾರಣೆ ವೇಳೆ ಬಂಧಿತ ಗುಜರಾತ್ ಮೂಲಕ ಲಾರಿ ಚಾಲಕ ತಿಳಿಸಿದ್ದಾನೆ. ಶ್ರೀಧರ್ ಎಂಬ ವ್ಯಕ್ತಿ ಅಕ್ಕಿಯನ್ನು ಸಂಗ್ರಹಿಸಿ, ಅದನ್ನು ಸಾಗಿಸಲು ಗುಜರಾತ್ನಿಂದ ಲಾರಿ ಕರೆಸಿಕೊಂಡಿದ್ದ ಎಂದು ಹೇಳಲಾಗಿದೆ. </p>.<p>ಈ ಕುರಿತು ಬಳ್ಳಾರಿಯ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. </p>.<p>ವಿಡಿಯೊ ಹರಿದಾಟ: ಅಕ್ಕಿ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಮೆಚ್ಚುಗೆ ವ್ಯಕ್ತವಾಗಿದೆ. ಅದರೂ, ಕೂಲಿಕಾರರನ್ನು ಬಂಧಿಸುವುದು ಬಿಟ್ಟು, ದಂಧೆಕೋರರನ್ನು ಬಂಧಿಸಿ ಎಂದು ಕೆಲವರು ತರಾಟೆಗೂ ತೆಗೆದುಕೊಂಡಿದ್ದಾರೆ. </p>
<p><strong>ಬಳ್ಳಾರಿ:</strong> ಬಳ್ಳಾರಿಯಿಂದ ಗುಜರಾತ್ಗೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ 523 ಚೀಲ ಅನ್ನಭಾಗ್ಯ ಅಕ್ಕಿಯನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ. </p>.<p>ಗುರುವಾರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಉಪ ವಿಭಾಗಾಧಿಕಾರಿ(ಎ.ಸಿ) ರಾಜೇಶ್ ಎಚ್.ಡಿ ನೇತೃತ್ವದ ತಂಡ ಅಕ್ಕಿಯ ಜತೆಗೆ ಒಂದು ಲಾರಿ, ಎರಡು ಪಿಕಪ್ ವಾಹನಗಳುನ್ನೂ ವಶಕ್ಕೆ ಪಡೆದಿದ್ದಾರೆ. ಜತೆಗೆ, ಒಬ್ಬ ಚಾಲಕ ಐವರು ಹಮಾಲಿಗಳನ್ನೂ ಬಂಧಿಸಲಾಗಿದೆ. </p>.<p>ನ್ಯಾಯಬೆಲೆ ಅಗಂಡಿಗಳಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿಯನ್ನು ಪಿಕಪ್ ವಾಹನಗಳ ಮೂಲಕ ನಗರದ ಎಸ್ಎಲ್ಎನ್ ಮಾಲ್ ಬಳಿ ಇರುವ ಪುಲ್ಲಯ್ಯ ಕಾಂಪೌಂಡ್ ಆವರಣಕ್ಕೆ ಸಾಗಿಸಿ, ಅಲ್ಲಿ ಲಾರಿಗೆ ತುಂಬಲಾಗುತ್ತಿತ್ತು. ಈ ಕುರಿತ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ರಾತ್ರಿ 2 ಗಂಟೆಯಲ್ಲಿ ದಾಳಿ ಮಾಡಿದ್ದಾರೆ. </p>.<p>ಈ ವೇಳೆ 523 ಚೀಲ ಅಕ್ಕಿ ಅಧಿಕಾರಿಗಳ ತಂಡಕ್ಕೆ ಸಿಕ್ಕಿದೆ. ದಾಳಿ ವೇಳೆ ಐವರು ಹಮಾಲಿಗಳು, ಒಬ್ಬ ಚಾಲಕ ಪರಾರಿಯಾಗಿದ್ದಾನೆ ಎಂದು ಎಸಿ ರಾಜೇಶ್ ಎಚ್.ಡಿ ತಿಳಿಸಿದ್ದಾರೆ.</p>.<p>ಅಕ್ಕಿ ಚೀಲಗಳನ್ನು ಅಕ್ರಮವಾಗಿ ಗುಜರಾತ್ಗೆ ತೆಗೆದುಕೊಂಡು ಹೋಗಲು ತಯಾರಿ ನಡೆಸಲಾಗಿತ್ತು ಎಂದು ವಿಚಾರಣೆ ವೇಳೆ ಬಂಧಿತ ಗುಜರಾತ್ ಮೂಲಕ ಲಾರಿ ಚಾಲಕ ತಿಳಿಸಿದ್ದಾನೆ. ಶ್ರೀಧರ್ ಎಂಬ ವ್ಯಕ್ತಿ ಅಕ್ಕಿಯನ್ನು ಸಂಗ್ರಹಿಸಿ, ಅದನ್ನು ಸಾಗಿಸಲು ಗುಜರಾತ್ನಿಂದ ಲಾರಿ ಕರೆಸಿಕೊಂಡಿದ್ದ ಎಂದು ಹೇಳಲಾಗಿದೆ. </p>.<p>ಈ ಕುರಿತು ಬಳ್ಳಾರಿಯ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. </p>.<p>ವಿಡಿಯೊ ಹರಿದಾಟ: ಅಕ್ಕಿ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಮೆಚ್ಚುಗೆ ವ್ಯಕ್ತವಾಗಿದೆ. ಅದರೂ, ಕೂಲಿಕಾರರನ್ನು ಬಂಧಿಸುವುದು ಬಿಟ್ಟು, ದಂಧೆಕೋರರನ್ನು ಬಂಧಿಸಿ ಎಂದು ಕೆಲವರು ತರಾಟೆಗೂ ತೆಗೆದುಕೊಂಡಿದ್ದಾರೆ. </p>