ಮೇಲೆ ಎಂ.ಸ್ಯಾಂಡ್ ಒಳಗೆ ಮರಳು!
ಬಳ್ಳಾರಿ ನಗರದ ಕೌಲ್ ಬಜಾರ್ನಲ್ಲಿ ಶನಿವಾರ ಲಾರಿಯೊಂದನ್ನು ತಡೆದ ಗಣಿ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ವಶಕ್ಕೆ ಪಡೆದರು. ಮೇಲೆ ಎಂ.ಸ್ಯಾಂಡ್ ಪದರ ಹಾಕಿ ಒಳಗೆ ಮರಳು ಸಾಗಿಸುತ್ತಿದ್ದದ್ದು ಈ ವೇಳೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಹನವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ದಾಳಿಯಲ್ಲಿ ಒಟ್ಟು 4 ಟನ್ ಮರಳು ಸಿಕ್ಕಿದ್ದು ₹32320 ದಂಡ ವಿಧಿಸಲಾಗಿದೆ. ‘ನಿರಂತರ ದಾಳಿ’ ಇನ್ನು ದಾಳಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ದ್ವಿತೀಯಾ ಇ.ಸಿ ‘ಅಕ್ರಮ ಗಣಿಗಾರಿಕೆ ವಿರುದ್ಧ ನಿರಂತರ ದಾಳಿಗಳನ್ನು ನಡೆಸಲಾಗುತ್ತಿದೆ. ಅದರ ಭಾಗವಾಗಿ ಈ ದಾಳಿಗಳು ನಡೆದಿವೆ. ಖನಿಜಕ್ಕೆ ಸಂಬಂಧಿಸಿದ ಯಾವುದೇ ಅಕ್ರಮಕ್ಕೂ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದ್ದಾರೆ.