<p><strong>ಬಳ್ಳಾರಿ</strong>: ರಾಯಚೂರು, ಬಳ್ಳಾರಿ ಕೊಪ್ಪಳ, ವಿಜಯನಗರ ಹಾಲು ಒಕ್ಕೂಟವು (ರಾಬಕೊವಿ) ಈ ವರ್ಷ 25 ಸಾವಿರ ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ₹2.37 ಕೋಟಿಯನ್ನು ಒಕ್ಕೂಟ ಮೀಸಲಿಟ್ಟಿದೆ. ಒಕ್ಕೂಟ ಕಳೆದ ವರ್ಷವೂ ಇಷ್ಟೇ ಪ್ರಮಾಣದ ವಿಮೆ ಗುರಿಯನ್ನು ಹಾಕಿಕೊಂಡಿತ್ತು. </p>.<p>ಒಕ್ಕೂಟದ ವ್ಯಾಪ್ತಿಗೆ ಒಳಪಡುವ ನಾಲ್ಕು ಜಿಲ್ಲೆಗಳ ಪೈಕಿ ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಿನ ಹಾಲಿನ ಸಂಘಗಳಿವೆ. ಹೀಗಾಗಿ ಈ ಜಿಲ್ಲೆಯಲ್ಲಿ 11,400 ಸಾವಿರ ರಾಸುಗಳಿಗೆ ವಿಮೆ ಮಾಡಿಸುವ ಗುರಿ ಇದೆ. ಕೊಪ್ಪಳದಲ್ಲಿ 8,000 ರಾಸುಗಳಿಗೆ, ರಾಯಚೂರಿನಲ್ಲಿ 3,750 ಮತ್ತು ಬಳ್ಳಾರಿಯಲ್ಲಿ 1,900 ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಲಾಗಿದೆ. </p>.<p>2023–24ನೇ ಸಾಲಿನಲ್ಲಿ ಒಕ್ಕೂಟದ ವ್ಯಾಪ್ತಿಯ ವಿಜಯನಗರದಲ್ಲಿ 8,000, ಕೊಪ್ಪಳದಲ್ಲಿ 3,250, ರಾಯಚೂರಿನಲ್ಲಿ 1,005, ಬಳ್ಳಾರಿಯಲ್ಲಿ 330 ಸೇರಿ ಒಟ್ಟು 12,549 ರಾಸುಗಳಿಗೆ ವಿಮೆ ಮಾಡಿಸಲಾಗಿತ್ತು. 60:40 ಅನುಪಾತದಲ್ಲಿ ವಿಮೆ ಪ್ರೀಮಿಯಮ್ ಪಾವತಿ ಮಾಡಲಾಗಿತ್ತು. ಅದರಂತೆ ಒಕ್ಕೂಟ ₹1.03 ಕೋಟಿ ಕೊಟ್ಟಿದ್ದರೆ, ಒಟ್ಟಾರೆ ರೈತರು ₹8 ಲಕ್ಷ ಪಾವತಿ ಮಾಡಿದ್ದರು. </p>.<p>ಈ ಬಾರಿ ವಿಮೆ ಪ್ರೀಮಿಯಂ ಮೊತ್ತವನ್ನು ಶೇ 4.72ಕ್ಕೆ ನಿಗದಿ ಮಾಡಲಾಗಿದೆ. ಅಂದರೆ 60 ಸಾವಿರದ ಒಂದು ಹಸು/ಎಮ್ಮೆಗೆ ರೈತರು ₹2,832 ಪ್ರೀಮಿಯಂ ಆಗಲಿದೆ ಎಂದು ಒಕ್ಕೂಟ ತಿಳಿಸಿದೆ. </p>.<p>ಕಳೆದ ವರ್ಷ ಹೆಚ್ಚಿದ್ದ ರಾಸುಗಳ ಸಾವು: ರಾಜ್ಯದಲ್ಲಿ ಕಳೆದ ವರ್ಷ ರಾಸುಗಳನ್ನು ಚರ್ಮಗಂಟು ರೋಗ ತೀವ್ರವಾಗಿ ಬಾಧಿಸಿತು. ರೋಗದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ರಾಸುಗಳು ಮೃತಪಟ್ಟಿದ್ದವು. ಕೃಷಿ ಜತೆಗೆ ಹೈನುಗಾರಿಕೆಯನ್ನು ಉಪಕಸುಬಾಗಿಸಿಕೊಂಡಿರುವ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರದಲ್ಲಿ ಜನ ಈ ಚರ್ಮಗಂಟು ರೋಗದಿಂದ ತತ್ತರಿಸಿದರು. ರಾಸುಗಳ ಸಾವಿನ ಪ್ರಮಾಣ ಸಹ ಹೆಚ್ಚಿತ್ತು. ಕಳೆದ ವರ್ಷಕ್ಕೆ ಹೋಲಿಸಿದೆ ಈ ಬಾರಿ ರೋಗ ರಾಸುಗಳನ್ನು ಕಾಡುತ್ತಿಲ್ಲ. ಆದ್ದರಿಂದ ರಾಸುಗಳ ಮರಣ ಪ್ರಮಾಣ ಕಡಿಮೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ </p>.<p><strong>ಹಣ ಮೀಸಲು:</strong> ರಾಸುಗಳು ಅನಾರೋಗ್ಯದಿಂದ ಅಥವಾ ಇತ್ಯಾದಿ ಕಾರಣದಿಂದ ಮೃತಪಟ್ಟರೆ ರೈತರು ತೀವ್ರ ನಷ್ಟ ಅನುಭವಿಸುತ್ತಾರೆ. ರೈತರು ನಷ್ಟಕ್ಕೆ ಒಳಗಾಗಬಾರದು ಎಂದು ರಾಬಕೊವಿ ರಾಸುಗಳಿಗೆ ವಿಮೆ ಮಾಡಿಸುತ್ತಿದೆ. ಪ್ರತಿ ವರ್ಷ ವಿಮೆಗಾಗಿಯೇ ಇಂತಿಷ್ಟು ಹಣವನ್ನು ಒಕ್ಕೂಟ ಮೀಸಲಿಡುತ್ತಿದೆ. ಕಳೆದ ವರ್ಷ ವಿಮೆಗಾಗಿಯೇ ₹ 2.37 ಕೋಟಿ ಮೀಸಲಿಡಲಾಗಿತ್ತು. ₹ 1.03 ಕೋಟಿಯನ್ನು ಒಕ್ಕೂಟ ನೀಡಿದ್ದರೆ, ಉಳಿದ ₹ 80 ಲಕ್ಷವನ್ನು ರೈತರು ಭರಿಸಿದ್ದರು.</p>.<p>ಹಾಲು ಕೊಡುವ ರಾಸುಗಳ ಸಾವಿನಿಂದ ರೈತರ ಆರ್ಥಿಕ ಮೂಲಗಳಿಗೆ ಪೆಟ್ಟು ಬೀಳುತ್ತದೆ. ಈ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಕೋಚಿಮುಲ್ ರಾಸುಗಳಿಗೆ ವಿಮೆ ಮಾಡಿಸಲು ಕ್ರಮವಹಿಸುತ್ತಿದೆ. ಇದರಿಂದ ಹೈನುಗಾರರಿಗೆ ಅನುಕೂಲವಾಗಲಿದೆ ಎಂದು ರಾಬಕೊವಿ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ. ಮಹೇಶ್ ಲಕ್ಕಣ್ಣವರ್ ಅಭಿಪ್ರಾಯಪಟ್ಟಿದ್ದಾರೆ.</p>.<p>803 ರಾಸುಗಳ ಸಾವು 2022–23ನೇ ಸಾಲಿನಲ್ಲಿ ಒಕ್ಕೂಟ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ 803 ರಾಸುಗಳು ಮೃತಪಟ್ಟಿದ್ದವು. ಈ ಪೈಕಿ 635 ರಾಸುಗಳ ಮಾಲೀಕರಿಗೆ ವಿಮೆ ಪರಿಹಾರವಾಗಿ ಒಟ್ಟು ₹3.49 ಕೋಟಿ ಬಂದಿದೆ. ಇನ್ನು 168 ರಾಸುಗಳ ಮಾಲೀಕರಿಗೆ ಹಣ ಬಿಡುಗಡೆಯಾಗಬೇಕು. ರಾಸುಗಳು ಮೃತಪಟ್ಟ ನಂತರ ವಿಮೆ ಬರಲು 3 ತಿಂಗಳು ಬೇಕು. ಹಿಗಾಗಿಯೇ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ನೆರವಾಗುವ ವಿಮೆ ರಾಸುಗಳು ಹಠಾತ್ ಸಾವಿಗೀಡಾದರೆ ಹೈನುಗಾರರಿಗೆ ನಷ್ಟವಾಗುತ್ತದೆ. ಪ್ರಸ್ತುತ ಹಸು/ ಎಮ್ಮೆ ಬೆಲೆ ಸರಾಸರಿ 50 ರಿಂದ 1 ಲಕ್ಷವಿದೆ. ಇಷ್ಟು ನಷ್ಟವನ್ನು ಹೈನುಗಾರರು ತಡೆಯಲಾರರು. ಇದರಿಂದ ಪಾರಾಗಲು ವಿಮೆ ಮಾಡಿಸಿಕೊಳ್ಳಬೇಕು. ಇನ್ನೊಂದು ಹಸು ತೊಗೆದುಕೊಳ್ಳಲು ಆರ್ಥಿಕವಾಗಿ ಅವರಿಗೆ ಶಕ್ತಿ ತುಂಬ ವಿಮೆ ಸಹಕಾರಿ. ರೈತರು ಆರ್ಥಿಕವಾಗಿ ಕುಸಿಯಬಾರದು ಎಂಬುದು ಒಕ್ಕೂಟದ ಉದ್ದೇಶ.</p><p><strong>–ಜಿ. ಪೀರ್ಯ ನಾಯಕ್ ವ್ಯವಸ್ಥಾಪಕ ನಿರ್ದೇಶಕರು ರಾಬಕೊವಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ರಾಯಚೂರು, ಬಳ್ಳಾರಿ ಕೊಪ್ಪಳ, ವಿಜಯನಗರ ಹಾಲು ಒಕ್ಕೂಟವು (ರಾಬಕೊವಿ) ಈ ವರ್ಷ 25 ಸಾವಿರ ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ₹2.37 ಕೋಟಿಯನ್ನು ಒಕ್ಕೂಟ ಮೀಸಲಿಟ್ಟಿದೆ. ಒಕ್ಕೂಟ ಕಳೆದ ವರ್ಷವೂ ಇಷ್ಟೇ ಪ್ರಮಾಣದ ವಿಮೆ ಗುರಿಯನ್ನು ಹಾಕಿಕೊಂಡಿತ್ತು. </p>.<p>ಒಕ್ಕೂಟದ ವ್ಯಾಪ್ತಿಗೆ ಒಳಪಡುವ ನಾಲ್ಕು ಜಿಲ್ಲೆಗಳ ಪೈಕಿ ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಿನ ಹಾಲಿನ ಸಂಘಗಳಿವೆ. ಹೀಗಾಗಿ ಈ ಜಿಲ್ಲೆಯಲ್ಲಿ 11,400 ಸಾವಿರ ರಾಸುಗಳಿಗೆ ವಿಮೆ ಮಾಡಿಸುವ ಗುರಿ ಇದೆ. ಕೊಪ್ಪಳದಲ್ಲಿ 8,000 ರಾಸುಗಳಿಗೆ, ರಾಯಚೂರಿನಲ್ಲಿ 3,750 ಮತ್ತು ಬಳ್ಳಾರಿಯಲ್ಲಿ 1,900 ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಲಾಗಿದೆ. </p>.<p>2023–24ನೇ ಸಾಲಿನಲ್ಲಿ ಒಕ್ಕೂಟದ ವ್ಯಾಪ್ತಿಯ ವಿಜಯನಗರದಲ್ಲಿ 8,000, ಕೊಪ್ಪಳದಲ್ಲಿ 3,250, ರಾಯಚೂರಿನಲ್ಲಿ 1,005, ಬಳ್ಳಾರಿಯಲ್ಲಿ 330 ಸೇರಿ ಒಟ್ಟು 12,549 ರಾಸುಗಳಿಗೆ ವಿಮೆ ಮಾಡಿಸಲಾಗಿತ್ತು. 60:40 ಅನುಪಾತದಲ್ಲಿ ವಿಮೆ ಪ್ರೀಮಿಯಮ್ ಪಾವತಿ ಮಾಡಲಾಗಿತ್ತು. ಅದರಂತೆ ಒಕ್ಕೂಟ ₹1.03 ಕೋಟಿ ಕೊಟ್ಟಿದ್ದರೆ, ಒಟ್ಟಾರೆ ರೈತರು ₹8 ಲಕ್ಷ ಪಾವತಿ ಮಾಡಿದ್ದರು. </p>.<p>ಈ ಬಾರಿ ವಿಮೆ ಪ್ರೀಮಿಯಂ ಮೊತ್ತವನ್ನು ಶೇ 4.72ಕ್ಕೆ ನಿಗದಿ ಮಾಡಲಾಗಿದೆ. ಅಂದರೆ 60 ಸಾವಿರದ ಒಂದು ಹಸು/ಎಮ್ಮೆಗೆ ರೈತರು ₹2,832 ಪ್ರೀಮಿಯಂ ಆಗಲಿದೆ ಎಂದು ಒಕ್ಕೂಟ ತಿಳಿಸಿದೆ. </p>.<p>ಕಳೆದ ವರ್ಷ ಹೆಚ್ಚಿದ್ದ ರಾಸುಗಳ ಸಾವು: ರಾಜ್ಯದಲ್ಲಿ ಕಳೆದ ವರ್ಷ ರಾಸುಗಳನ್ನು ಚರ್ಮಗಂಟು ರೋಗ ತೀವ್ರವಾಗಿ ಬಾಧಿಸಿತು. ರೋಗದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ರಾಸುಗಳು ಮೃತಪಟ್ಟಿದ್ದವು. ಕೃಷಿ ಜತೆಗೆ ಹೈನುಗಾರಿಕೆಯನ್ನು ಉಪಕಸುಬಾಗಿಸಿಕೊಂಡಿರುವ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರದಲ್ಲಿ ಜನ ಈ ಚರ್ಮಗಂಟು ರೋಗದಿಂದ ತತ್ತರಿಸಿದರು. ರಾಸುಗಳ ಸಾವಿನ ಪ್ರಮಾಣ ಸಹ ಹೆಚ್ಚಿತ್ತು. ಕಳೆದ ವರ್ಷಕ್ಕೆ ಹೋಲಿಸಿದೆ ಈ ಬಾರಿ ರೋಗ ರಾಸುಗಳನ್ನು ಕಾಡುತ್ತಿಲ್ಲ. ಆದ್ದರಿಂದ ರಾಸುಗಳ ಮರಣ ಪ್ರಮಾಣ ಕಡಿಮೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ </p>.<p><strong>ಹಣ ಮೀಸಲು:</strong> ರಾಸುಗಳು ಅನಾರೋಗ್ಯದಿಂದ ಅಥವಾ ಇತ್ಯಾದಿ ಕಾರಣದಿಂದ ಮೃತಪಟ್ಟರೆ ರೈತರು ತೀವ್ರ ನಷ್ಟ ಅನುಭವಿಸುತ್ತಾರೆ. ರೈತರು ನಷ್ಟಕ್ಕೆ ಒಳಗಾಗಬಾರದು ಎಂದು ರಾಬಕೊವಿ ರಾಸುಗಳಿಗೆ ವಿಮೆ ಮಾಡಿಸುತ್ತಿದೆ. ಪ್ರತಿ ವರ್ಷ ವಿಮೆಗಾಗಿಯೇ ಇಂತಿಷ್ಟು ಹಣವನ್ನು ಒಕ್ಕೂಟ ಮೀಸಲಿಡುತ್ತಿದೆ. ಕಳೆದ ವರ್ಷ ವಿಮೆಗಾಗಿಯೇ ₹ 2.37 ಕೋಟಿ ಮೀಸಲಿಡಲಾಗಿತ್ತು. ₹ 1.03 ಕೋಟಿಯನ್ನು ಒಕ್ಕೂಟ ನೀಡಿದ್ದರೆ, ಉಳಿದ ₹ 80 ಲಕ್ಷವನ್ನು ರೈತರು ಭರಿಸಿದ್ದರು.</p>.<p>ಹಾಲು ಕೊಡುವ ರಾಸುಗಳ ಸಾವಿನಿಂದ ರೈತರ ಆರ್ಥಿಕ ಮೂಲಗಳಿಗೆ ಪೆಟ್ಟು ಬೀಳುತ್ತದೆ. ಈ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಕೋಚಿಮುಲ್ ರಾಸುಗಳಿಗೆ ವಿಮೆ ಮಾಡಿಸಲು ಕ್ರಮವಹಿಸುತ್ತಿದೆ. ಇದರಿಂದ ಹೈನುಗಾರರಿಗೆ ಅನುಕೂಲವಾಗಲಿದೆ ಎಂದು ರಾಬಕೊವಿ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ. ಮಹೇಶ್ ಲಕ್ಕಣ್ಣವರ್ ಅಭಿಪ್ರಾಯಪಟ್ಟಿದ್ದಾರೆ.</p>.<p>803 ರಾಸುಗಳ ಸಾವು 2022–23ನೇ ಸಾಲಿನಲ್ಲಿ ಒಕ್ಕೂಟ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ 803 ರಾಸುಗಳು ಮೃತಪಟ್ಟಿದ್ದವು. ಈ ಪೈಕಿ 635 ರಾಸುಗಳ ಮಾಲೀಕರಿಗೆ ವಿಮೆ ಪರಿಹಾರವಾಗಿ ಒಟ್ಟು ₹3.49 ಕೋಟಿ ಬಂದಿದೆ. ಇನ್ನು 168 ರಾಸುಗಳ ಮಾಲೀಕರಿಗೆ ಹಣ ಬಿಡುಗಡೆಯಾಗಬೇಕು. ರಾಸುಗಳು ಮೃತಪಟ್ಟ ನಂತರ ವಿಮೆ ಬರಲು 3 ತಿಂಗಳು ಬೇಕು. ಹಿಗಾಗಿಯೇ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ನೆರವಾಗುವ ವಿಮೆ ರಾಸುಗಳು ಹಠಾತ್ ಸಾವಿಗೀಡಾದರೆ ಹೈನುಗಾರರಿಗೆ ನಷ್ಟವಾಗುತ್ತದೆ. ಪ್ರಸ್ತುತ ಹಸು/ ಎಮ್ಮೆ ಬೆಲೆ ಸರಾಸರಿ 50 ರಿಂದ 1 ಲಕ್ಷವಿದೆ. ಇಷ್ಟು ನಷ್ಟವನ್ನು ಹೈನುಗಾರರು ತಡೆಯಲಾರರು. ಇದರಿಂದ ಪಾರಾಗಲು ವಿಮೆ ಮಾಡಿಸಿಕೊಳ್ಳಬೇಕು. ಇನ್ನೊಂದು ಹಸು ತೊಗೆದುಕೊಳ್ಳಲು ಆರ್ಥಿಕವಾಗಿ ಅವರಿಗೆ ಶಕ್ತಿ ತುಂಬ ವಿಮೆ ಸಹಕಾರಿ. ರೈತರು ಆರ್ಥಿಕವಾಗಿ ಕುಸಿಯಬಾರದು ಎಂಬುದು ಒಕ್ಕೂಟದ ಉದ್ದೇಶ.</p><p><strong>–ಜಿ. ಪೀರ್ಯ ನಾಯಕ್ ವ್ಯವಸ್ಥಾಪಕ ನಿರ್ದೇಶಕರು ರಾಬಕೊವಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>