<p><strong>ಕಂಪ್ಲಿ:</strong> ‘ಅಹಿಂಸೆಯ ಪ್ರತಿಪಾದಕ ಬುದ್ಧನ ಆದರ್ಶಗಳನ್ನು ಇಂದಿನ ಸಮಾಜದಲ್ಲಿ ಸಾಕಾರಗೊಳಿಸಬೇಕಿದೆ’ ಎಂದು ಕರ್ನಾಟಕ ಬೌದ್ಧ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸುಗ್ಗೇನಹಳ್ಳಿ ರಮೇಶ ತಿಳಿಸಿದರು.</p>.<p>ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬುದ್ಧ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಶಾಂತಿ, ಕರುಣೆ, ಪ್ರೀತಿಯನ್ನು ಜಗತ್ತಿಗೆ ಸಾರುತ್ತಿರುವ ಏಕೈಕ ಧರ್ಮ ಬೌದ್ಧ ಧರ್ಮ ಎಂದರು.</p>.<p>‘ಕಳೆದು ಹೋದ ಬುದ್ಧನನ್ನು ಅಂಬೇಡ್ಕರ್ ಪುನಃ ಭಾರತದಲ್ಲಿ ಬೆಳಗಿಸಿದರು. ಜಗತ್ತಿನ 28 ದೇಶಗಳು ಬುದ್ಧನ ತತ್ವಗಳನ್ನು ಅಳವಡಿಸಿಕೊಂಡಿದ್ದರಿಂದ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳಾಗಲು ಸಾಧ್ಯವಾಗಿವೆ’ ಎಂದು ತಿಳಿಸಿದರು.</p>.<p>‘ಬುದ್ಧನನ್ನು ಭಾರತದಲ್ಲಿ ತಪ್ಪಾಗಿ ಬಿಂಬಿಸಿ ಅವರ ತತ್ವಗಳನ್ನು ತಿರುಚುವ ಷಡ್ಯಂತ್ರ್ಯಗಳು ನಡೆಯುತ್ತಲೇ ಇವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಚೈತನ್ಯಾ ಎಸ್.ಎಸ್.ಳನ್ನು ಗೌರವಿಸಲಾಯಿತು. ನೂತನ ತಹಶೀಲ್ದಾರ್ ಜೂಗಲ ಮಂಜುನಾಯಕ, ವರ್ಗಾವಣೆಗೊಂಡ ತಹಶೀಲ್ದಾರ್ ಎಸ್. ಶಿವರಾಜ, ಪರಿಶಿಷ್ಟ ಜಾತಿ ಮುಖಂಡ ಕೆ. ಲಕ್ಷ್ಮಣ ಮಾತನಾಡಿದರು.</p>.<p>ಬೌದ್ಧ ಸಮಾಜದ ಪದಾಧಿಕಾರಿಗಳಾದ ಚನ್ನಬಸಪ್ಪ, ಪಿ.ಸಿ. ಅಂಜಿನಪ್ಪ, ಡಿ. ಮುನಿಸ್ವಾಮಿ, ಟಿ. ಶಿವಪ್ಪ, ಸಿ. ರುದ್ರಪ್ಪ, ಸಿ. ವೆಂಕಟೇಶ, ಕೆ. ಲಕ್ಷ್ಮಣ, ರವಿ ಮಣ್ಣೂರು, ಪಾಮಯ್ಯ ಶರಣರು, ಉಮೇಶ್, ಟಿ.ಎಚ್.ಎಂ. ರಾಜಕುಮಾರ್, ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ:</strong> ‘ಅಹಿಂಸೆಯ ಪ್ರತಿಪಾದಕ ಬುದ್ಧನ ಆದರ್ಶಗಳನ್ನು ಇಂದಿನ ಸಮಾಜದಲ್ಲಿ ಸಾಕಾರಗೊಳಿಸಬೇಕಿದೆ’ ಎಂದು ಕರ್ನಾಟಕ ಬೌದ್ಧ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸುಗ್ಗೇನಹಳ್ಳಿ ರಮೇಶ ತಿಳಿಸಿದರು.</p>.<p>ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬುದ್ಧ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಶಾಂತಿ, ಕರುಣೆ, ಪ್ರೀತಿಯನ್ನು ಜಗತ್ತಿಗೆ ಸಾರುತ್ತಿರುವ ಏಕೈಕ ಧರ್ಮ ಬೌದ್ಧ ಧರ್ಮ ಎಂದರು.</p>.<p>‘ಕಳೆದು ಹೋದ ಬುದ್ಧನನ್ನು ಅಂಬೇಡ್ಕರ್ ಪುನಃ ಭಾರತದಲ್ಲಿ ಬೆಳಗಿಸಿದರು. ಜಗತ್ತಿನ 28 ದೇಶಗಳು ಬುದ್ಧನ ತತ್ವಗಳನ್ನು ಅಳವಡಿಸಿಕೊಂಡಿದ್ದರಿಂದ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳಾಗಲು ಸಾಧ್ಯವಾಗಿವೆ’ ಎಂದು ತಿಳಿಸಿದರು.</p>.<p>‘ಬುದ್ಧನನ್ನು ಭಾರತದಲ್ಲಿ ತಪ್ಪಾಗಿ ಬಿಂಬಿಸಿ ಅವರ ತತ್ವಗಳನ್ನು ತಿರುಚುವ ಷಡ್ಯಂತ್ರ್ಯಗಳು ನಡೆಯುತ್ತಲೇ ಇವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಚೈತನ್ಯಾ ಎಸ್.ಎಸ್.ಳನ್ನು ಗೌರವಿಸಲಾಯಿತು. ನೂತನ ತಹಶೀಲ್ದಾರ್ ಜೂಗಲ ಮಂಜುನಾಯಕ, ವರ್ಗಾವಣೆಗೊಂಡ ತಹಶೀಲ್ದಾರ್ ಎಸ್. ಶಿವರಾಜ, ಪರಿಶಿಷ್ಟ ಜಾತಿ ಮುಖಂಡ ಕೆ. ಲಕ್ಷ್ಮಣ ಮಾತನಾಡಿದರು.</p>.<p>ಬೌದ್ಧ ಸಮಾಜದ ಪದಾಧಿಕಾರಿಗಳಾದ ಚನ್ನಬಸಪ್ಪ, ಪಿ.ಸಿ. ಅಂಜಿನಪ್ಪ, ಡಿ. ಮುನಿಸ್ವಾಮಿ, ಟಿ. ಶಿವಪ್ಪ, ಸಿ. ರುದ್ರಪ್ಪ, ಸಿ. ವೆಂಕಟೇಶ, ಕೆ. ಲಕ್ಷ್ಮಣ, ರವಿ ಮಣ್ಣೂರು, ಪಾಮಯ್ಯ ಶರಣರು, ಉಮೇಶ್, ಟಿ.ಎಚ್.ಎಂ. ರಾಜಕುಮಾರ್, ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>