<p><strong>ಅರಸೀಕೆರೆ</strong>: ಕಳೆದ ವರ್ಷ ಎಲೆಕೋಸು (ಕ್ಯಾಬೇಜ್) ಬೆಳೆದು ನಷ್ಟ ಅನುಭವಿಸಿದ್ದ ರೈತ ಪುನಃ ಈಗ ಅದನ್ನೇ ಬೆಳೆದು ಭರಪೂರ ಆದಾಯಗಳಿಸಿದ್ದಾರೆ.<br><br> ಹೋಬಳಿಯ ಜಂಗಮ ತುಂಬಿಗೆರೆ ಗ್ರಾಮದ ಮೇಘರಾಜಪ್ಪ ಅವರು ತಮ್ಮ ಎರಡು ಎಕರೆಯಲ್ಲಿ ಸುತ್ತಲೂ ತೆಂಗು ಹಾಕಿದ್ದಾರೆ. ಈ ಪೈಕಿ ಉಳಿದ ಭೂಮಿಯಲ್ಲಿ ಎಲೆಕೋಸು (ಕ್ಯಾಬೇಜ್) ಬೆಳೆದು ಉತ್ತಮ ಬೆಲೆಗೆ ಮಾರಾಟ ಮಾಡಿದ್ದಾರೆ.<br><br> ತೇವಾಂಶ ಕೊರತೆಯ ನಡುವೆಯೂ 30 ಟನ್ಗೂ ಹೆಚ್ಚು ಎಲೆಕೋಸು ಇಳುವರಿ ಬಂದಿದೆ. ಮೊದಲ ಹಂತದ 20 ಟನ್ ಕಟಾವಿಗೆ ಪ್ರತಿ ಕೆ.ಜಿ.ಗೆ ₹ 16 ದೊರಕಿದೆ. ಎರಡನೇ ಹಂತದ ಕಟಾವಿಗೆ ₹ 17 ದೊರಕಿದೆ. ಒಟ್ಟು 30 ಟನ್ಗೆ ₹ 4,90,000 ಆದಾಯ ದೊರಕಿದೆ.<br><br> ರೈತ ಮೇಘರಾಜಪ್ಪ ಕ್ಯಾಬೇಜ್ ಬೆಳೆಯಲು ಬೀಜ, ಗೊಬ್ಬರ, ಔಷಧ ಸೇರಿ ಒಟ್ಟು ₹ 50 ಸಾವಿರ ಖರ್ಚು ಮಾಡಿದ್ದಾರೆ. ಬೆಳೆದ ಬೆಳೆಯನ್ನು ದೂರದ ಕೊಲ್ಕೊತ್ತಾ, ಚೆನ್ನೈ, ಹೈದರಾಬಾದ್, ಕಲ್ಲಿಕೋಟೆ ಹಾಗೂ ಉತ್ತರ ಭಾರತದ ಪ್ರಮುಖ ನಗರಗಳ ವ್ಯಾಪಾರಿಗಳು ಇಲ್ಲಿಯೇ ಖರೀದಿಸಿ ಕೊಂಡೊಯ್ಯುವುದರಿಂದ ಸಾಗಣೆ ವೆಚ್ಚ ಉಳಿಯುತ್ತಿದೆ.<br><br> ‘ಕಳೆದ ವರ್ಷ ಎಲೆಕೋಸು ಬೆಲೆ ಕೆ.ಜಿಗೆ ₹ 1.5 ಕನಿಷ್ಠ ಬೆಲೆಗೆ ತಲುಪಿತ್ತು. ಕಟಾವು ಮಾಡುವ ಕೂಲಿಗೂ ಸಾಲುತ್ತಿರಲಿಲ್ಲ. ಬೀಜ, ಗೊಬ್ಬರದ ಖರ್ಚು ಬರುವುದು ಕನಸಿನ ಮಾತಾಗಿತ್ತು. ಆದ್ದರಿಂದ ಹೊಲದಲ್ಲಿಯೇ ಬೆಳೆಯನ್ನು ನಾಶ ಪಡಿಸಿದೆ.<br><br> ‘ಸದ್ಯ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರಿಂದ ಬೆಳೆದ ಎಲೆಕೋಸಿಗೂ ದರ ಬಂದಿದೆ. ಲಾಭ ನಷ್ಟದ ಲೆಕ್ಕ ಹಾಕದೇ, ಬೆಳೆ ಬೆಳೆದರೆ ಭೂ ತಾಯಿ ಕೈ ಹಿಡಿಯುತ್ತಾಳೆ. ಲಾಭವೂ ಕೈ ಸೇರುತ್ತದೆ’ ಎನ್ನುತ್ತಾರೆ ರೈತ ಮೇಘರಾಜಪ್ಪ.<br><br><br></p>.<p>ತಡ ಮುಂಗಾರು ಪ್ರವೇಶದಿಂದಾಗಿ ಎಲೆಕೋಸು ನಿರೀಕ್ಷಿತ ಪ್ರಮಾಣದ ಬಿತ್ತನೆ ಆಗಿಲ್ಲ. ಸಹಜವಾಗಿ ರೈತರಿಗೆ ಉತ್ತಮ ಬೆಲೆ ಲಭಿಸಿದೆ </p><p><strong>–ಜಯಸಿಂಹ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ</strong></p>.<p>ಎಲೆಕೋಸು ಉತ್ತಮ ಬೆಲೆ ಲಭಿಸಿದೆ. ಮಳೆ ವಿದ್ಯುತ್ ಸಮಸ್ಯೆಗಳಿಂದ ಇಳುವರಿ ಕುಂಠಿತಗೊಂಡಿದೆ</p><p><strong>–ಮೇಘರಾಜಪ್ಪ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ</strong>: ಕಳೆದ ವರ್ಷ ಎಲೆಕೋಸು (ಕ್ಯಾಬೇಜ್) ಬೆಳೆದು ನಷ್ಟ ಅನುಭವಿಸಿದ್ದ ರೈತ ಪುನಃ ಈಗ ಅದನ್ನೇ ಬೆಳೆದು ಭರಪೂರ ಆದಾಯಗಳಿಸಿದ್ದಾರೆ.<br><br> ಹೋಬಳಿಯ ಜಂಗಮ ತುಂಬಿಗೆರೆ ಗ್ರಾಮದ ಮೇಘರಾಜಪ್ಪ ಅವರು ತಮ್ಮ ಎರಡು ಎಕರೆಯಲ್ಲಿ ಸುತ್ತಲೂ ತೆಂಗು ಹಾಕಿದ್ದಾರೆ. ಈ ಪೈಕಿ ಉಳಿದ ಭೂಮಿಯಲ್ಲಿ ಎಲೆಕೋಸು (ಕ್ಯಾಬೇಜ್) ಬೆಳೆದು ಉತ್ತಮ ಬೆಲೆಗೆ ಮಾರಾಟ ಮಾಡಿದ್ದಾರೆ.<br><br> ತೇವಾಂಶ ಕೊರತೆಯ ನಡುವೆಯೂ 30 ಟನ್ಗೂ ಹೆಚ್ಚು ಎಲೆಕೋಸು ಇಳುವರಿ ಬಂದಿದೆ. ಮೊದಲ ಹಂತದ 20 ಟನ್ ಕಟಾವಿಗೆ ಪ್ರತಿ ಕೆ.ಜಿ.ಗೆ ₹ 16 ದೊರಕಿದೆ. ಎರಡನೇ ಹಂತದ ಕಟಾವಿಗೆ ₹ 17 ದೊರಕಿದೆ. ಒಟ್ಟು 30 ಟನ್ಗೆ ₹ 4,90,000 ಆದಾಯ ದೊರಕಿದೆ.<br><br> ರೈತ ಮೇಘರಾಜಪ್ಪ ಕ್ಯಾಬೇಜ್ ಬೆಳೆಯಲು ಬೀಜ, ಗೊಬ್ಬರ, ಔಷಧ ಸೇರಿ ಒಟ್ಟು ₹ 50 ಸಾವಿರ ಖರ್ಚು ಮಾಡಿದ್ದಾರೆ. ಬೆಳೆದ ಬೆಳೆಯನ್ನು ದೂರದ ಕೊಲ್ಕೊತ್ತಾ, ಚೆನ್ನೈ, ಹೈದರಾಬಾದ್, ಕಲ್ಲಿಕೋಟೆ ಹಾಗೂ ಉತ್ತರ ಭಾರತದ ಪ್ರಮುಖ ನಗರಗಳ ವ್ಯಾಪಾರಿಗಳು ಇಲ್ಲಿಯೇ ಖರೀದಿಸಿ ಕೊಂಡೊಯ್ಯುವುದರಿಂದ ಸಾಗಣೆ ವೆಚ್ಚ ಉಳಿಯುತ್ತಿದೆ.<br><br> ‘ಕಳೆದ ವರ್ಷ ಎಲೆಕೋಸು ಬೆಲೆ ಕೆ.ಜಿಗೆ ₹ 1.5 ಕನಿಷ್ಠ ಬೆಲೆಗೆ ತಲುಪಿತ್ತು. ಕಟಾವು ಮಾಡುವ ಕೂಲಿಗೂ ಸಾಲುತ್ತಿರಲಿಲ್ಲ. ಬೀಜ, ಗೊಬ್ಬರದ ಖರ್ಚು ಬರುವುದು ಕನಸಿನ ಮಾತಾಗಿತ್ತು. ಆದ್ದರಿಂದ ಹೊಲದಲ್ಲಿಯೇ ಬೆಳೆಯನ್ನು ನಾಶ ಪಡಿಸಿದೆ.<br><br> ‘ಸದ್ಯ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರಿಂದ ಬೆಳೆದ ಎಲೆಕೋಸಿಗೂ ದರ ಬಂದಿದೆ. ಲಾಭ ನಷ್ಟದ ಲೆಕ್ಕ ಹಾಕದೇ, ಬೆಳೆ ಬೆಳೆದರೆ ಭೂ ತಾಯಿ ಕೈ ಹಿಡಿಯುತ್ತಾಳೆ. ಲಾಭವೂ ಕೈ ಸೇರುತ್ತದೆ’ ಎನ್ನುತ್ತಾರೆ ರೈತ ಮೇಘರಾಜಪ್ಪ.<br><br><br></p>.<p>ತಡ ಮುಂಗಾರು ಪ್ರವೇಶದಿಂದಾಗಿ ಎಲೆಕೋಸು ನಿರೀಕ್ಷಿತ ಪ್ರಮಾಣದ ಬಿತ್ತನೆ ಆಗಿಲ್ಲ. ಸಹಜವಾಗಿ ರೈತರಿಗೆ ಉತ್ತಮ ಬೆಲೆ ಲಭಿಸಿದೆ </p><p><strong>–ಜಯಸಿಂಹ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ</strong></p>.<p>ಎಲೆಕೋಸು ಉತ್ತಮ ಬೆಲೆ ಲಭಿಸಿದೆ. ಮಳೆ ವಿದ್ಯುತ್ ಸಮಸ್ಯೆಗಳಿಂದ ಇಳುವರಿ ಕುಂಠಿತಗೊಂಡಿದೆ</p><p><strong>–ಮೇಘರಾಜಪ್ಪ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>