‘ಆರು ಎಮ್ಮೆ, ನಾಲ್ಕು ಆಕಳು ಆರೈಕೆ ಮಾಡಿ ಹೈನುಗಾರಿಕೆ ಮಾಡುತ್ತಿದ್ದೆ. ಬೇಸಿಗೆಯಲ್ಲಿ ಮೇವಿನ ಕೊರತೆಯಾಗಬಹುದು ಎಂದು ನೂರು ಎಕರೆ ಭತ್ತದ ಮೇವು ಖರೀದಿಸಿ ಎರಡು ಬೃಹತ್ ಬಣಿವೆ ಹಾಕಿದ್ದೆ. ಸದ್ಯ ಮೇವು ಸಂಪೂರ್ಣ ಭಸ್ಮವಾಗಿದ್ದರಿಂದ ಸುಮಾರು ₹ 3 ಲಕ್ಷ ನಷ್ಟವುಂಟಾಗಿದೆ’ ಎಂದು ರೈತ ಗೋಪಾಲಪ್ಪ ಬೇಸರದಿಂದ ತಿಳಿಸಿದರು.