ಕಡ್ಡಿರಾಂಪುರದ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದವು 25ನೇ ವರ್ಷದ ಭಕ್ತಿ ಭಾವನ ಕಾರ್ಯಕ್ರಮದಲ್ಲಿ ಎಂ.ಯೋಗೀಶ್ ತಂಡ ಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಿತು. ಅನಂತರ ಮಲ್ಲಿಕಾರ್ಜುನ ತುರುವನೂರು, ಮಧುಸೂಧನ್ ಯಾದವ್ ಇವರ ಶಾಸ್ತ್ರೀಯ ಸಂಗೀತ, ಸುಮಾ ಕಾಳಘಟ್ಟ, ಅಂಗಡಿ ಸಮರ್ಥ ಅವರಿಂದ ಸುಗಮ ಸಂಗೀತ, ಶ್ರೀಕರಿ ಶಾಲೆಯ ಭರತನಾಟ್ಯ, ಹರ್ಷಿತಾ ಅವರ ಗೀತ ನೃತ್ಯ, ಯಲ್ಲಪ್ಪ ಭಂಡಾರ ಜಾನಪದ ಗೀತೆಗಳು, ಪಾಂಡುರಂಗ ಅಮಿದಾಲ್ ಕುಡುತಿನಿ ಅವರು ಪ್ರವಚನ, ಕೃಷ್ಣ ತಂಡದ ಜಾನಪದ ನೃತ್ಯ ಗಮನ ಸೆಳೆಯಿತು. ಮಹೇಶ್ ಆಚಾರ್, ಎ.ದೊಡ್ಡಬಸಪ್ಪ ಕೀಬೋರ್ಡ್ ನುಡಿಸಿದರು. ಕೆ.ಪಂಪನ ಗೌಡ ನಿರೂಪಿಸಿದರು.