ಸಂಡೂರು ತಾಲ್ಲೂಕಿನ ಭುಜಂಗನಗರ ಗ್ರಾಮದ ಯಲ್ಲಮ್ಮ ಅವರ ಮನೆ ಮಳೆಯಿಂದ ಹಾನಿಗೀಡಾಗಿದ್ದು, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಡೂರಿನ ಜೀವನಾಡಿ ಎನಿಸಿಕೊಂಡಿರುವ ನಾರಿಹಳ್ಳ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಇಲ್ಲಿನ ಬೆಟ್ಟಗಳು ಹಸಿರಾಗುತ್ತಿವೆ.