ನಟ ಪುನೀತ್ ರಾಜಕುಮಾರ್ ಅವರಿಂದ ಪ್ರಭಾವಿತರಾಗಿದ್ದ ಕಣಿಮೆಪ್ಪ ಅವರು ಕೆಲ ದಿನಗಳ ಹಿಂದೆ ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಸಿದ್ದರು. ಸೋಮವಾರ ಅವರು ನಿಧನರಾಗಿದ್ದು, ಅವರ ಪಾರ್ಥೀವ ಶರೀರವನ್ನು ಆಸ್ಪತ್ರೆಗೆ ಕೊಂಡೊಯ್ದು ಕಣ್ಣು ತೆಗೆದುಕೊಳ್ಳಲಾಗಿದೆ. ಕಣಿಮೆಪ್ಪ ಅವರ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ಅವರನ್ನು ಅನೇಕರು ಹೊಗಳಿದ್ದಾರೆ.