<p><strong>ಕಂಪ್ಲಿ:</strong> ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಹಾರ್ವೆಸ್ಟರ್(ಭತ್ತ ಕೊಯ್ಲು ಯಂತ್ರ) ಮಾಲೀಕರ, ರೈತ ಸಂಘದವರ ಮತ್ತು ರೈತರ ಸಭೆಯಲ್ಲಿ ಬಾಡಿಗೆ ದರ ನಿಗದಿ ಅಂತಿಮವಾಗದೆ ಅತಂತ್ರ ಸ್ಥಿತಿ ಮುಂದುವರಿಯಿತು.</p>.<p>ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ‘ಅಕಾಲಿಕ ಮಳೆಯಿಂದ ಈಗಾಗಲೆ ಭತ್ತ ನೆಲಕಚ್ಚಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿತವಾಗಿ ಎಕರೆಗೆ ₹20 ಸಾವಿರದಿಂದ ₹25 ಸಾವಿರ ನಷ್ಟ ಕಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಯ್ಲು ಯಂತ್ರ ಬಾಡಿಗೆಯನ್ನು ₹2,300 ರಿಂದ ₹3ಸಾವಿರಕ್ಕೆ ಹೆಚ್ಚಳ ಮಾಡಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ರೈತರ ತೊಂದರೆ ಅರಿತು ಹಾರ್ವೆಸ್ಟರ್ ಮಾಲೀಕರು ಯಂತ್ರದ ಬಾಡಿಗೆ ಗಂಟೆಗೆ ₹2,500 ನಿಗದಿ ಮಾಡುವಂತೆ ಆಗ್ರಹಿಸಿದರು.</p>.<p>ಭತ್ತ ಕೊಯ್ಲು ಯಂತ್ರ ಮಾಲೀಕರಾದ ರಾಜಶೇಖರರೆಡ್ಡಿ, ನರಸಿಂಹಲು, ಕೆ.ಭಾಸ್ಕರ, ವಾಸು, ವಿನಯ ಮಾತನಾಡಿ, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಯಂತ್ರ ಖರೀದಿಸಿದ್ದೇವೆ. ಡ್ರೈವರ್, ಹೆಲ್ಪರ್ ಕೊರತೆಯಿದ್ದು, ವೇತನ ಹೆಚ್ಚಳವಾಗಿದೆ. ಯಂತ್ರದ ಬಿಡಿ ಭಾಗಗಳ ಬೆಲೆಯೂ ದುಪ್ಪಟ್ಟಾಗಿದೆ. ಕೊಯ್ಲು ಯಂತ್ರದ ಬಾಡಿಗೆ ಗಂಟೆಗೆ ₹2,800 ಕಡಿಮೆ ದರಕ್ಕೆ ಒದಗಿಸಲು ಸಾಧ್ಯವಿಲ್ಲ. ರೈತರು ಸಹ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.</p>.<p>ಚರ್ಚೆಯ ಬಳಿಕವೂ ರೈತರು ಮತ್ತು ಹಾರ್ವೆಸ್ಟರ್ ಮಾಲೀಕರ ಮಧ್ಯೆ ಬಾಡಿಗೆ ದರ ಅಂತಿಮಗೊಳ್ಳಲಿಲ್ಲ.</p>.<p>ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ ಮಾತನಾಡಿ, ರೈತರು ಗಂಟೆಗೆ ₹2,500 ಹೆಚ್ಚಿನ ಬಾಡಿಗೆ ನೀಡಬಾರದು. ಕೃಷಿ ಯಂತ್ರಧಾರೆ ಮರು ಆರಂಭಿಸಿ ತಾಲ್ಲೂಕಿಗೆ ಹತ್ತು ಕೊಯ್ಲು ಯಂತ್ರ ಒದಗಿಸುವಂತೆ, ಸಣ್ಣ ಪ್ರಮಾಣದ ಕೊಯ್ಲು ಯಂತ್ರಗಳನ್ನು ಕೊಳ್ಳಲು ರಿಯಾಯಿತಿ ದರ ಒದಗಿಸುವಂತೆ ಒತ್ತಾಯಿಸಿದರು.</p>.<p>‘ಯಂತ್ರದ ಮಾಲೀಕರು, ರೈತರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬೆಲೆ ನಿಗದಿಪಡಿಸಿಕೊಳ್ಳುವಂತೆ’ ತಹಶೀಲ್ದಾರ್ ಎಸ್. ಶಿವರಾಜ ಮತ್ತು ಸಿರುಗುಪ್ಪ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ಪಾಟೀಲ್ ಸಲಹೆ ನೀಡಿದರು.</p>.<p>ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಿಮ್ಮಪ್ಪ ನಾಯಕ, ರೈತರ(ಕಾರ್ತೀಕ್ ಬಣ)ಸಂಘದ ಪದಾಧಿಕಾರಿಗಳಾದ ವಿ. ನಾಗರಾಜ, ವಿ. ಲಿಂಗರಾಜ, ಗಂಗಣ್ಣ, ಗೆಣಕಿಹಾಳ್ ಸೋಮಶೇಖರ, ಕೃಷಿ ಅಧಿಕಾರಿ ಕೆ. ಸೋಮಶೇಖರ, ಸಹಾಯಕ ಕೃಷಿ ಅಧಿಕಾರಿ ಜ್ಯೋತಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ:</strong> ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಹಾರ್ವೆಸ್ಟರ್(ಭತ್ತ ಕೊಯ್ಲು ಯಂತ್ರ) ಮಾಲೀಕರ, ರೈತ ಸಂಘದವರ ಮತ್ತು ರೈತರ ಸಭೆಯಲ್ಲಿ ಬಾಡಿಗೆ ದರ ನಿಗದಿ ಅಂತಿಮವಾಗದೆ ಅತಂತ್ರ ಸ್ಥಿತಿ ಮುಂದುವರಿಯಿತು.</p>.<p>ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ‘ಅಕಾಲಿಕ ಮಳೆಯಿಂದ ಈಗಾಗಲೆ ಭತ್ತ ನೆಲಕಚ್ಚಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿತವಾಗಿ ಎಕರೆಗೆ ₹20 ಸಾವಿರದಿಂದ ₹25 ಸಾವಿರ ನಷ್ಟ ಕಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಯ್ಲು ಯಂತ್ರ ಬಾಡಿಗೆಯನ್ನು ₹2,300 ರಿಂದ ₹3ಸಾವಿರಕ್ಕೆ ಹೆಚ್ಚಳ ಮಾಡಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ರೈತರ ತೊಂದರೆ ಅರಿತು ಹಾರ್ವೆಸ್ಟರ್ ಮಾಲೀಕರು ಯಂತ್ರದ ಬಾಡಿಗೆ ಗಂಟೆಗೆ ₹2,500 ನಿಗದಿ ಮಾಡುವಂತೆ ಆಗ್ರಹಿಸಿದರು.</p>.<p>ಭತ್ತ ಕೊಯ್ಲು ಯಂತ್ರ ಮಾಲೀಕರಾದ ರಾಜಶೇಖರರೆಡ್ಡಿ, ನರಸಿಂಹಲು, ಕೆ.ಭಾಸ್ಕರ, ವಾಸು, ವಿನಯ ಮಾತನಾಡಿ, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಯಂತ್ರ ಖರೀದಿಸಿದ್ದೇವೆ. ಡ್ರೈವರ್, ಹೆಲ್ಪರ್ ಕೊರತೆಯಿದ್ದು, ವೇತನ ಹೆಚ್ಚಳವಾಗಿದೆ. ಯಂತ್ರದ ಬಿಡಿ ಭಾಗಗಳ ಬೆಲೆಯೂ ದುಪ್ಪಟ್ಟಾಗಿದೆ. ಕೊಯ್ಲು ಯಂತ್ರದ ಬಾಡಿಗೆ ಗಂಟೆಗೆ ₹2,800 ಕಡಿಮೆ ದರಕ್ಕೆ ಒದಗಿಸಲು ಸಾಧ್ಯವಿಲ್ಲ. ರೈತರು ಸಹ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.</p>.<p>ಚರ್ಚೆಯ ಬಳಿಕವೂ ರೈತರು ಮತ್ತು ಹಾರ್ವೆಸ್ಟರ್ ಮಾಲೀಕರ ಮಧ್ಯೆ ಬಾಡಿಗೆ ದರ ಅಂತಿಮಗೊಳ್ಳಲಿಲ್ಲ.</p>.<p>ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ ಮಾತನಾಡಿ, ರೈತರು ಗಂಟೆಗೆ ₹2,500 ಹೆಚ್ಚಿನ ಬಾಡಿಗೆ ನೀಡಬಾರದು. ಕೃಷಿ ಯಂತ್ರಧಾರೆ ಮರು ಆರಂಭಿಸಿ ತಾಲ್ಲೂಕಿಗೆ ಹತ್ತು ಕೊಯ್ಲು ಯಂತ್ರ ಒದಗಿಸುವಂತೆ, ಸಣ್ಣ ಪ್ರಮಾಣದ ಕೊಯ್ಲು ಯಂತ್ರಗಳನ್ನು ಕೊಳ್ಳಲು ರಿಯಾಯಿತಿ ದರ ಒದಗಿಸುವಂತೆ ಒತ್ತಾಯಿಸಿದರು.</p>.<p>‘ಯಂತ್ರದ ಮಾಲೀಕರು, ರೈತರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬೆಲೆ ನಿಗದಿಪಡಿಸಿಕೊಳ್ಳುವಂತೆ’ ತಹಶೀಲ್ದಾರ್ ಎಸ್. ಶಿವರಾಜ ಮತ್ತು ಸಿರುಗುಪ್ಪ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ಪಾಟೀಲ್ ಸಲಹೆ ನೀಡಿದರು.</p>.<p>ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಿಮ್ಮಪ್ಪ ನಾಯಕ, ರೈತರ(ಕಾರ್ತೀಕ್ ಬಣ)ಸಂಘದ ಪದಾಧಿಕಾರಿಗಳಾದ ವಿ. ನಾಗರಾಜ, ವಿ. ಲಿಂಗರಾಜ, ಗಂಗಣ್ಣ, ಗೆಣಕಿಹಾಳ್ ಸೋಮಶೇಖರ, ಕೃಷಿ ಅಧಿಕಾರಿ ಕೆ. ಸೋಮಶೇಖರ, ಸಹಾಯಕ ಕೃಷಿ ಅಧಿಕಾರಿ ಜ್ಯೋತಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>