<p><strong>ಬಳ್ಳಾರಿ:</strong> ಕುಡಿಯುವ ನೀರಿನ ಕಾಮಗಾರಿ ಗುತ್ತಿಗೆ ಪಡೆಯಲು ಗುತ್ತಿಗೆದಾರರೊಬ್ಬರಿಗೆ ನಕಲಿ ದಾಖಲೆ ಮಾಡಿಕೊಟ್ಟಿದ್ದಪ್ರಕರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಾಲ್ವರು ಅಧಿಕಾರಿಗಳು ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಯಶವಂತನಗರದಲ್ಲಿ ಪೈಪ್ಲೈನ್, ಮನೆಗಳಿಗೆ ನಳ ಸಂಪರ್ಕ ಮತ್ತು ಟಿಎಚ್ಟಿ ಒದಗಿಸುವ ಒಟ್ಟು ₹18.64 ಲಕ್ಷ ಮೊತ್ತದ ಕಾಮಗಾರಿಗೆ 2020-21ನೇ ಸಾಲಿನಲ್ಲಿ ಕರೆದಿದ್ದ ಟೆಂಡರ್ನಲ್ಲಿ ಗುತ್ತಿಗೆದಾರ ಮೌಲಾಲಿ ಅವರು ಭಾಗವಹಿಸಿದ್ದರು.</p>.<p>ಅಂದಿನ ಕಾರ್ಯಪಾಲಕ ಎಂಜಿನಿಯರ್ ಆರ್.ಪ್ರಭು, ಲೆಕ್ಕಾಧೀಕ್ಷಕ ಎಂ.ಮಾಲತೇಶ್, ಅಂದಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಸ್.ಶ್ರೀಕಂಠ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಸುರೇಂದ್ರನಾಥ ಅವರು ನಕಲಿ ‘ವರ್ಕ್ ಡನ್’ ಪ್ರಮಾಣಪತ್ರ ಮತ್ತು ನಕಲಿ ರಹಸ್ಯ ವರದಿಗಳನ್ನು ಮೌಲಾಲಿಗೆ ಒದಗಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. </p>.<p>ಅಕ್ರಮವಾಗಿ ಗುತ್ತಿಗೆ ಪಡೆದ ಮೌಲಾಲಿ ಅವರನ್ನು ಮೊದಲ ಆರೋಪಿಯಾಗಿಸಲಾಗಿದೆ. ಇವರ ವಿರುದ್ಧ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎಚ್. ಇಂಧೂದರ ಅವರು ಕೌಲ್ ಬಜಾರ್ ಠಾಣೆಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಕುಡಿಯುವ ನೀರಿನ ಕಾಮಗಾರಿ ಗುತ್ತಿಗೆ ಪಡೆಯಲು ಗುತ್ತಿಗೆದಾರರೊಬ್ಬರಿಗೆ ನಕಲಿ ದಾಖಲೆ ಮಾಡಿಕೊಟ್ಟಿದ್ದಪ್ರಕರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಾಲ್ವರು ಅಧಿಕಾರಿಗಳು ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಯಶವಂತನಗರದಲ್ಲಿ ಪೈಪ್ಲೈನ್, ಮನೆಗಳಿಗೆ ನಳ ಸಂಪರ್ಕ ಮತ್ತು ಟಿಎಚ್ಟಿ ಒದಗಿಸುವ ಒಟ್ಟು ₹18.64 ಲಕ್ಷ ಮೊತ್ತದ ಕಾಮಗಾರಿಗೆ 2020-21ನೇ ಸಾಲಿನಲ್ಲಿ ಕರೆದಿದ್ದ ಟೆಂಡರ್ನಲ್ಲಿ ಗುತ್ತಿಗೆದಾರ ಮೌಲಾಲಿ ಅವರು ಭಾಗವಹಿಸಿದ್ದರು.</p>.<p>ಅಂದಿನ ಕಾರ್ಯಪಾಲಕ ಎಂಜಿನಿಯರ್ ಆರ್.ಪ್ರಭು, ಲೆಕ್ಕಾಧೀಕ್ಷಕ ಎಂ.ಮಾಲತೇಶ್, ಅಂದಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಸ್.ಶ್ರೀಕಂಠ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಸುರೇಂದ್ರನಾಥ ಅವರು ನಕಲಿ ‘ವರ್ಕ್ ಡನ್’ ಪ್ರಮಾಣಪತ್ರ ಮತ್ತು ನಕಲಿ ರಹಸ್ಯ ವರದಿಗಳನ್ನು ಮೌಲಾಲಿಗೆ ಒದಗಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. </p>.<p>ಅಕ್ರಮವಾಗಿ ಗುತ್ತಿಗೆ ಪಡೆದ ಮೌಲಾಲಿ ಅವರನ್ನು ಮೊದಲ ಆರೋಪಿಯಾಗಿಸಲಾಗಿದೆ. ಇವರ ವಿರುದ್ಧ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎಚ್. ಇಂಧೂದರ ಅವರು ಕೌಲ್ ಬಜಾರ್ ಠಾಣೆಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>