ಸೂಕ್ತ ತನಿಖೆ ಆಗಬೇಕು: ಆಗ್ರಹ
‘ವಿಂಡ್ಮಿಲ್ಗಳ ರೆಕ್ಕೆಯನ್ನು ಸಾಗಿಸುವ ಪ್ರಕ್ರಿಯೆಗಳು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಣ ತಂದುಕೊಡುತ್ತಿವೆ. ಈ ರೆಕ್ಕೆ ಸಾಗಾಟದ ಸಂದರ್ಭದಲ್ಲಿ ಯಾವೆಲ್ಲ ಇಲಾಖೆಗಳಿಂದ ಅನುಮತಿ ಬೇಕಿದೆಯೋ ಆ ಇಲಾಖೆಗಳ ಅಧಿಕಾರಿಗಳು ಹಣ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಪ್ರಕರಣದ ಸಂಬಂಧ ಎಫ್ಐಆರ್ ಮಾಡಿಸಲು ಹೋರಾಡಿದ ಸಾಮಾಜಿಕ ಹೋರಾಟಗಾರ ಊಳೂರು ಸಿದ್ದೇಶ ಆಗ್ರಹಿಸಿದ್ದಾರೆ.