<p><strong>ಹರಪನಹಳ್ಳಿ:</strong> ಅಸಲಿ ಚಿನ್ನವೆಂದು ನಂಬಿಸಿ ನಕಲಿ ಬಂಗಾರ ಕೊಟ್ಟು ₹ 1.50 ಲಕ್ಷ ನಗದು ಹಣ ವಂಚಿಸಿರುವ ಘಟನೆ ಪಟ್ಟಣದ ಹಿರೆಕೆರೆ ಬಳಿ ಮೇ 17ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.</p>.<p>ಮಂಡ್ಯಮೂಲದ ಬಿ.ಟಿ.ಬಸವರಾಜ್ ವಂಚನೆಗೆ ಒಳಗಾದವರು. ಮೇ 14ರಂದು ಅಪರಿಚಿತ ವ್ಯಕ್ತಿಯೊಬ್ಬ ಮೊ– 9063502900 ನಂಬರಿನಿಂದ ಮಂಡ್ಯ ಮೂಲದ ವ್ಯಕ್ತಿಗೆ ಕರೆ ಮಾಡಿ ನನ್ನ ಬಳಿ ಅಸಲಿ ಚಿನ್ನವಿದ್ದು ಕಡಿಮೆ ದರಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ.</p>.<p>ಇದನ್ನು ನಂಬಿದ ಬಸವರಾಜ್ ಅವರು ಮೇ 17ರಂದು ಅಪರಿಚಿತ ವ್ಯಕ್ತಿ ಹೇಳಿದಂತೆ ಹರಪನಹಳ್ಳಿ ಬಸ್ ನಿಲ್ದಾಣಕ್ಕೆ ಬಂದಾಗ ವಂಚಕರು ಎರಡು ಚಿನ್ನದ ತುಣುಕು ಕೊಟ್ಟು ಕಳಿಸಿದ್ದಾರೆ.</p>.<p>ಅವು ಪರಿಶೀಲಿಸಿದಾಗ ಅಸಲಿ ಎಂದು ಗೊತ್ತಾಗಿದೆ. ಖಚಿತಪಡಿಸಲು ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ₹ 10 ಲಕ್ಷ ಕೊಟ್ಟರೆ ಒಂದುವರೆ ಕೆ.ಜಿ.ಯಷ್ಟು ಅಸಲಿ ಬಂಗಾರ ಕೊಡುವುದಾಗಿ ಆಸೆ ಹುಟ್ಟಿಸಿದ್ದಾರೆ.</p>.<p>ಬಸವರಾಜ್ ಮಂಡ್ಯದಿಂದ ಆಗಮಿಸಿ ₹ 1.50 ಲಕ್ಷ ಹಣ ಕೊಟ್ಟು 800 ಗ್ರಾಂ. ಬಂಗಾರದ ಕಾಯಿನ್ ಖರೀದಿಸಿ, ಮಂಡ್ಯಕ್ಕೆ ತೆರಳಿ ಪರಿಶೀಲಿಸಿದಾಗ ನಕಲಿ ಎಂಬುವುದು ಗೊತ್ತಾದ ತಕ್ಷಣ ಅಪರಿಚಿತ ವ್ಯಕ್ತಿಯ ನಂಬರಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ:</strong> ಅಸಲಿ ಚಿನ್ನವೆಂದು ನಂಬಿಸಿ ನಕಲಿ ಬಂಗಾರ ಕೊಟ್ಟು ₹ 1.50 ಲಕ್ಷ ನಗದು ಹಣ ವಂಚಿಸಿರುವ ಘಟನೆ ಪಟ್ಟಣದ ಹಿರೆಕೆರೆ ಬಳಿ ಮೇ 17ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.</p>.<p>ಮಂಡ್ಯಮೂಲದ ಬಿ.ಟಿ.ಬಸವರಾಜ್ ವಂಚನೆಗೆ ಒಳಗಾದವರು. ಮೇ 14ರಂದು ಅಪರಿಚಿತ ವ್ಯಕ್ತಿಯೊಬ್ಬ ಮೊ– 9063502900 ನಂಬರಿನಿಂದ ಮಂಡ್ಯ ಮೂಲದ ವ್ಯಕ್ತಿಗೆ ಕರೆ ಮಾಡಿ ನನ್ನ ಬಳಿ ಅಸಲಿ ಚಿನ್ನವಿದ್ದು ಕಡಿಮೆ ದರಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ.</p>.<p>ಇದನ್ನು ನಂಬಿದ ಬಸವರಾಜ್ ಅವರು ಮೇ 17ರಂದು ಅಪರಿಚಿತ ವ್ಯಕ್ತಿ ಹೇಳಿದಂತೆ ಹರಪನಹಳ್ಳಿ ಬಸ್ ನಿಲ್ದಾಣಕ್ಕೆ ಬಂದಾಗ ವಂಚಕರು ಎರಡು ಚಿನ್ನದ ತುಣುಕು ಕೊಟ್ಟು ಕಳಿಸಿದ್ದಾರೆ.</p>.<p>ಅವು ಪರಿಶೀಲಿಸಿದಾಗ ಅಸಲಿ ಎಂದು ಗೊತ್ತಾಗಿದೆ. ಖಚಿತಪಡಿಸಲು ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ₹ 10 ಲಕ್ಷ ಕೊಟ್ಟರೆ ಒಂದುವರೆ ಕೆ.ಜಿ.ಯಷ್ಟು ಅಸಲಿ ಬಂಗಾರ ಕೊಡುವುದಾಗಿ ಆಸೆ ಹುಟ್ಟಿಸಿದ್ದಾರೆ.</p>.<p>ಬಸವರಾಜ್ ಮಂಡ್ಯದಿಂದ ಆಗಮಿಸಿ ₹ 1.50 ಲಕ್ಷ ಹಣ ಕೊಟ್ಟು 800 ಗ್ರಾಂ. ಬಂಗಾರದ ಕಾಯಿನ್ ಖರೀದಿಸಿ, ಮಂಡ್ಯಕ್ಕೆ ತೆರಳಿ ಪರಿಶೀಲಿಸಿದಾಗ ನಕಲಿ ಎಂಬುವುದು ಗೊತ್ತಾದ ತಕ್ಷಣ ಅಪರಿಚಿತ ವ್ಯಕ್ತಿಯ ನಂಬರಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>