‘ರಾಜ್ಯ ಸರ್ಕಾರವು 2021ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದುಪಡಿಸಿರುವ ಕ್ರಮ ಸರಿಯಲ್ಲ. ಈ ಹಣವನ್ನು ನೌಕರರು ಅವರ ಮಕ್ಕಳ ವಿದ್ಯಾಭ್ಯಾಸ, ಚಿಕಿತ್ಸೆ, ಆರ್ಥಿಕ ಸಂಕಷ್ಟದಿಂದ ಹೊರಬರಲು ಬಳಸಿಕೊಳ್ಳುತ್ತಿದ್ದರು. ಆದರೆ, ಸರ್ಕಾರದ ಕ್ರಮದಿಂದ ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ಹೆಚ್ಚುವರಿ ಕೆಲಸ ಹೇರುತ್ತಿರುವ ಸರ್ಕಾರ ಒಂದೆಡೆ ಈರುವ ಸೌಲಭ್ಯ ಕಡಿತಗೊಳಿಸುತ್ತಿರುವ ಕ್ರಮ ಸರಿಯಾದುದ್ದಲ್ಲ. ಹಾಗಾಗಿ ಸರ್ಕಾರ ತನ್ನ ಆದೇಶ ಮರು ಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.