<p><strong>ಸಿರುಗುಪ್ಪ:</strong> ತಾಲ್ಲೂಕಿನ ರಾರಾವಿ ಗ್ರಾಮದ ಹುತ್ತಿನ ಯಲ್ಲಮ್ಮ ದೇವಿಯ ಜಾತ್ರಾಮಹೋತ್ಸವದಲ್ಲಿ ವಿಶಿಷ್ಟವಾದ ಎತ್ತಿನ ಪರಿಷೆ (ಜಾನುವಾರು ಮೇಳ) ಮಂಗಳವಾರ ನಡೆಯಿತು.</p>.<p>ಈ ಜಾತ್ರೆಯು ಉತ್ತರ ಕರ್ನಾಟಕದ ಅತಿದೊಡ್ಡ ಎತ್ತಿನ ಪರಿಷೆಗಳಲ್ಲಿ ಒಂದಾಗಿದೆ. ಇಲ್ಲಿ ಸುಂದರವಾದ ಮತ್ತು ಬಲಶಾಲಿಯಾದ ಎತ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಸಾವಿರಾರು ರೂಪಾಯಿಗಳಿಂದ ಹಿಡಿದು ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಹಳ್ಳಿಕಾರ್, ಖಿಲಾರಿ ಮುಂತಾದ ತಳಿಯ ಎತ್ತುಗಳು ಇಲ್ಲಿ ಮಾರಾಟವಾಗುತ್ತಿವೆ. 50ಸಾವಿರದಿಂದ 2 ಲಕ್ಷದ 50 ಸಾವಿರದ ವರೆಗೆ ಮಾರಾಟವಾಗಿವೆ. ಎತ್ತಿನ ಪರಿಷೆಯಲ್ಲಿ ಸುಮಾರು 700 ಜತೆ ವಿವಿಧ ತಳಿಯ ಎತ್ತುಗಳು ಭಾಗವಹಿಸಿದ್ದವು.</p>.<p>ರಾಜ್ಯ ಸೇರಿದಂತೆ ತೆಲಂಗಣ, ಸೀಮಾಂಧ್ರ ಪ್ರದೇಶದ ರೈತರು ತಮ್ಮ ಎತ್ತುಗಳನ್ನು ಮಾರಾಟಕ್ಕೆ ಮತ್ತು ಉತ್ತಮ ತಳಿಯ ಎತ್ತುಗಳನ್ನು ಖರೀದಿಸಲು ಬಂದಿದ್ದರು. ನೂರಾರು ಎತ್ತುಗಳು ಒಂದರಂತೆ ಒಂದು ಆಕರ್ಷಣೆಯಾಗಿ ಗಮನ ಸೇಳೆದವು.</p><p> ಎತ್ತುಗಳ ಅಲಂಕಾರಿಕ ಸಾಮಗ್ರಿಗಳು, ಹಗ್ಗ, ಕಣಿ, ಬಾರುಕೋಲು, ಗೊಂಡೆವು ಸೇರಿದಂತೆ ಕೃಷಿ ಚಟುವಟಿಕೆಗೆ ಬೇಕಾದ ಸಾಮಾಗ್ರಿಗಳನ್ನು ರೈತರು ಖರೀದಿಸಿದರು. ದೇವಸ್ಥಾನದ ಆಡಳಿತ ಮಂಡಳಿಯು ಎತ್ತುಗಳ ಪರಿಷೆಗೆ ಬೇಕಾದ ಅನುಕೂಲತೆಯನ್ನು ಒದಗಿಸಿಕೊಟ್ಟಿದ್ದು ವಿಶೇಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ:</strong> ತಾಲ್ಲೂಕಿನ ರಾರಾವಿ ಗ್ರಾಮದ ಹುತ್ತಿನ ಯಲ್ಲಮ್ಮ ದೇವಿಯ ಜಾತ್ರಾಮಹೋತ್ಸವದಲ್ಲಿ ವಿಶಿಷ್ಟವಾದ ಎತ್ತಿನ ಪರಿಷೆ (ಜಾನುವಾರು ಮೇಳ) ಮಂಗಳವಾರ ನಡೆಯಿತು.</p>.<p>ಈ ಜಾತ್ರೆಯು ಉತ್ತರ ಕರ್ನಾಟಕದ ಅತಿದೊಡ್ಡ ಎತ್ತಿನ ಪರಿಷೆಗಳಲ್ಲಿ ಒಂದಾಗಿದೆ. ಇಲ್ಲಿ ಸುಂದರವಾದ ಮತ್ತು ಬಲಶಾಲಿಯಾದ ಎತ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಸಾವಿರಾರು ರೂಪಾಯಿಗಳಿಂದ ಹಿಡಿದು ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಹಳ್ಳಿಕಾರ್, ಖಿಲಾರಿ ಮುಂತಾದ ತಳಿಯ ಎತ್ತುಗಳು ಇಲ್ಲಿ ಮಾರಾಟವಾಗುತ್ತಿವೆ. 50ಸಾವಿರದಿಂದ 2 ಲಕ್ಷದ 50 ಸಾವಿರದ ವರೆಗೆ ಮಾರಾಟವಾಗಿವೆ. ಎತ್ತಿನ ಪರಿಷೆಯಲ್ಲಿ ಸುಮಾರು 700 ಜತೆ ವಿವಿಧ ತಳಿಯ ಎತ್ತುಗಳು ಭಾಗವಹಿಸಿದ್ದವು.</p>.<p>ರಾಜ್ಯ ಸೇರಿದಂತೆ ತೆಲಂಗಣ, ಸೀಮಾಂಧ್ರ ಪ್ರದೇಶದ ರೈತರು ತಮ್ಮ ಎತ್ತುಗಳನ್ನು ಮಾರಾಟಕ್ಕೆ ಮತ್ತು ಉತ್ತಮ ತಳಿಯ ಎತ್ತುಗಳನ್ನು ಖರೀದಿಸಲು ಬಂದಿದ್ದರು. ನೂರಾರು ಎತ್ತುಗಳು ಒಂದರಂತೆ ಒಂದು ಆಕರ್ಷಣೆಯಾಗಿ ಗಮನ ಸೇಳೆದವು.</p><p> ಎತ್ತುಗಳ ಅಲಂಕಾರಿಕ ಸಾಮಗ್ರಿಗಳು, ಹಗ್ಗ, ಕಣಿ, ಬಾರುಕೋಲು, ಗೊಂಡೆವು ಸೇರಿದಂತೆ ಕೃಷಿ ಚಟುವಟಿಕೆಗೆ ಬೇಕಾದ ಸಾಮಾಗ್ರಿಗಳನ್ನು ರೈತರು ಖರೀದಿಸಿದರು. ದೇವಸ್ಥಾನದ ಆಡಳಿತ ಮಂಡಳಿಯು ಎತ್ತುಗಳ ಪರಿಷೆಗೆ ಬೇಕಾದ ಅನುಕೂಲತೆಯನ್ನು ಒದಗಿಸಿಕೊಟ್ಟಿದ್ದು ವಿಶೇಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>