ವಾಹನಗಳ ಹೊಗೆ, ದೂಳು, ಜಾಡು ಕಟ್ಟಿಕೊಂಡು ದೇವಸ್ಥಾನ ಕಳೆಗುಂದಿತ್ತು. ಕೆಲವು ಭಕ್ತರು ಮೂರ್ತಿಗಳು, ಉಬ್ಬು ಶಿಲ್ಪಗಳಿಗೆ ವಿಭೂತಿ ಹಚ್ಚಿದ್ದರು. ದೀರ್ಘಕಾಲದಿಂದ ಈ ರೀತಿ ನಡೆಯುತ್ತ ಬಂದಿರುವುದರಿಂದ ಅದರ ಮೂಲ ಚಹರೆಯೇ ಬದಲಾಗಿತ್ತು. ಈಗ ಇಡೀ ದೇಗುಲವನ್ನು ರಸಾಯನಿಕದಿಂದ ಸ್ವಚ್ಛಗೊಳಿಸಿ, ಮೊದಲಿನ ಸ್ಥಿತಿಗೆ ತರಲಾಗುತ್ತಿದೆ.