ಬುಧವಾರ ರಾತ್ರಿ ನಗರದಲ್ಲಿ ಹಮ್ಮಿಕೊಂಡಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಹನುಮ ಮಾಲಾಧಾರಿಗಳು, ಬೆಳಿಗ್ಗೆ ಇಲ್ಲಿನ ವಡಕರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಇಡಿಗಾಯ ಒಡೆದು ದರ್ಶನ ಪಡೆದರು. ನಂತರ ತಂಡೋಪ ತಂಡವಾಗಿ ಕೇಸರಿ ಧ್ವಜಗಳೊಂದಿಗೆ ಜೈ ಜೈ ರಾಮ, ಜೈ ಹನುಮಾನ ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು. ನಗರದಿಂದ ಹಂಪಿ ವರೆಗೆ ಎಲ್ಲಿ ನೋಡಿದರಲ್ಲಿ ಕೇಸರಿ ವಸ್ತ್ರ ಧರಿಸಿದ ಮಾಲಾಧಾರಿಗಳೇ ಕಂಡು ಬಂದರು.