<p><strong>ತೆಕ್ಕಲಕೋಟೆ</strong>: ಸಮೀಪದ ಉಪ್ಪಾರ ಹೊಸಳ್ಳಿ ಗ್ರಾಮದ ವಿಶಿಷ್ಟ ಹೋಳಿ ಆಚರಣೆ ಸುತ್ತಲಿನ ಗ್ರಾಮಸ್ಥರನ್ನು ಆಕರ್ಷಿಸುತ್ತಿದೆ.<br> ಯುಗಾದಿ ಪಾಡ್ಯಮಿಯಂದು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ರಥೋತ್ಸವ ಜರುಗುತ್ತದೆ. ಮರುದಿನ ಗ್ರಾಮದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವುದು ಇಲ್ಲಿನ ವಾಡಿಕೆ.</p>.<p>ಊರ ಗೌಡರು ಹಾಗೂ ಶಾನುಭೋಗರ ಮನೆಯಿಂದ ಕಳಸ ಹಾಗೂ ಬಣ್ಣಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಪೂಜೆ ಮಾಡಿ ನಂತರ ಈಶ್ವರ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿರುವ ಪುಷ್ಕರಣಿಗೆ ರಂಗುರಂಗಿನ ಬಣ್ಣ ಹಾಕಿ ಹೋಲಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.</p>.<p>ಸುತ್ತಲೂ ನೆರೆದ ಜನ ಹೊಂಡಕ್ಕೆ ಜಿಗಿದು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವುದು ಶತಮಾನಗಳಿಂದಲೂ ಬಂದ ಆಚರಣೆಯಾಗಿದೆ ಎನ್ನುತ್ತಾರೆ ಗಾಮಸ್ಥರು.</p>.<p>ಈ ಕುರಿತು ಶಾನುಭೋಗ ಗುರುರಾಜ ಸ್ವಾಮಿ ಮಾತನಾಡಿ', ಬಹು ಹಿಂದಿನಿಂದಲೂ ಈ ವಿಶಿಷ್ಟ ಪದ್ದತಿ ಜಾರಿಯಲ್ಲಿದ್ದು, ಮುಂಚೆ ಪುಷ್ಕರಣಿಗೆ ಗುಲಾಬಿ ಹಾಗೂ ಬೇರೆ ಬೇರೆ ಹೂಗಳನ್ನು ಹಾಕಿ ಬಣ್ಣ ತಯಾರಿಸಿ ಆಡಲಾಗುತ್ತಿತ್ತು. ಆದರೆ ಈಗ ಕೃತಕ ಬಣ್ಣಗಳನ್ನು ಅನಿವಾರ್ಯವಾಗಿ ಬಳಸುತ್ತಿದ್ದೇವೆ' ಎಂದರು.</p>.<p>ಹೊಂಡಕ್ಕೆ ಧುಮುಕುವ ಯುವಕರು ಬಿಂದಿಗೆಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಮನೆಗೆ ಒಯ್ಯುತ್ತಾರೆ. ಮನೆಯಲ್ಲಿರುವ ಹೆಂಗಸರು, ಮಕ್ಕಳು ವಯಸ್ಸಾದವರು ಬಣ್ಣವನ್ನು ಮೈಮೇಲೆ ಪ್ರೊಕ್ಷಿಸಿಕೊಂಡು ನಂತರ ಸ್ನಾನ ಮಾಡಿ ಗ್ರಾಮಕ್ಕೆ ಗ್ರಾಮವೇ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ ಎನ್ನುತ್ತಾರೆ ಗ್ರಾಮಸ್ಥರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ</strong>: ಸಮೀಪದ ಉಪ್ಪಾರ ಹೊಸಳ್ಳಿ ಗ್ರಾಮದ ವಿಶಿಷ್ಟ ಹೋಳಿ ಆಚರಣೆ ಸುತ್ತಲಿನ ಗ್ರಾಮಸ್ಥರನ್ನು ಆಕರ್ಷಿಸುತ್ತಿದೆ.<br> ಯುಗಾದಿ ಪಾಡ್ಯಮಿಯಂದು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ರಥೋತ್ಸವ ಜರುಗುತ್ತದೆ. ಮರುದಿನ ಗ್ರಾಮದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವುದು ಇಲ್ಲಿನ ವಾಡಿಕೆ.</p>.<p>ಊರ ಗೌಡರು ಹಾಗೂ ಶಾನುಭೋಗರ ಮನೆಯಿಂದ ಕಳಸ ಹಾಗೂ ಬಣ್ಣಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಪೂಜೆ ಮಾಡಿ ನಂತರ ಈಶ್ವರ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿರುವ ಪುಷ್ಕರಣಿಗೆ ರಂಗುರಂಗಿನ ಬಣ್ಣ ಹಾಕಿ ಹೋಲಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.</p>.<p>ಸುತ್ತಲೂ ನೆರೆದ ಜನ ಹೊಂಡಕ್ಕೆ ಜಿಗಿದು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವುದು ಶತಮಾನಗಳಿಂದಲೂ ಬಂದ ಆಚರಣೆಯಾಗಿದೆ ಎನ್ನುತ್ತಾರೆ ಗಾಮಸ್ಥರು.</p>.<p>ಈ ಕುರಿತು ಶಾನುಭೋಗ ಗುರುರಾಜ ಸ್ವಾಮಿ ಮಾತನಾಡಿ', ಬಹು ಹಿಂದಿನಿಂದಲೂ ಈ ವಿಶಿಷ್ಟ ಪದ್ದತಿ ಜಾರಿಯಲ್ಲಿದ್ದು, ಮುಂಚೆ ಪುಷ್ಕರಣಿಗೆ ಗುಲಾಬಿ ಹಾಗೂ ಬೇರೆ ಬೇರೆ ಹೂಗಳನ್ನು ಹಾಕಿ ಬಣ್ಣ ತಯಾರಿಸಿ ಆಡಲಾಗುತ್ತಿತ್ತು. ಆದರೆ ಈಗ ಕೃತಕ ಬಣ್ಣಗಳನ್ನು ಅನಿವಾರ್ಯವಾಗಿ ಬಳಸುತ್ತಿದ್ದೇವೆ' ಎಂದರು.</p>.<p>ಹೊಂಡಕ್ಕೆ ಧುಮುಕುವ ಯುವಕರು ಬಿಂದಿಗೆಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಮನೆಗೆ ಒಯ್ಯುತ್ತಾರೆ. ಮನೆಯಲ್ಲಿರುವ ಹೆಂಗಸರು, ಮಕ್ಕಳು ವಯಸ್ಸಾದವರು ಬಣ್ಣವನ್ನು ಮೈಮೇಲೆ ಪ್ರೊಕ್ಷಿಸಿಕೊಂಡು ನಂತರ ಸ್ನಾನ ಮಾಡಿ ಗ್ರಾಮಕ್ಕೆ ಗ್ರಾಮವೇ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ ಎನ್ನುತ್ತಾರೆ ಗ್ರಾಮಸ್ಥರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>