ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಸೋಮವಾರ ಬೆಳಗಿನ ಜಾವ ಭಾರಿ ಮಳೆಯಾಗಿದ್ದು, ಮೂರು ಮನೆಗಳಿಗೆ ಹಾನಿಯಾಗಿದೆ.
ರಾಯರಾಳ ತಾಂಡಾದ ಗೌಡ್ರು ರತ್ನಮ್ಮ, ಕಮಲಬಾಯಿ ಹಾಗೂ ಕೆಚ್ಚಿನಬಂಡಿ ಗ್ರಾಮದ ರತ್ನಮ್ಮ ಬಸವರಾಜ ಅವರ ಮನೆಗಳು ಭಾಗಶಃ ಕುಸಿದಿವೆ. ಕಿತ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮಳೆ ನೀರಿನಿಂದ ಆವೃತವಾಗಿತ್ತು.
ಬ್ಯಾಲಹಾಳು, ಹನಸಿ, ಚಿಲಗೋಡು ಕೆರೆಗಳಿಗೆ ನೀರು ಹರಿದು ಬಂದಿದೆ. ತಾಲ್ಲೂಕಿನ ಬಹುತೇಕ ಹಳ್ಳಗಳಲ್ಲಿ ನೀರು ಹರಿಯಿತು. ಕೃಷಿಹೊಂಡಗಳು ಭರ್ತಿಯಾಗಿವೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಿತ್ನೂರು ಗ್ರಾಮದಲ್ಲಿ ಮಳೆಯಿಂದಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮಳೆ ನೀರಿನಿಂದ ಆವೃತವಾಗಿರುವುದು
ಪಟ್ಟಣದಲ್ಲಿ 4.66 ಸೆಂ.ಮೀ, ತಂಬ್ರಹಳ್ಳಿಯಲ್ಲಿ 5.16 ಸೆಂ.ಮೀ, ಹಂಪಸಾಗರದಲ್ಲಿ 6.04 ಸೆಂ.ಮೀ, ಮಾಲವಿಯಲ್ಲಿ 4.84 ಸೆಂ.ಮೀ ಮಳೆ ಆಗಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಲಗೋಡು ಗ್ರಾಮದಲ್ಲಿ ಸುರಿದ ಮಳೆಯಿಂದಾಗಿ ಹಳ್ಳ ಭರ್ತಿಯಾಗಿ ಕೆರೆಗೆ ಹರಿಯುತ್ತಿರುವುದು