<p><strong>ಬಳ್ಳಾರಿ</strong>: ‘ಬಜೆಟ್ನಲ್ಲಿ ಕೊಟ್ಟಿರುವುದಕ್ಕಲ್ಲ, ಕೊಡದಿರುವುದರ ಬಗ್ಗೆ ನನಗೆ ತಕರಾರಿದೆ. ಯಾರಿಗೆ ಏನೂ ಸಿಕ್ಕಿಲ್ಲವೋ, ಅವರ ಪರ ನಾನು ಮಾತನಾಡುವೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.</p>.<p>‘ಹಲಾಲ್ ಬಜೆಟ್’ ಎಂದು ಬಿಜೆಪಿಯವರು ಟೀಕಿಸಿರುವ ಬಗ್ಗೆ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ನಾಯಕರ ಟೀಕೆ ವೈಯಕ್ತಿಕವಾದದ್ದು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಎಲ್ಲರಿಗೂ ಎಲ್ಲವೂ ಸಿಗಬೇಕು ಎಂಬ ಅಭಿಪ್ರಾಯ ನನ್ನದು. ಒಟ್ಟಾರೆ, ಎಲ್ಲರಿಗೂ ಅನುಕೂಲವಾಗಬೇಕು’ ಎಂದರು.</p>.<p>‘ನಾನು ಬಿಜೆಪಿ ನಾಯಕನಾಗಿ ಮಾತನಾಡುತ್ತಿಲ್ಲ. ಅದರೆ, ನನ್ನ ಪ್ರಕಾರ ರಾಜ್ಯದ ಎಲ್ಲಾ ಸಮುದಾಯಗಳೂ ಒಂದೇ. ಹಿಂದುಳಿದವರು, ಪರಿಶಿಷ್ಟರು, ಮಹಿಳೆಯರು, ರೈತರು ಸೇರಿ ಯಾರನ್ನೂ ನಾವು ಉಪೇಕ್ಷಿಸಬಾರದು’ ಎಂದರು.</p>.<p>‘ಕಲ್ಯಾಣ ಕರ್ನಾಟಕದಲ್ಲಿ ಎಲ್ಲ ಜಾತಿ, ಧರ್ಮಗಳಿವೆ. ರಾಜಕೀಯವಾಗಿ ನೋಡಿದಾಗ, ಎಲ್ಲರನ್ನೂ ಒಟ್ಟಿಗೆ ಒಯ್ಯಬೇಕಾಗುತ್ತದೆ. ಹಾಗೆಂದು, ಈ ಬಜೆಟ್ನ್ನು ನಾನು ಸಮರ್ಥಿಸುವುದಿಲ್ಲ’ ಎಂದರು. </p>.<p>‘ನಾನು ಪಕ್ಷದ ರಾಷ್ಟ್ರೀಯ ನಾಯಕರ ಸಂಪರ್ಕದಲ್ಲಿದ್ದು, ದೂರವಾಣಿಯಲ್ಲಿ ಆಗಾಗ ಚರ್ಚಿಸುತ್ತೇನೆ. ರಾಜ್ಯಕ್ಕೆ ಬಂದ ಅಮಿತ್ ಶಾ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿಲ್ಲ. ಅವರನ್ನು ದೆಹಲಿಯಲ್ಲಿ ಭೇಟಿಯಾಗುವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ‘ಬಜೆಟ್ನಲ್ಲಿ ಕೊಟ್ಟಿರುವುದಕ್ಕಲ್ಲ, ಕೊಡದಿರುವುದರ ಬಗ್ಗೆ ನನಗೆ ತಕರಾರಿದೆ. ಯಾರಿಗೆ ಏನೂ ಸಿಕ್ಕಿಲ್ಲವೋ, ಅವರ ಪರ ನಾನು ಮಾತನಾಡುವೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.</p>.<p>‘ಹಲಾಲ್ ಬಜೆಟ್’ ಎಂದು ಬಿಜೆಪಿಯವರು ಟೀಕಿಸಿರುವ ಬಗ್ಗೆ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ನಾಯಕರ ಟೀಕೆ ವೈಯಕ್ತಿಕವಾದದ್ದು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಎಲ್ಲರಿಗೂ ಎಲ್ಲವೂ ಸಿಗಬೇಕು ಎಂಬ ಅಭಿಪ್ರಾಯ ನನ್ನದು. ಒಟ್ಟಾರೆ, ಎಲ್ಲರಿಗೂ ಅನುಕೂಲವಾಗಬೇಕು’ ಎಂದರು.</p>.<p>‘ನಾನು ಬಿಜೆಪಿ ನಾಯಕನಾಗಿ ಮಾತನಾಡುತ್ತಿಲ್ಲ. ಅದರೆ, ನನ್ನ ಪ್ರಕಾರ ರಾಜ್ಯದ ಎಲ್ಲಾ ಸಮುದಾಯಗಳೂ ಒಂದೇ. ಹಿಂದುಳಿದವರು, ಪರಿಶಿಷ್ಟರು, ಮಹಿಳೆಯರು, ರೈತರು ಸೇರಿ ಯಾರನ್ನೂ ನಾವು ಉಪೇಕ್ಷಿಸಬಾರದು’ ಎಂದರು.</p>.<p>‘ಕಲ್ಯಾಣ ಕರ್ನಾಟಕದಲ್ಲಿ ಎಲ್ಲ ಜಾತಿ, ಧರ್ಮಗಳಿವೆ. ರಾಜಕೀಯವಾಗಿ ನೋಡಿದಾಗ, ಎಲ್ಲರನ್ನೂ ಒಟ್ಟಿಗೆ ಒಯ್ಯಬೇಕಾಗುತ್ತದೆ. ಹಾಗೆಂದು, ಈ ಬಜೆಟ್ನ್ನು ನಾನು ಸಮರ್ಥಿಸುವುದಿಲ್ಲ’ ಎಂದರು. </p>.<p>‘ನಾನು ಪಕ್ಷದ ರಾಷ್ಟ್ರೀಯ ನಾಯಕರ ಸಂಪರ್ಕದಲ್ಲಿದ್ದು, ದೂರವಾಣಿಯಲ್ಲಿ ಆಗಾಗ ಚರ್ಚಿಸುತ್ತೇನೆ. ರಾಜ್ಯಕ್ಕೆ ಬಂದ ಅಮಿತ್ ಶಾ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿಲ್ಲ. ಅವರನ್ನು ದೆಹಲಿಯಲ್ಲಿ ಭೇಟಿಯಾಗುವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>