<p><em><strong>ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟೆ ಎನ್ನುವುದು ವಿಜಯನಗರದ ಬಿಜೆಪಿ ಅಭ್ಯರ್ಥಿ <span style="color:#c0392b;">ಆನಂದ್ ಸಿಂಗ್ </span>ಅವರ ಮಂತ್ರ. ‘ನಿಮ್ಮನ್ನು ಅನರ್ಹರು ಅಂದರೆ ಏನು ಅನಿಸುತ್ತದೆ?’ ಎಂಬ ಪ್ರಶ್ನೆಗೂ ಅವರು ಇದೇ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.</strong></em></p>.<p><strong>* ಜನ ನಿಮ್ಮನ್ನು ಐದು ವರ್ಷದ ಅವಧಿಗೆ ಆಯ್ಕೆ ಮಾಡಿದ್ದರು. ಆದರೆ, ನೀವು ಅದಕ್ಕೂ ಮೊದಲೇ ರಾಜೀನಾಮೆ ಕೊಟ್ಟು ಮತದಾರರಿಗೆ ದ್ರೋಹ ಮಾಡಿಲ್ಲವೇ?</strong></p>.<p>ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕೆಲವೊಮ್ಮೆ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ರಾಜೀನಾಮೆ ಕೊಡುವ ಯಾವ ಉದ್ದೇಶವೂ ನನಗಿರಲಿಲ್ಲ. ಆದರೆ, ಮೈತ್ರಿ ಸರ್ಕಾರದ ದುರಾಡಳಿತದಿಂದ ವಿಜಯನಗರ ಕ್ಷೇತ್ರ ಕಡೆಗಣನೆಗೆ ಒಳಗಾಗಿತ್ತು. ಯಾವ ಕೆಲಸಗಳು ಆಗುತ್ತಿರಲಿಲ್ಲ. ಹೀಗಾಗಿ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡೆ. ಈ ಚುನಾವಣೆಗೆ ನಾನು ಕಾರಣನಲ್ಲ. ಸಮ್ಮಿಶ್ರ ಸರ್ಕಾರವೇ ಕಾರಣ.</p>.<p><strong>* ಈ ಚುನಾವಣೆಯಲ್ಲಿ ಜನ ನಿಮ್ಮನ್ನೇಕೇ ನಂಬಬೇಕು?</strong></p>.<p>ಈ ಚುನಾವಣೆ ಆನಂದ್ ಸಿಂಗ್ ಅವರ ಚುನಾವಣೆಯಲ್ಲ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರೆಯಲು, ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ನಡೆಯಬೇಕಾದರೆ ಜನ ಬಿಜೆಪಿಗೆ ಮತ ಹಾಕಬೇಕು.</p>.<p><strong>* ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಿಮ್ಮ ಹೊಸ ಬಂಗಲೆಯ ಗೃಹ ಪ್ರವೇಶ, ಮಗನ ಅದ್ದೂರಿ ಮದುವೆ ಆಯೋಜಿಸಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆ.</strong></p>.<p>ಯಾರು ಈ ರೀತಿ ಮಾತನಾಡುತ್ತಿದ್ದಾರೊ ಅವರು ನಿನ್ನೆ ಮೊನ್ನೆ ರಾಜಕಾರಣಿಗಳಲ್ಲ. ಅವರಿಗೆ ರಾಜಕಾರಣದಲ್ಲಿ ನನ್ನ ವಯಸ್ಸಿನಷ್ಟು ಅನುಭವವಿದೆ. ಇಂತಹ ವಿಚಾರಗಳನ್ನು ಅವರು ಮಾತನಾಡುತ್ತಾರೆ ಎಂದರೆ ಶೋಭೆ ತರುವಂತಹದ್ದಲ್ಲ. ಜನ ಅದಕ್ಕೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ.</p>.<p><strong>* 11 ವರ್ಷ ಶಾಸಕರಾಗಿದ್ದರೂ ವಿಜಯನಗರ ಜಿಲ್ಲೆ ರಚನೆ ಬಗ್ಗೆ ಮಾತಾಡಿರಲಿಲ್ಲ. ಚುನಾವಣೆಯ ಹೊತ್ತಿನಲ್ಲಿ ಈಗೇಕೇ ಮಾತನಾಡುತ್ತಿದ್ದೀರಿ?</strong></p>.<p>ಈ ಹಿಂದೆ ಮಾತನಾಡಿದ್ದೇನೆ. ಈಗ ಸಂಕಲ್ಪ ಮಾಡಿದ್ದೇನೆ. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ಭೌಗೋಳಿಕ ಕಾರಣಕ್ಕಾಗಿ ಜಿಲ್ಲೆಯಾಗುವುದು ಸೂಕ್ತ.</p>.<p><strong>* ನಿಮ್ಮನ್ನು ಅನರ್ಹರು ಅಂದರೆ ಏನು ಅನಿಸುತ್ತದೆ?</strong></p>.<p>ಸುಪ್ರೀಂಕೋರ್ಟ್ ಏನು ಆದೇಶ ಕೊಟ್ಟಿದೆಯೋ ಅದನ್ನು ಒಪ್ಪಿಕೊಳ್ಳಲೇಬೇಕು. ಅದಕ್ಕೆ ಬೇರೆ ಶಬ್ದವಿಲ್ಲ. ಆ ಹಣೆಪಟ್ಟಿ ಹೋಗಬೇಕಾದರೆ ಚುನಾವಣೆಯಲ್ಲಿ ಗೆಲ್ಲಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟೆ ಎನ್ನುವುದು ವಿಜಯನಗರದ ಬಿಜೆಪಿ ಅಭ್ಯರ್ಥಿ <span style="color:#c0392b;">ಆನಂದ್ ಸಿಂಗ್ </span>ಅವರ ಮಂತ್ರ. ‘ನಿಮ್ಮನ್ನು ಅನರ್ಹರು ಅಂದರೆ ಏನು ಅನಿಸುತ್ತದೆ?’ ಎಂಬ ಪ್ರಶ್ನೆಗೂ ಅವರು ಇದೇ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.</strong></em></p>.<p><strong>* ಜನ ನಿಮ್ಮನ್ನು ಐದು ವರ್ಷದ ಅವಧಿಗೆ ಆಯ್ಕೆ ಮಾಡಿದ್ದರು. ಆದರೆ, ನೀವು ಅದಕ್ಕೂ ಮೊದಲೇ ರಾಜೀನಾಮೆ ಕೊಟ್ಟು ಮತದಾರರಿಗೆ ದ್ರೋಹ ಮಾಡಿಲ್ಲವೇ?</strong></p>.<p>ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕೆಲವೊಮ್ಮೆ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ರಾಜೀನಾಮೆ ಕೊಡುವ ಯಾವ ಉದ್ದೇಶವೂ ನನಗಿರಲಿಲ್ಲ. ಆದರೆ, ಮೈತ್ರಿ ಸರ್ಕಾರದ ದುರಾಡಳಿತದಿಂದ ವಿಜಯನಗರ ಕ್ಷೇತ್ರ ಕಡೆಗಣನೆಗೆ ಒಳಗಾಗಿತ್ತು. ಯಾವ ಕೆಲಸಗಳು ಆಗುತ್ತಿರಲಿಲ್ಲ. ಹೀಗಾಗಿ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡೆ. ಈ ಚುನಾವಣೆಗೆ ನಾನು ಕಾರಣನಲ್ಲ. ಸಮ್ಮಿಶ್ರ ಸರ್ಕಾರವೇ ಕಾರಣ.</p>.<p><strong>* ಈ ಚುನಾವಣೆಯಲ್ಲಿ ಜನ ನಿಮ್ಮನ್ನೇಕೇ ನಂಬಬೇಕು?</strong></p>.<p>ಈ ಚುನಾವಣೆ ಆನಂದ್ ಸಿಂಗ್ ಅವರ ಚುನಾವಣೆಯಲ್ಲ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರೆಯಲು, ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ನಡೆಯಬೇಕಾದರೆ ಜನ ಬಿಜೆಪಿಗೆ ಮತ ಹಾಕಬೇಕು.</p>.<p><strong>* ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಿಮ್ಮ ಹೊಸ ಬಂಗಲೆಯ ಗೃಹ ಪ್ರವೇಶ, ಮಗನ ಅದ್ದೂರಿ ಮದುವೆ ಆಯೋಜಿಸಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆ.</strong></p>.<p>ಯಾರು ಈ ರೀತಿ ಮಾತನಾಡುತ್ತಿದ್ದಾರೊ ಅವರು ನಿನ್ನೆ ಮೊನ್ನೆ ರಾಜಕಾರಣಿಗಳಲ್ಲ. ಅವರಿಗೆ ರಾಜಕಾರಣದಲ್ಲಿ ನನ್ನ ವಯಸ್ಸಿನಷ್ಟು ಅನುಭವವಿದೆ. ಇಂತಹ ವಿಚಾರಗಳನ್ನು ಅವರು ಮಾತನಾಡುತ್ತಾರೆ ಎಂದರೆ ಶೋಭೆ ತರುವಂತಹದ್ದಲ್ಲ. ಜನ ಅದಕ್ಕೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ.</p>.<p><strong>* 11 ವರ್ಷ ಶಾಸಕರಾಗಿದ್ದರೂ ವಿಜಯನಗರ ಜಿಲ್ಲೆ ರಚನೆ ಬಗ್ಗೆ ಮಾತಾಡಿರಲಿಲ್ಲ. ಚುನಾವಣೆಯ ಹೊತ್ತಿನಲ್ಲಿ ಈಗೇಕೇ ಮಾತನಾಡುತ್ತಿದ್ದೀರಿ?</strong></p>.<p>ಈ ಹಿಂದೆ ಮಾತನಾಡಿದ್ದೇನೆ. ಈಗ ಸಂಕಲ್ಪ ಮಾಡಿದ್ದೇನೆ. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ಭೌಗೋಳಿಕ ಕಾರಣಕ್ಕಾಗಿ ಜಿಲ್ಲೆಯಾಗುವುದು ಸೂಕ್ತ.</p>.<p><strong>* ನಿಮ್ಮನ್ನು ಅನರ್ಹರು ಅಂದರೆ ಏನು ಅನಿಸುತ್ತದೆ?</strong></p>.<p>ಸುಪ್ರೀಂಕೋರ್ಟ್ ಏನು ಆದೇಶ ಕೊಟ್ಟಿದೆಯೋ ಅದನ್ನು ಒಪ್ಪಿಕೊಳ್ಳಲೇಬೇಕು. ಅದಕ್ಕೆ ಬೇರೆ ಶಬ್ದವಿಲ್ಲ. ಆ ಹಣೆಪಟ್ಟಿ ಹೋಗಬೇಕಾದರೆ ಚುನಾವಣೆಯಲ್ಲಿ ಗೆಲ್ಲಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>