<p><strong>ಕಂಪ್ಲಿ</strong>: ಕಂಪ್ಲಿ ಮತ್ತು ಕುರುಗೋಡು ಉತ್ಸವದ ಲಾಂಛನಗಳು ಹೊಸಪೇಟೆಯ ಬಾಣದಕೇರಿಯ ಕಲಾವಿದ ಬಿ. ದೀಪಕ್ ಕಲ್ಪನೆಯಲ್ಲಿ ಮೂಡಿ ಬಂದಿದೆ. </p>.<p>ಲಾಂಛನದಲ್ಲಿ ಕುಮಾರರಾಮನ ಕೋಟೆಯನ್ನು ಹಿನ್ನೆಲೆಯಲ್ಲಿ ಬಳಸಿಕೊಳ್ಳಲಾಗಿದೆ. ಕೋಟೆಯ ಮೇಲೆ ಕಂಪ್ಲಿಯ ಸೋಮನಾಥೇಶ್ವರ ಮೂರ್ತಿ ಇದೆ. ಸೂರ್ಯರಶ್ಮಿಯಿಂದ ಅಲಂಕೃತಗೊಳಿಸಲಾಗಿದೆ. ಮುಂಭಾಗದಲ್ಲಿ ಸ್ಥಳೀಯ ವೀರಗಲ್ಲು, ಭರತನಾಟ್ಯ ಕಲೆ, ಗಂಡುಗಲಿ ಕುಮಾರರಾಮ ಮೈದೋರಿ ನಿಂತ ಚಿತ್ರ ರಚಿಸಲಾಗಿದೆ. ಬಾಳೆ ಗಿಡಗಳನ್ನು ಸಾಮ್ರಾಜ್ಯದ ಸಮೃದ್ಧತೆಯ ಸಾಂಕೇತಕವಾಗಿ ಬಳಸಲಾಗಿದೆ.</p>.<p>ಕುರುಗೋಡು ಉತ್ಸವದ ಲಾಂಛನದಲ್ಲಿ ದೊಡ್ಡಬಸವೇಶ್ವರ ಗೋಪುರವನ್ನು ಹೊನ್ನ ಕಳಸದಂತೆ ಚಿತ್ರಿಸಲಾಗಿದೆ. ಎಡಭಾಗದಲ್ಲಿ ವೃತ್ತಾಕಾರದಲ್ಲಿ ನೀಲಮ್ಮದೇವಿಯ ಮೂರ್ತಿ, ಮಧ್ಯದಲ್ಲಿ ದೊಡ್ಡಬಸವೇಶ್ವರ ಗದ್ದುಗೆ ಮೂರ್ತಿ ಹಾಗೂ ಬಲಭಾಗದಲ್ಲಿ ಪಂಚಮುಖಿ ವೀರಭದ್ರೇಶ್ವರನ ಮೂರ್ತಿಯನ್ನು ಹಾಗೂ ಗುಹಾಂತರ ದೇವಾಲಯ, ಚಿಕ್ಕಬಸವಣ್ಣ ದೇವಾಲಯ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಾಲಯಗಳನ್ನು ಚಿತ್ರಿಸಲಾಗಿದೆ.</p>.<p>ಕಲಾವಿದ ಬಿ. ದೀಪಕ್ ಧಾರವಾಡ ಭಾರತೀಯ ಕಲಾ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಪೇಂಟಿಂಗ್, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎಫ್.ಎ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ</strong>: ಕಂಪ್ಲಿ ಮತ್ತು ಕುರುಗೋಡು ಉತ್ಸವದ ಲಾಂಛನಗಳು ಹೊಸಪೇಟೆಯ ಬಾಣದಕೇರಿಯ ಕಲಾವಿದ ಬಿ. ದೀಪಕ್ ಕಲ್ಪನೆಯಲ್ಲಿ ಮೂಡಿ ಬಂದಿದೆ. </p>.<p>ಲಾಂಛನದಲ್ಲಿ ಕುಮಾರರಾಮನ ಕೋಟೆಯನ್ನು ಹಿನ್ನೆಲೆಯಲ್ಲಿ ಬಳಸಿಕೊಳ್ಳಲಾಗಿದೆ. ಕೋಟೆಯ ಮೇಲೆ ಕಂಪ್ಲಿಯ ಸೋಮನಾಥೇಶ್ವರ ಮೂರ್ತಿ ಇದೆ. ಸೂರ್ಯರಶ್ಮಿಯಿಂದ ಅಲಂಕೃತಗೊಳಿಸಲಾಗಿದೆ. ಮುಂಭಾಗದಲ್ಲಿ ಸ್ಥಳೀಯ ವೀರಗಲ್ಲು, ಭರತನಾಟ್ಯ ಕಲೆ, ಗಂಡುಗಲಿ ಕುಮಾರರಾಮ ಮೈದೋರಿ ನಿಂತ ಚಿತ್ರ ರಚಿಸಲಾಗಿದೆ. ಬಾಳೆ ಗಿಡಗಳನ್ನು ಸಾಮ್ರಾಜ್ಯದ ಸಮೃದ್ಧತೆಯ ಸಾಂಕೇತಕವಾಗಿ ಬಳಸಲಾಗಿದೆ.</p>.<p>ಕುರುಗೋಡು ಉತ್ಸವದ ಲಾಂಛನದಲ್ಲಿ ದೊಡ್ಡಬಸವೇಶ್ವರ ಗೋಪುರವನ್ನು ಹೊನ್ನ ಕಳಸದಂತೆ ಚಿತ್ರಿಸಲಾಗಿದೆ. ಎಡಭಾಗದಲ್ಲಿ ವೃತ್ತಾಕಾರದಲ್ಲಿ ನೀಲಮ್ಮದೇವಿಯ ಮೂರ್ತಿ, ಮಧ್ಯದಲ್ಲಿ ದೊಡ್ಡಬಸವೇಶ್ವರ ಗದ್ದುಗೆ ಮೂರ್ತಿ ಹಾಗೂ ಬಲಭಾಗದಲ್ಲಿ ಪಂಚಮುಖಿ ವೀರಭದ್ರೇಶ್ವರನ ಮೂರ್ತಿಯನ್ನು ಹಾಗೂ ಗುಹಾಂತರ ದೇವಾಲಯ, ಚಿಕ್ಕಬಸವಣ್ಣ ದೇವಾಲಯ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಾಲಯಗಳನ್ನು ಚಿತ್ರಿಸಲಾಗಿದೆ.</p>.<p>ಕಲಾವಿದ ಬಿ. ದೀಪಕ್ ಧಾರವಾಡ ಭಾರತೀಯ ಕಲಾ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಪೇಂಟಿಂಗ್, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎಫ್.ಎ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>