‘ಇಂದಿರಾ ಚಾರಿಟಬಲ್ ಅಂಡ್ ಎಜ್ಯುಕೇಶನ್ ಟ್ರಸ್ಟ್ ಹೆಸರಿನಲ್ಲಿ ಕಾಲೇಜು ನಡೆಸಲಾಗುತ್ತಿದೆ. ಇಂದಿರಾ ನನ್ನ ತಂಗಿಯ ಹೆಸರು. ಅವಳು ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದಾಳೆ. ಅವಳ ನೆನಪಿನಲ್ಲಿ ‘ಇಂದು’ ಕಾಲೇಜು ನಡೆಸಲಾಗುತ್ತಿದೆ. ಪಿ.ಯು ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ವಾರ್ಷಿಕ ₹20,000, ವಿಜ್ಞಾನ ವಿಭಾಗದವರಿಗೆ ₹30,000 ಶುಲ್ಕ ವಿಧಿಸುತ್ತೇವೆ. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದರೆ ಅಂತಹವರಿಗೆ ರಿಯಾಯಿತಿ ಕೊಟ್ಟು ಪ್ರೋತ್ಸಾಹಿಸುತ್ತೇವೆ’ ಎಂದು ಕಾಲೇಜಿನ ಆಡಳಿತಾಧಿಕಾರಿ ಎಚ್.ಎನ್. ವೀರಭದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.