<p><strong>ಹೂವಿನಹಡಗಲಿ</strong>: ಫೆ. 12ರಂದು ಜರುಗುವ ಕೊಟ್ಟೂರೇಶ್ವರ ರಥೋತ್ಸವ ಪ್ರಯುಕ್ತ ಕೊಟ್ಟೂರು ಸುಕ್ಷೇತ್ರಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರಿಗೆ ತಾಲ್ಲೂಕಿನ ಹೊಳಗುಂದಿ, ಉತ್ತಂಗಿ ಗ್ರಾಮಸ್ಥರು ಆತಿಥ್ಯ ನೀಡಿ ಸತ್ಕರಿಸುತ್ತಿದ್ದಾರೆ.</p>.<p>ತಾಲ್ಲೂಕಿನ ವಿವಿಧ ಹಳ್ಳಿಗಳ ಭಕ್ತರು ಸೇರಿದಂತೆ ಗದಗ, ಕೊಪ್ಪಳ ಜಿಲ್ಲೆಗಳ ಕೊಟ್ಟೂರೇಶ್ವರ ಸ್ವಾಮಿ ಭಕ್ತರು ತಂಡ ತಂಡವಾಗಿ ಪಾದಯಾತ್ರೆ ಹೊರಟಿದ್ದಾರೆ.</p>.<p>ಹೊಳಗುಂದಿಯ ಸಿದ್ದೇಶ್ವರ ಪ್ಲಾಟ್ನ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೊಟ್ಟೂರೇಶ್ವರ ಟ್ರಸ್ಟ್ ನವರು ಪಾದಯಾತ್ರಿಗಳಿಗೆ 9ನೇ ವರ್ಷದ ಪ್ರಸಾದ ಸೇವೆ ಹಮ್ಮಿಕೊಂಡಿದ್ದಾರೆ. ನಿವೃತ್ತ ಶಿಕ್ಷಕ ಯು.ವೀರೇಶ, ಬಿ.ಶಿವಪ್ಪ, ಎಂ.ನಾಗರಾಜ, ಸಂತೋಷ, ಸಿದ್ದಪ್ಪ ಕಮ್ಮಾರ, ಡಿ.ಮಲ್ಲಿಕಾರ್ಜುನ, ಆನಂದ, ಯು.ಜೋಗಪ್ಪ, ಕಮ್ಮಾರ ಕೊಟ್ರೇಶ ಇದ್ದರು.</p>.<p>ಉತ್ತಂಗಿ ಕ್ರಾಸ್ನಲ್ಲಿ ಕೊಟ್ಟೂರೇಶ್ವರ ಪ್ರಸಾದ ಬಳಗದ ಗೆಳೆಯರು ಶಾಮಿಯಾನ ಹಾಕಿ ಪಾದಯಾತ್ರಿಗಳ ವಿಶ್ರಾಂತಿಗೆ ಅನುಕೂಲ ಮಾಡಿದ್ದಾರೆ. ಉಪಾಹಾರ, ಕುಡಿಯುವ ನೀರು, ವೈದ್ಯಕೀಯ ಶುಶ್ರೂಷೆ ವ್ಯವಸ್ಥೆ ಮಾಡಿದ್ದಾರೆ.</p>.<p>ಪಾದಯಾತ್ರಿಗಳ ಪ್ರಸಾದ ಸೇವೆಗೆ ಸೋಮಶಂಕರ ಸ್ವಾಮೀಜಿ ಚಾಲನೆ ನೀಡಿದರು. ವೈದ್ಯಾಧಿಕಾರಿ ಡಾ. ಗಂಗಾ, ಗ್ರಾಮ ಲೆಕ್ಕಾಧಿಕಾರಿ ಚೈತ್ರಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ಫೆ. 12ರಂದು ಜರುಗುವ ಕೊಟ್ಟೂರೇಶ್ವರ ರಥೋತ್ಸವ ಪ್ರಯುಕ್ತ ಕೊಟ್ಟೂರು ಸುಕ್ಷೇತ್ರಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರಿಗೆ ತಾಲ್ಲೂಕಿನ ಹೊಳಗುಂದಿ, ಉತ್ತಂಗಿ ಗ್ರಾಮಸ್ಥರು ಆತಿಥ್ಯ ನೀಡಿ ಸತ್ಕರಿಸುತ್ತಿದ್ದಾರೆ.</p>.<p>ತಾಲ್ಲೂಕಿನ ವಿವಿಧ ಹಳ್ಳಿಗಳ ಭಕ್ತರು ಸೇರಿದಂತೆ ಗದಗ, ಕೊಪ್ಪಳ ಜಿಲ್ಲೆಗಳ ಕೊಟ್ಟೂರೇಶ್ವರ ಸ್ವಾಮಿ ಭಕ್ತರು ತಂಡ ತಂಡವಾಗಿ ಪಾದಯಾತ್ರೆ ಹೊರಟಿದ್ದಾರೆ.</p>.<p>ಹೊಳಗುಂದಿಯ ಸಿದ್ದೇಶ್ವರ ಪ್ಲಾಟ್ನ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೊಟ್ಟೂರೇಶ್ವರ ಟ್ರಸ್ಟ್ ನವರು ಪಾದಯಾತ್ರಿಗಳಿಗೆ 9ನೇ ವರ್ಷದ ಪ್ರಸಾದ ಸೇವೆ ಹಮ್ಮಿಕೊಂಡಿದ್ದಾರೆ. ನಿವೃತ್ತ ಶಿಕ್ಷಕ ಯು.ವೀರೇಶ, ಬಿ.ಶಿವಪ್ಪ, ಎಂ.ನಾಗರಾಜ, ಸಂತೋಷ, ಸಿದ್ದಪ್ಪ ಕಮ್ಮಾರ, ಡಿ.ಮಲ್ಲಿಕಾರ್ಜುನ, ಆನಂದ, ಯು.ಜೋಗಪ್ಪ, ಕಮ್ಮಾರ ಕೊಟ್ರೇಶ ಇದ್ದರು.</p>.<p>ಉತ್ತಂಗಿ ಕ್ರಾಸ್ನಲ್ಲಿ ಕೊಟ್ಟೂರೇಶ್ವರ ಪ್ರಸಾದ ಬಳಗದ ಗೆಳೆಯರು ಶಾಮಿಯಾನ ಹಾಕಿ ಪಾದಯಾತ್ರಿಗಳ ವಿಶ್ರಾಂತಿಗೆ ಅನುಕೂಲ ಮಾಡಿದ್ದಾರೆ. ಉಪಾಹಾರ, ಕುಡಿಯುವ ನೀರು, ವೈದ್ಯಕೀಯ ಶುಶ್ರೂಷೆ ವ್ಯವಸ್ಥೆ ಮಾಡಿದ್ದಾರೆ.</p>.<p>ಪಾದಯಾತ್ರಿಗಳ ಪ್ರಸಾದ ಸೇವೆಗೆ ಸೋಮಶಂಕರ ಸ್ವಾಮೀಜಿ ಚಾಲನೆ ನೀಡಿದರು. ವೈದ್ಯಾಧಿಕಾರಿ ಡಾ. ಗಂಗಾ, ಗ್ರಾಮ ಲೆಕ್ಕಾಧಿಕಾರಿ ಚೈತ್ರಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>