<p><strong>ಕುರುಗೋಡು</strong>: ಶಾರ್ಟ್ ಸರ್ಕಿಟ್ನಿಂದ ಮೂರು ಗುಡಿಸಲುಗಳು ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ಯರಿಂಗಳಿಗಿ ಕ್ಯಾಂಪ್ನಲ್ಲಿ ಭಾನುವಾರ ಜರುಗಿದೆ.</p>.<p>ಹೊನ್ನೂರುಸ್ವಾಮಿ, ಮಲ್ಲಯ್ಯ ಮತ್ತು ಕೃಷ್ಣ ಎನ್ನುವ ರೈತರಿಗೆ ಸೇರಿದ ಗುಡಿಸಲುಗಳು ಎಂದು ಗುರುತಿಸಲಾಗಿದೆ.</p>.<p>ಮಲ್ಲಯ್ಯನ ಗುಡಿಸಲಿನಲ್ಲಿದ್ದ ₹ 3 ಲಕ್ಷ ನಗದು ಮತ್ತು 5 ಗ್ರಾಂ. ಚಿನ್ನ, ಹೊನ್ನೂರಸ್ವಾಮಿ ಅವರ ಗುಡಿಸಲಿನಲ್ಲಿ ಮಕ್ಕಳ ಅಂಕಪಟ್ಟಿ, ಶಿಕ್ಷಣ ಪ್ರಮಾಣ ಪತ್ರ ಮತ್ತು ಭಾಗ್ಯಲಕ್ಷ್ಮಿ ಬಾಂಡ್, ಕೃಷ್ಣವರ ಗುಡಿಸಲಿನಲ್ಲಿ ದವಸ ಧಾನ್ಯ, ಟಿವಿ, ಫ್ರಿಡ್ಜ್, ನಿತ್ಯಬಳಕೆ ವಸ್ತುಗಳು ಸುಟ್ಟು ನಷ್ಟವಾಗಿವೆ.</p>.<p>ಮಲ್ಲಯ್ಯ ಅವರ ಗುಡಿಸಲಿನಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಬೆಂಕಿಯ ಪ್ರಮಾಣ ಹೆಚ್ಚಾಗಿ ನೆರೆಯ ಎರಡು ಗುಡಿಸಲುಗಳಿಗೆ ವ್ಯಾಪಿಸಿ ಘಟನೆ ಸಂಭವಿಸಿದೆ.</p>.<p>ಕುರುಗೋಡಿನ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿಗೆ ಸಂಭವಿಸಬಹುದಾಗಿ್ದ ಅನಾಹುತ ತಪ್ಪಿಸಿದ್ದಾರೆ.</p>.<p>ನರಸಪ್ಪ ತಹಶೀಲ್ದಾರ್, ಪಿಎಸ್ಐ ಸುಪ್ರಿತ್ ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು</strong>: ಶಾರ್ಟ್ ಸರ್ಕಿಟ್ನಿಂದ ಮೂರು ಗುಡಿಸಲುಗಳು ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ಯರಿಂಗಳಿಗಿ ಕ್ಯಾಂಪ್ನಲ್ಲಿ ಭಾನುವಾರ ಜರುಗಿದೆ.</p>.<p>ಹೊನ್ನೂರುಸ್ವಾಮಿ, ಮಲ್ಲಯ್ಯ ಮತ್ತು ಕೃಷ್ಣ ಎನ್ನುವ ರೈತರಿಗೆ ಸೇರಿದ ಗುಡಿಸಲುಗಳು ಎಂದು ಗುರುತಿಸಲಾಗಿದೆ.</p>.<p>ಮಲ್ಲಯ್ಯನ ಗುಡಿಸಲಿನಲ್ಲಿದ್ದ ₹ 3 ಲಕ್ಷ ನಗದು ಮತ್ತು 5 ಗ್ರಾಂ. ಚಿನ್ನ, ಹೊನ್ನೂರಸ್ವಾಮಿ ಅವರ ಗುಡಿಸಲಿನಲ್ಲಿ ಮಕ್ಕಳ ಅಂಕಪಟ್ಟಿ, ಶಿಕ್ಷಣ ಪ್ರಮಾಣ ಪತ್ರ ಮತ್ತು ಭಾಗ್ಯಲಕ್ಷ್ಮಿ ಬಾಂಡ್, ಕೃಷ್ಣವರ ಗುಡಿಸಲಿನಲ್ಲಿ ದವಸ ಧಾನ್ಯ, ಟಿವಿ, ಫ್ರಿಡ್ಜ್, ನಿತ್ಯಬಳಕೆ ವಸ್ತುಗಳು ಸುಟ್ಟು ನಷ್ಟವಾಗಿವೆ.</p>.<p>ಮಲ್ಲಯ್ಯ ಅವರ ಗುಡಿಸಲಿನಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಬೆಂಕಿಯ ಪ್ರಮಾಣ ಹೆಚ್ಚಾಗಿ ನೆರೆಯ ಎರಡು ಗುಡಿಸಲುಗಳಿಗೆ ವ್ಯಾಪಿಸಿ ಘಟನೆ ಸಂಭವಿಸಿದೆ.</p>.<p>ಕುರುಗೋಡಿನ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿಗೆ ಸಂಭವಿಸಬಹುದಾಗಿ್ದ ಅನಾಹುತ ತಪ್ಪಿಸಿದ್ದಾರೆ.</p>.<p>ನರಸಪ್ಪ ತಹಶೀಲ್ದಾರ್, ಪಿಎಸ್ಐ ಸುಪ್ರಿತ್ ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>