<p><strong>ಕುರುಗೋಡು:</strong> ಸರಿಗಮಪ ಖ್ಯಾತಿಯ ಶಿವಾನಿ ಅವರು ಭಕ್ತಿರಸದಲ್ಲಿ ಪ್ರಸ್ತುತಪಡಿಸಿದ ‘ಕೇಳೋ ಮಾದೇವ ಮನ್ಸನಾ ಜೀವಾ’ ಹಾಡು ಜನರನ್ನು ಮಂತ್ರಮುಗ್ಧಗೊಳಿಸಿತು.</p>.<p>ಚಂದನ್ ಶೆಟ್ಟಿ ಮತ್ತು ಅಲೋಕ್ ಬಾಬು ಹಾಡಿದ ‘ವಾರೆನೋಟ ನೋಡೈತೆ, ಕಾಲುಕೆರೆದು ನಿಂತೈತೆ’ ಹಾಡಿಗೆ ಪಡ್ಡೆ ಹುಡುಗರು ಖುರ್ಚಿಗಳ ಮೇಲೆ ನಿಂತು ಕೆಕ್ಕೆ ಹಾಕುತ್ತಾ ಹೆಜ್ಜೆಹಾಕಿದರು.</p>.<p>ಕುರುಗೋಡು ಉತ್ಸವದ ಅಂಗವಾಗಿ ಇಲ್ಲಿನ ದೊಡ್ಡಬಸವೇಶ್ವರ ವೇದಿಕೆಯಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡುಬಂದಿತು.</p>.<p>ಬಾಳು ಬೆಳಗುಂದಿ ಅವರ ‘ಕುಣಿತಾಳೋ, ಕುಣಿತಾಳು.. ಮತ್ತು ಮಾಳು ನಿಪನಾಳ್ ಅವರ ‘ನಾ ಡ್ರೈವರ್, ನೀ ನನ್ನ ಲವ್ವರ’ ಹಾಡಿಗೆ ನೆರೆದಿದ್ದ ಜನರು ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿ ಕುಣಿದು ಕುಪ್ಪಳಿಸಿದರು.</p>.<p>ಕಾಮಿಡಿ ಕಿಲಾಡಿಗಳ ತಂಡದೊಂದಿಗೆ ನಿರೂಪಕಿ ಅನುಶ್ರೀ ಹಾಡಿದ ಪುನಿತ್ ರಾಜ್ ಕುಮಾರ್ ಅವರ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಹಾಡಿಗೆ ಯುವಕರು ಮೊಬೈಲ್ ಟಾರ್ಚ್ ಆನ್ ಮಾಡಿ ಪ್ರೋತ್ಸಾಹಿಸಿದರು.</p>.<p>ಚಂದನ್ ಶೆಟ್ಟಿ ಹಾಡಿದ ಉಪೇಂದ್ರ ಅವರ ‘ಉಪ್ಪಿಗಿಂತ ರುಚಿ ಬೇರೆಯಿಲ್ಲ. ಒಪ್ಪಿಕೊಂಡೋರು ದಡ್ಡರಲ್ಲ’ ಹಾಡಿಗೆ ಶಾಸಕ ಜೆ.ಎನ್. ಗಣೇಶ್ ಹೆಜ್ಜೆಹಾಕಿದ್ದು ಗಮನಸೆಳೆಯಿತು.</p>.<p>ಕಾಮಿಡಿ ಕಿಲಾಡಿಗಳು ತಂಡದ ರಾಘವೇಂದ್ರ, ಶಿವು ಮತ್ತು ತಂಡದ ಸದಸ್ಯರು ಪ್ರಸ್ತತಪಡಿಸಿದ ಹಾಸ್ಯ ಸನ್ನಿವೇಶಗಳು ಜನರನ್ನು ಹಾಸ್ಯದ ಕಡದಲ್ಲಿ ತೇಲುವಂತೆ ಮಾಡಿತು.</p>.<p>ಮಧ್ಯರಾತ್ರಿ 1 ಗಂಟೆವರೆಗೆ ಜರುಗಿದ ರಸಮಂಜರಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗು ಕಣ್ತುಂಬಿಕೊಳ್ಳಲು ಜನರು ಚದುರದೆ ಕೂತಿದ್ದು ವಿಶೇಷವಾಗಿತ್ತು.</p>.<p>ಪ್ರಾರಂಭದಲ್ಲಿ ಸ್ಥಳೀಯ ಕಲಾವಿದರ ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.</p>
<p><strong>ಕುರುಗೋಡು:</strong> ಸರಿಗಮಪ ಖ್ಯಾತಿಯ ಶಿವಾನಿ ಅವರು ಭಕ್ತಿರಸದಲ್ಲಿ ಪ್ರಸ್ತುತಪಡಿಸಿದ ‘ಕೇಳೋ ಮಾದೇವ ಮನ್ಸನಾ ಜೀವಾ’ ಹಾಡು ಜನರನ್ನು ಮಂತ್ರಮುಗ್ಧಗೊಳಿಸಿತು.</p>.<p>ಚಂದನ್ ಶೆಟ್ಟಿ ಮತ್ತು ಅಲೋಕ್ ಬಾಬು ಹಾಡಿದ ‘ವಾರೆನೋಟ ನೋಡೈತೆ, ಕಾಲುಕೆರೆದು ನಿಂತೈತೆ’ ಹಾಡಿಗೆ ಪಡ್ಡೆ ಹುಡುಗರು ಖುರ್ಚಿಗಳ ಮೇಲೆ ನಿಂತು ಕೆಕ್ಕೆ ಹಾಕುತ್ತಾ ಹೆಜ್ಜೆಹಾಕಿದರು.</p>.<p>ಕುರುಗೋಡು ಉತ್ಸವದ ಅಂಗವಾಗಿ ಇಲ್ಲಿನ ದೊಡ್ಡಬಸವೇಶ್ವರ ವೇದಿಕೆಯಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡುಬಂದಿತು.</p>.<p>ಬಾಳು ಬೆಳಗುಂದಿ ಅವರ ‘ಕುಣಿತಾಳೋ, ಕುಣಿತಾಳು.. ಮತ್ತು ಮಾಳು ನಿಪನಾಳ್ ಅವರ ‘ನಾ ಡ್ರೈವರ್, ನೀ ನನ್ನ ಲವ್ವರ’ ಹಾಡಿಗೆ ನೆರೆದಿದ್ದ ಜನರು ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿ ಕುಣಿದು ಕುಪ್ಪಳಿಸಿದರು.</p>.<p>ಕಾಮಿಡಿ ಕಿಲಾಡಿಗಳ ತಂಡದೊಂದಿಗೆ ನಿರೂಪಕಿ ಅನುಶ್ರೀ ಹಾಡಿದ ಪುನಿತ್ ರಾಜ್ ಕುಮಾರ್ ಅವರ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಹಾಡಿಗೆ ಯುವಕರು ಮೊಬೈಲ್ ಟಾರ್ಚ್ ಆನ್ ಮಾಡಿ ಪ್ರೋತ್ಸಾಹಿಸಿದರು.</p>.<p>ಚಂದನ್ ಶೆಟ್ಟಿ ಹಾಡಿದ ಉಪೇಂದ್ರ ಅವರ ‘ಉಪ್ಪಿಗಿಂತ ರುಚಿ ಬೇರೆಯಿಲ್ಲ. ಒಪ್ಪಿಕೊಂಡೋರು ದಡ್ಡರಲ್ಲ’ ಹಾಡಿಗೆ ಶಾಸಕ ಜೆ.ಎನ್. ಗಣೇಶ್ ಹೆಜ್ಜೆಹಾಕಿದ್ದು ಗಮನಸೆಳೆಯಿತು.</p>.<p>ಕಾಮಿಡಿ ಕಿಲಾಡಿಗಳು ತಂಡದ ರಾಘವೇಂದ್ರ, ಶಿವು ಮತ್ತು ತಂಡದ ಸದಸ್ಯರು ಪ್ರಸ್ತತಪಡಿಸಿದ ಹಾಸ್ಯ ಸನ್ನಿವೇಶಗಳು ಜನರನ್ನು ಹಾಸ್ಯದ ಕಡದಲ್ಲಿ ತೇಲುವಂತೆ ಮಾಡಿತು.</p>.<p>ಮಧ್ಯರಾತ್ರಿ 1 ಗಂಟೆವರೆಗೆ ಜರುಗಿದ ರಸಮಂಜರಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗು ಕಣ್ತುಂಬಿಕೊಳ್ಳಲು ಜನರು ಚದುರದೆ ಕೂತಿದ್ದು ವಿಶೇಷವಾಗಿತ್ತು.</p>.<p>ಪ್ರಾರಂಭದಲ್ಲಿ ಸ್ಥಳೀಯ ಕಲಾವಿದರ ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.</p>