ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ: ಲಾರಿ - ಕ್ರೂಸರ್ ಡಿಕ್ಕಿ, ಏಳು ಜನ ದಾರುಣ ಸಾವು

Published 15 ಮೇ 2023, 12:18 IST
Last Updated 15 ಮೇ 2023, 12:18 IST
ಅಕ್ಷರ ಗಾತ್ರ

ಕಂಪ್ಲಿ: ಆಂಧ್ರಪ್ರದೇಶದ ವೈಎಸ್ಆರ್ ಜಿಲ್ಲೆ ಕೊಂಡಾಪುರ ಮಂಡಲದ ಏಟೂರು ಗ್ರಾಮದ ಚಿತ್ರಾವತಿ ಸೇತುವೆ ಸಮೀಪ ಲಾರಿ ಮತ್ತು ಕ್ರೂಸರ್ ವಾಹನದ ನಡುವೆ ಸೋಮವಾರ ನಸುಕಿನಲ್ಲಿ ಸಂಭವಿಸಿದ ಡಿಕ್ಕಿಯಲ್ಲಿ ನಾಲ್ವರು ಸಹೋದರಿಯರು ಸೇರಿದಂತೆ ಏಳು ಜನರು ದಾರುಣವಾಗಿ ಸಾವಿಗೀಡಾಗಿದ್ದಾರೆ.

ಈ ಅಪಘಾತದಲ್ಲಿ ಕಂಪ್ಲಿಯ ಲಕ್ಷ್ಮಿದೇವಿ ಅಲಿಯಾಸ್ ಬುಜ್ಜಿ(40) ಮೃತಪಟ್ಟಿದ್ದಾರೆ. ಇವರ ಮಗಳಾದ ಮೇಘನಾರೆಡ್ಡಿ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ‌ಮತ್ತೊಬ್ಬ ಮಗಳು ಶಿಲ್ಪಾರೆಡ್ಡಿ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಷಯ ತಿಳಿದು ಬೈಕ್ ನಲ್ಲಿ ತೆರಳುತ್ತಿದ್ದ ಇಲ್ಲಿಯ ಗುತ್ತಿಗೆದಾರ ಭಾಸ್ಕರರೆಡ್ಡಿ ಲಕ್ಷ್ಮಿಪುರ ಬಳಿ ನಾಯಿ ದಿಢೀರ್ ಅಡ್ಡ ಬಂದಿದ್ದರಿಂದ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಅಪಘಾತ ಸ್ಥಳ ತಲುಪಿದ್ದಾರೆ.

ಇವರ ಪತ್ನಿ ಲಕ್ಷ್ಮಿದೇವಿ, ಸಹೋದರಿಯರಾದ ಸುಭದ್ರ, ಸುಮಾ, ಪೆದ್ದಕ್ಕ ಮತ್ತು ಪೆದ್ದಕ್ಕ ಪುತ್ರ ದಿಲೀಪ್ ಕುಮಾರ್ ರೆಡ್ಡಿ ಅಪಘಾತದಲ್ಲಿ ಮೃತಪಟ್ಟಿದ್ದು, ಅರ್ಲಗಡ್ಡ ಸಮೀಪದ ಜಂಬಲದಿನ್ನಿಯಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT