ಕುರುಗೋಡು: ಇಲ್ಲಿಗೆ ಸಮೀಪದ ಸಿದ್ದರಾಂಪುರ ಗ್ರಾಮದಲ್ಲಿ ಕದಳೀವನ ಸಿದ್ದೇಶ್ವರ ತಾತನವರ 19ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಡಿ.26ರಂದು ಉಚಿತ ಸಾಮೂಹಿಕ ವಿವಾಹ ಮತ್ತು ಜಂಗಮ ವಟುಗಳಿಗೆ ಶಿವಧೀಕ್ಷೆ ಕಾರ್ಯಕ್ರಮ ಆಯೋಜಿಸಿದೆ.
ಆಸಕ್ತರು ಡಿ.20ರ ಒಳಗಾಗಿ ಹೆಸರು ನೋಂದಾಯಿಸಿಕೊಂಡು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀಮಠದ ಪೀಠಾಧಿಪತಿ ಚಿದಾನಂದ ತಾತನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 99808 65722, 99026 55029, 99801 20244, 77608 79023, 99012 80734 ಸಂಪರ್ಕಿಸಬಹುದು.