<p><strong>ಹೂವಿನಹಡಗಲಿ</strong>: ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯಿತಿಯ ವಿವಿಧ ಅನುದಾನಗಳನ್ನು ನಿಯಮ ಬಾಹಿರವಾಗಿ ಪಾವತಿಸಿದ ಆರೋಪದಡಿ ಗ್ರಾ.ಪಂ. ಸದಸ್ಯ ಕಂಠಿ ವೀರೇಶ್ ಅವರ ಸದಸ್ಯತ್ವವನ್ನು ಸರ್ಕಾರ ಅನರ್ಹಗೊಳಿಸಿದೆ.</p>.<p>‘2015-2020ರ ಐದು ವರ್ಷ ಅವಧಿಗೆ ಗ್ರಾ.ಪಂ. ಅಧ್ಯಕ್ಷರಾಗಿದ್ದ ಕಂಠಿ ವೀರೇಶ್ ಅವರು 14ನೇ ಹಣಕಾಸು ಯೋಜನೆ, ಗ್ರಾಮ ವಿಕಾಸ ಯೋಜನೆ, ಗ್ರಾ.ಪಂ. ನಿಧಿ-1 ಮತ್ತು ನರೇಗಾ ಯೋಜನೆ ಸೇರಿ ಒಟ್ಟು ₹ 1,45,93,597 ಗಳನ್ನು ಸರ್ಕಾರದ ನಿಯಮ ಉಲ್ಲಂಘಿಸಿ ಹಣ ಪಾವತಿಸಿ, ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ನಂದಿಹಳ್ಳಿಯ ವಿ.ಬಿ.ಶಿವಾನಂದ ದೂರು ನೀಡಿದ್ದರು.</p>.<p>ಈ ಕುರಿತು ಆಂತರಿಕ ಲೆಕ್ಕ ಸಮಿತಿಯ ತನಿಖಾ ವರದಿ, ವಿಚಾರಣಾ ಅಧಿಕಾರಿಗಳ ವರದಿಗಳ ಕುರಿತು ಇತ್ತೀಚಿಗೆ ವಿಚಾರಣೆ ನಡೆಸಿದ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅರೆ ನ್ಯಾಯಿಕ ನ್ಯಾಯಾಲಯವು ಹಣ ದುರ್ಬಳಕೆ ಆರೋಪ ದೃಢಪಟ್ಟಿದೆ ಎಂದು ಘೋಷಿಸಿದೆ.</p>.<p>‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರನ್ವಯ ಮುಂದಿನ ಆರು ವರ್ಷ ಆರೋಪಿತರು ಚುನಾವಣೆಗೆ ನಿಲ್ಲದಂತೆ ಸದಸ್ಯತ್ವದಿಂದ ಅನರ್ಹಗೊಳಿಸಿ, ದುರುಪಯೋಗವಾಗಿರುವ ಮೊತ್ತವನ್ನು ಕಂಠಿ ವೀರೇಶ್ ಹಾಗೂ ಆ ಅವಧಿಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದವರಿಂದ ಸಮ ಕಂತುಗಳಲ್ಲಿ ಪಾವತಿಸಲು ಕ್ರಮ ಕೈಗೊಳ್ಳುವಂತೆ ಅರೆ ನ್ಯಾಯಿಕ ನ್ಯಾಯಾಲಯದ ಪೀಠಾಧಿಕಾರಿ ಶಿವಕುಮಾರ್ ಅವರು ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದಾರೆ.</p>.<p>ನರೇಗಾ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಕಂಠಿ ವೀರೇಶ್ ಅವರ ಸದಸ್ಯತ್ವವನ್ನು ಈ ಹಿಂದೆ ಸರ್ಕಾರ ಏಳು ಬಾರಿ ರದ್ದುಗೊಳಿಸಿತ್ತು. ಎಲ್ಲ ಪ್ರಕರಣಗಳಿಗೂ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯಿತಿಯ ವಿವಿಧ ಅನುದಾನಗಳನ್ನು ನಿಯಮ ಬಾಹಿರವಾಗಿ ಪಾವತಿಸಿದ ಆರೋಪದಡಿ ಗ್ರಾ.ಪಂ. ಸದಸ್ಯ ಕಂಠಿ ವೀರೇಶ್ ಅವರ ಸದಸ್ಯತ್ವವನ್ನು ಸರ್ಕಾರ ಅನರ್ಹಗೊಳಿಸಿದೆ.</p>.<p>‘2015-2020ರ ಐದು ವರ್ಷ ಅವಧಿಗೆ ಗ್ರಾ.ಪಂ. ಅಧ್ಯಕ್ಷರಾಗಿದ್ದ ಕಂಠಿ ವೀರೇಶ್ ಅವರು 14ನೇ ಹಣಕಾಸು ಯೋಜನೆ, ಗ್ರಾಮ ವಿಕಾಸ ಯೋಜನೆ, ಗ್ರಾ.ಪಂ. ನಿಧಿ-1 ಮತ್ತು ನರೇಗಾ ಯೋಜನೆ ಸೇರಿ ಒಟ್ಟು ₹ 1,45,93,597 ಗಳನ್ನು ಸರ್ಕಾರದ ನಿಯಮ ಉಲ್ಲಂಘಿಸಿ ಹಣ ಪಾವತಿಸಿ, ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ನಂದಿಹಳ್ಳಿಯ ವಿ.ಬಿ.ಶಿವಾನಂದ ದೂರು ನೀಡಿದ್ದರು.</p>.<p>ಈ ಕುರಿತು ಆಂತರಿಕ ಲೆಕ್ಕ ಸಮಿತಿಯ ತನಿಖಾ ವರದಿ, ವಿಚಾರಣಾ ಅಧಿಕಾರಿಗಳ ವರದಿಗಳ ಕುರಿತು ಇತ್ತೀಚಿಗೆ ವಿಚಾರಣೆ ನಡೆಸಿದ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅರೆ ನ್ಯಾಯಿಕ ನ್ಯಾಯಾಲಯವು ಹಣ ದುರ್ಬಳಕೆ ಆರೋಪ ದೃಢಪಟ್ಟಿದೆ ಎಂದು ಘೋಷಿಸಿದೆ.</p>.<p>‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರನ್ವಯ ಮುಂದಿನ ಆರು ವರ್ಷ ಆರೋಪಿತರು ಚುನಾವಣೆಗೆ ನಿಲ್ಲದಂತೆ ಸದಸ್ಯತ್ವದಿಂದ ಅನರ್ಹಗೊಳಿಸಿ, ದುರುಪಯೋಗವಾಗಿರುವ ಮೊತ್ತವನ್ನು ಕಂಠಿ ವೀರೇಶ್ ಹಾಗೂ ಆ ಅವಧಿಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದವರಿಂದ ಸಮ ಕಂತುಗಳಲ್ಲಿ ಪಾವತಿಸಲು ಕ್ರಮ ಕೈಗೊಳ್ಳುವಂತೆ ಅರೆ ನ್ಯಾಯಿಕ ನ್ಯಾಯಾಲಯದ ಪೀಠಾಧಿಕಾರಿ ಶಿವಕುಮಾರ್ ಅವರು ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದಾರೆ.</p>.<p>ನರೇಗಾ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಕಂಠಿ ವೀರೇಶ್ ಅವರ ಸದಸ್ಯತ್ವವನ್ನು ಈ ಹಿಂದೆ ಸರ್ಕಾರ ಏಳು ಬಾರಿ ರದ್ದುಗೊಳಿಸಿತ್ತು. ಎಲ್ಲ ಪ್ರಕರಣಗಳಿಗೂ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>