<p><strong>ಬಳ್ಳಾರಿ</strong>: ಆಂಧ್ರ ಪ್ರದೇಶದಲ್ಲಿ ಒಎಂಸಿಯು ಮೂರು ಗಣಿಗಳನ್ನು ಹೊಂದಿರುತ್ತದೆ. ಅದರಲ್ಲಿ ಮಲಪನಗುಡಿಯ ಅಂತರಗಂಗಮ್ಮ ಕೊಂಡ ಎಂಬಲ್ಲಿದ್ದ 68 ಹೆಕ್ಟೇರ್ ಪ್ರದೇಶದ ಗಣಿಯೂ ಒಂದು. ಈ ಗಣಿಯೂ ಮೂಲತಃ ಟಪಾಲ್ ಗಣೇಶ್ ಕುಟುಂಬದ್ದಾಗಿದ್ದು, ಒಎಂಸಿಗೆ ಮರು ಮಂಜೂರಾಗಿರುತ್ತದೆ. </p>.<p>2008ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿ ಉಸ್ತುವಾರಿ ಸಚಿವರು ಆಗುತ್ತಾರೆ. ತಮ್ಮ ಪ್ರಭಾವ ಬಳಸಿಕೊಂಡು, ಮಲಪನಗುಡಿಯಲ್ಲಿರುವ ತಮ್ಮ ಗಣಿ ಸುತ್ತಮುತ್ತಲ ಗಣಿ ಕಂಪನಿಗಳಾದ ಹಿಂದ್ ಟ್ರೇಡರ್ಸ್, ಮೆಹಬೂಟ್ ಟ್ರಾನ್ಸ್ಪೋರ್ಟ್ ಕಂಪನಿ, ಎನ್ ರತ್ನಯ್ಯ ಇವರೊಂದಿಗೆ ಅಕ್ರಮವಾಗಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಮಧ್ಯೆ, ಕೆಲ ಗಣಿ ಗುತ್ತಿಗೆಗಳ ಜಿಪಿಎಸ್ ರೀಡಿಂಗ್ಗಳನ್ನು, ಎಲ್ಲೆಗಳನ್ನು ಅಧಿಕಾರಿಗಳ ಸಹಕಾರದೊಂದಿಗೆ ಬದಲಾವಣೆ ಮಾಡಿದ ಆರೋಪ ವ್ಯಕ್ತವಾಗುತ್ತದೆ.</p>.<p>ಕರ್ನಾಟಕದ ಭಾಗದಲ್ಲಿದ್ದ ಟಪಾಲ್ ಗಣೇಶ್ ಅವರ ಕುಟುಂಬದ ಒಡೆತನದ ಟಿಎನ್ಆರ್ ಗಣಿಯ ಎಲ್ಲೆಗಳು ಬದಲಾಗುತ್ತವೆ. ಇದರ ವಿರುದ್ಧ ಟಪಾಲ್ ಕುಟುಂಬ ಹೈಕೋರ್ಟ್ ಮೆಟ್ಟಿಲೇರುತ್ತದೆ. ಅಲ್ಲಿ ಸರ್ವೆಗೆ ಆದೇಶವಾದರೂ, ಜನಾರ್ದನ ರೆಡ್ಡಿ ಅಲ್ಲಿಯೂ ಪ್ರಭಾವ ಬೀರಿದ ಆರೋಪವಿದೆ.</p>.<p>ಕೊನೆಗೆ, ಮಲಪನಗುಡಿಯ ಅಂತರಗಂಗಮ್ಮ ಕೊಂಡ ಎಂಬಲ್ಲಿದ್ದ ಗಣಿಯ ಮೂಲ ದಾಖಲೆ, ನಕ್ಷೆಗಳ ಮಾಹಿತಿ ಸಂಗ್ರಹಿಸುವ ಟಪಾಲ್ ಕುಟುಂಬ ಅದರಲ್ಲಿ ಕಂಡು ಬರುವ ವ್ಯತ್ಯಾಸಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕೇಂದ್ರದ ಉನ್ನತಾಧಿಕಾರ ಸಮಿತಿಯ ಮೊರೆ ಹೋಗುತ್ತದೆ. </p>.<p>ಈ ವಿಚಾರ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತದೆ. ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ವಿಧಾನಸಭೆಯಲ್ಲಿ ತೀವ್ರವಾಗಿ ಖಂಡಿಸುತ್ತಾರೆ. ತನಿಖೆಗೆ ಆಗ್ರಹಿಸುತ್ತಾರೆ. ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದ ಸರ್ಕಾರ ತನಿಖೆಗೆ ತ್ರಿಸದಸ್ಯ ಸಮಿತಿಯೊಂದನ್ನು ರಚಿಸುತ್ತದೆ. </p>.<p>ತನಿಖೆ ನಡೆಸುವ ಸಮಿತಿಯು, ಜನಾರ್ದನ ರೆಡ್ಡಿ ಅವರ ಒಎಂಸಿ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಅಕ್ರಮ ನಡೆಸುತ್ತಿರುವುದಾಗಿ ಸರ್ಕಾರಕ್ಕೆ ವರದಿ ನೀಡುತ್ತದೆ. ವರದಿ ಆಧರಿಸಿದ ಸಿಎಂ ರೋಸಯ್ಯ 2009ರ ಸೆ. 11ರಂದು ಸಿಬಿಐ ತನಿಖೆಗೆ ಆದೇಶಿಸುತ್ತಾರೆ. ಇದೇ ಪ್ರಕರಣದಲ್ಲಿ ಸದ್ಯ ತೀರ್ಪು ಪ್ರಕಟವಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಆಂಧ್ರ ಪ್ರದೇಶದಲ್ಲಿ ಒಎಂಸಿಯು ಮೂರು ಗಣಿಗಳನ್ನು ಹೊಂದಿರುತ್ತದೆ. ಅದರಲ್ಲಿ ಮಲಪನಗುಡಿಯ ಅಂತರಗಂಗಮ್ಮ ಕೊಂಡ ಎಂಬಲ್ಲಿದ್ದ 68 ಹೆಕ್ಟೇರ್ ಪ್ರದೇಶದ ಗಣಿಯೂ ಒಂದು. ಈ ಗಣಿಯೂ ಮೂಲತಃ ಟಪಾಲ್ ಗಣೇಶ್ ಕುಟುಂಬದ್ದಾಗಿದ್ದು, ಒಎಂಸಿಗೆ ಮರು ಮಂಜೂರಾಗಿರುತ್ತದೆ. </p>.<p>2008ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿ ಉಸ್ತುವಾರಿ ಸಚಿವರು ಆಗುತ್ತಾರೆ. ತಮ್ಮ ಪ್ರಭಾವ ಬಳಸಿಕೊಂಡು, ಮಲಪನಗುಡಿಯಲ್ಲಿರುವ ತಮ್ಮ ಗಣಿ ಸುತ್ತಮುತ್ತಲ ಗಣಿ ಕಂಪನಿಗಳಾದ ಹಿಂದ್ ಟ್ರೇಡರ್ಸ್, ಮೆಹಬೂಟ್ ಟ್ರಾನ್ಸ್ಪೋರ್ಟ್ ಕಂಪನಿ, ಎನ್ ರತ್ನಯ್ಯ ಇವರೊಂದಿಗೆ ಅಕ್ರಮವಾಗಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಮಧ್ಯೆ, ಕೆಲ ಗಣಿ ಗುತ್ತಿಗೆಗಳ ಜಿಪಿಎಸ್ ರೀಡಿಂಗ್ಗಳನ್ನು, ಎಲ್ಲೆಗಳನ್ನು ಅಧಿಕಾರಿಗಳ ಸಹಕಾರದೊಂದಿಗೆ ಬದಲಾವಣೆ ಮಾಡಿದ ಆರೋಪ ವ್ಯಕ್ತವಾಗುತ್ತದೆ.</p>.<p>ಕರ್ನಾಟಕದ ಭಾಗದಲ್ಲಿದ್ದ ಟಪಾಲ್ ಗಣೇಶ್ ಅವರ ಕುಟುಂಬದ ಒಡೆತನದ ಟಿಎನ್ಆರ್ ಗಣಿಯ ಎಲ್ಲೆಗಳು ಬದಲಾಗುತ್ತವೆ. ಇದರ ವಿರುದ್ಧ ಟಪಾಲ್ ಕುಟುಂಬ ಹೈಕೋರ್ಟ್ ಮೆಟ್ಟಿಲೇರುತ್ತದೆ. ಅಲ್ಲಿ ಸರ್ವೆಗೆ ಆದೇಶವಾದರೂ, ಜನಾರ್ದನ ರೆಡ್ಡಿ ಅಲ್ಲಿಯೂ ಪ್ರಭಾವ ಬೀರಿದ ಆರೋಪವಿದೆ.</p>.<p>ಕೊನೆಗೆ, ಮಲಪನಗುಡಿಯ ಅಂತರಗಂಗಮ್ಮ ಕೊಂಡ ಎಂಬಲ್ಲಿದ್ದ ಗಣಿಯ ಮೂಲ ದಾಖಲೆ, ನಕ್ಷೆಗಳ ಮಾಹಿತಿ ಸಂಗ್ರಹಿಸುವ ಟಪಾಲ್ ಕುಟುಂಬ ಅದರಲ್ಲಿ ಕಂಡು ಬರುವ ವ್ಯತ್ಯಾಸಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕೇಂದ್ರದ ಉನ್ನತಾಧಿಕಾರ ಸಮಿತಿಯ ಮೊರೆ ಹೋಗುತ್ತದೆ. </p>.<p>ಈ ವಿಚಾರ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತದೆ. ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ವಿಧಾನಸಭೆಯಲ್ಲಿ ತೀವ್ರವಾಗಿ ಖಂಡಿಸುತ್ತಾರೆ. ತನಿಖೆಗೆ ಆಗ್ರಹಿಸುತ್ತಾರೆ. ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದ ಸರ್ಕಾರ ತನಿಖೆಗೆ ತ್ರಿಸದಸ್ಯ ಸಮಿತಿಯೊಂದನ್ನು ರಚಿಸುತ್ತದೆ. </p>.<p>ತನಿಖೆ ನಡೆಸುವ ಸಮಿತಿಯು, ಜನಾರ್ದನ ರೆಡ್ಡಿ ಅವರ ಒಎಂಸಿ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಅಕ್ರಮ ನಡೆಸುತ್ತಿರುವುದಾಗಿ ಸರ್ಕಾರಕ್ಕೆ ವರದಿ ನೀಡುತ್ತದೆ. ವರದಿ ಆಧರಿಸಿದ ಸಿಎಂ ರೋಸಯ್ಯ 2009ರ ಸೆ. 11ರಂದು ಸಿಬಿಐ ತನಿಖೆಗೆ ಆದೇಶಿಸುತ್ತಾರೆ. ಇದೇ ಪ್ರಕರಣದಲ್ಲಿ ಸದ್ಯ ತೀರ್ಪು ಪ್ರಕಟವಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>