<p><strong>ಕಂಪ್ಲಿ</strong>: ತಾಲ್ಲೂಕಿನ ಗಡಿಗ್ರಾಮ ಶ್ರೀರಾಮರಂಗಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡ, ಪರಿಕರಗಳು ಎಲ್ಲವೂ ಹೊಂದಿದ್ದರೂ ಹಲವು ತಿಂಗಳುಗಳಿಂದ ಕಾಯಂ ವೈದ್ಯರ ಕೊರತೆಯಿಂದ ಸೊರಗುತ್ತಿದೆ.</p>.<p>ಮಾಜಿ ಶಾಸಕ ಭೀಮನೇನಿ ಕೊಂಡಯ್ಯ ಅವರು ದಾನವಾಗಿ ನೀಡಿದ ಸ್ಥಳದಲ್ಲಿ ₹4ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ, ವಸತಿಗೃಹವು ಕಳೆದ ಆಗಸ್ಟ್ 7ರಂದು ಉದ್ಘಾಟನೆಗೊಂಡಿದೆ.<br> ಪ್ರಸ್ತುತ ಆಸ್ಪತ್ರೆ ವ್ಯಾಪ್ತಿ ನೀರಾವರಿ ಪ್ರದೇಶವಾಗಿದ್ದು, ರೈತರು ಅಧಿಕ ಸಂಖ್ಯೆಯಲ್ಲಿದ್ದಾರೆ.</p>.<p>ಆಕಸ್ಮಿಕ ವಿಷಜಂತುಗಳ ಕಚ್ಚಿದಲ್ಲಿ ಚಿಕಿತ್ಸೆಗಾಗಿ ದೂರದ ಕಂಪ್ಲಿ, ಬಳ್ಳಾರಿಗೆ ತೆರಳಬೇಕು. ಸಕಾಲಕ್ಕೆ ಆಂಬುಲೆನ್ಸ್ ಸೇವೆಯೂ ದೊರೆಯುವುದಿಲ್ಲ. ಹಾಗಾಗಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ ಎಂಬುದು ಗ್ರಾಮಸ್ಥರ ದೂರು. ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಗೇ ಕಾಯಿಲೆ ಬಂದಿದ್ದು, ಈ ಗ್ರಹಣ ಬಿಡಿಸುವವರು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.</p>.<p>‘ನನಗೆ ಮೂರು ದಿನದ ಹಿಂದೆ ಚೇಳು ಕಡಿಯಿತು. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದರೆ ವೈದ್ಯರಿಲ್ಲದ ಕಾರಣ ಅಲ್ಲಿಯ ಸಿಬ್ಬಂದಿ ಬಳ್ಳಾರಿಗೆ ಹೋಗುವಂತೆ ತಿಳಿಸಿದರು’ ಎಂದು ಗ್ರಾಮದ ಪಿ. ನಾರಾಯಣಸ್ವಾಮಿ ಬೇಸರದಿಂದ ಹೇಳಿದರು.</p>.<p>ಈ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಶುಶ್ರೂಷಕರೇ ಹೆರಿಗೆ ಜವಾಬ್ದಾರಿ ನೋಡಿಕೊಳ್ಳಬೇಕಾದ ಅನಿವಾರ್ಯ ಇದೆ. ಈಚೆಗೆ ಗ್ರಾಮದ ಹಲವರಿಗೆ ಕರಿಮೂತಿ ಕೋತಿಯೊಂದು ಕಚ್ಚಿ ರಕ್ತಸ್ರಾವದಿಂದ ಬಳಲಿ ಬಳ್ಳಾರಿಯ ಬಿಎಂಸಿಆರ್ಸಿಗೆ ತೆರಳಿ ಚಿಕಿತ್ಸೆ ಪಡೆಯುವಂತಾಯಿತು ಎಂದು ಗ್ರಾಮಸ್ಥರು ಅಪಾದಿಸಿದರು.</p>.<p>ಕಾಯಂ ವೈದ್ಯರು, ಅಗತ್ಯ ಸಿಬ್ಬಂದಿ, ಸಮರ್ಪಕ ಆಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ಜನರು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ</strong>: ತಾಲ್ಲೂಕಿನ ಗಡಿಗ್ರಾಮ ಶ್ರೀರಾಮರಂಗಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡ, ಪರಿಕರಗಳು ಎಲ್ಲವೂ ಹೊಂದಿದ್ದರೂ ಹಲವು ತಿಂಗಳುಗಳಿಂದ ಕಾಯಂ ವೈದ್ಯರ ಕೊರತೆಯಿಂದ ಸೊರಗುತ್ತಿದೆ.</p>.<p>ಮಾಜಿ ಶಾಸಕ ಭೀಮನೇನಿ ಕೊಂಡಯ್ಯ ಅವರು ದಾನವಾಗಿ ನೀಡಿದ ಸ್ಥಳದಲ್ಲಿ ₹4ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ, ವಸತಿಗೃಹವು ಕಳೆದ ಆಗಸ್ಟ್ 7ರಂದು ಉದ್ಘಾಟನೆಗೊಂಡಿದೆ.<br> ಪ್ರಸ್ತುತ ಆಸ್ಪತ್ರೆ ವ್ಯಾಪ್ತಿ ನೀರಾವರಿ ಪ್ರದೇಶವಾಗಿದ್ದು, ರೈತರು ಅಧಿಕ ಸಂಖ್ಯೆಯಲ್ಲಿದ್ದಾರೆ.</p>.<p>ಆಕಸ್ಮಿಕ ವಿಷಜಂತುಗಳ ಕಚ್ಚಿದಲ್ಲಿ ಚಿಕಿತ್ಸೆಗಾಗಿ ದೂರದ ಕಂಪ್ಲಿ, ಬಳ್ಳಾರಿಗೆ ತೆರಳಬೇಕು. ಸಕಾಲಕ್ಕೆ ಆಂಬುಲೆನ್ಸ್ ಸೇವೆಯೂ ದೊರೆಯುವುದಿಲ್ಲ. ಹಾಗಾಗಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ ಎಂಬುದು ಗ್ರಾಮಸ್ಥರ ದೂರು. ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಗೇ ಕಾಯಿಲೆ ಬಂದಿದ್ದು, ಈ ಗ್ರಹಣ ಬಿಡಿಸುವವರು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.</p>.<p>‘ನನಗೆ ಮೂರು ದಿನದ ಹಿಂದೆ ಚೇಳು ಕಡಿಯಿತು. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದರೆ ವೈದ್ಯರಿಲ್ಲದ ಕಾರಣ ಅಲ್ಲಿಯ ಸಿಬ್ಬಂದಿ ಬಳ್ಳಾರಿಗೆ ಹೋಗುವಂತೆ ತಿಳಿಸಿದರು’ ಎಂದು ಗ್ರಾಮದ ಪಿ. ನಾರಾಯಣಸ್ವಾಮಿ ಬೇಸರದಿಂದ ಹೇಳಿದರು.</p>.<p>ಈ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಶುಶ್ರೂಷಕರೇ ಹೆರಿಗೆ ಜವಾಬ್ದಾರಿ ನೋಡಿಕೊಳ್ಳಬೇಕಾದ ಅನಿವಾರ್ಯ ಇದೆ. ಈಚೆಗೆ ಗ್ರಾಮದ ಹಲವರಿಗೆ ಕರಿಮೂತಿ ಕೋತಿಯೊಂದು ಕಚ್ಚಿ ರಕ್ತಸ್ರಾವದಿಂದ ಬಳಲಿ ಬಳ್ಳಾರಿಯ ಬಿಎಂಸಿಆರ್ಸಿಗೆ ತೆರಳಿ ಚಿಕಿತ್ಸೆ ಪಡೆಯುವಂತಾಯಿತು ಎಂದು ಗ್ರಾಮಸ್ಥರು ಅಪಾದಿಸಿದರು.</p>.<p>ಕಾಯಂ ವೈದ್ಯರು, ಅಗತ್ಯ ಸಿಬ್ಬಂದಿ, ಸಮರ್ಪಕ ಆಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ಜನರು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>