ಕೆರೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ₹8.08 ಕೋಟಿ ಬಿಡುಗಡೆಯಾಗಿದೆ.ಒಟ್ಟು 48 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಕೆರೆಯ ಸುತ್ತಲೂ ತಂತಿ ಬೇಲಿ ಜೋಡಿಸುವುದು, ಹೂಳು ತೆಗೆಯುವುದು, ಬಂಡ್ ನಿರ್ಮಾಣ, ಕಲುಷಿತ ನೀರು ಸೇರದಂತೆ ‘ಎಲ್’ ಆಕಾರದಲ್ಲಿ ಚರಂಡಿ ನಿರ್ಮಾಣ, ದೋಣಿ ವಿಹಾರ, ಕೆರೆಯ ಮಧ್ಯಭಾಗದಲ್ಲಿ ಪುಟ್ಟ ದ್ವೀಪ ನಿರ್ಮಾಣ ಹಾಗೂ ರಾಷ್ಟ್ರಧ್ವಜ ಸ್ತಂಭ ನಿರ್ಮಾಣ ಮಾಡುವುದು ಯೋಜನೆಯ ಮೊದಲ ಹಂತದಲ್ಲಿ ಸೇರಿದೆ.