‘ಚುನಾವಣೆ ಬಂದಾಗ ಕಾಂಗ್ರೆಸ್ಗೆ ಬಾಡೂಟ ನೆನಪಾಗುತ್ತದೆ’ ಎಂದು ಸಚಿವ ಶ್ರೀರಾಮುಲು ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ, ‘ಕುಂಟ ಮಾರಮ್ಮ ಈ ಭಾಗದ ಆದಿ ದೇವತೆ. ಪ್ರತಿ ತಿಂಗಳು ಅಮಾವಾಸ್ಯೆ, ಹುಣ್ಣಿಮೆಗೆ ಈ ರೀತಿ ಆಚರಣೆ ನಡೆಯುತ್ತದೆ. ಶ್ರೀರಾಮುಲು ಇದೇ ಗ್ರಾಮದವರು. ಅವರು ಪೂಜೆ ಮಾಡುತ್ತಾರೊ, ಇಲ್ಲವೊ ಗೊತ್ತಿಲ್ಲ. ಆದರೆ, ಈ ಆಚರಣೆ ಹಿಂದೆ ಚುನಾವಣೆಯ ಉದ್ದೇಶವಿಲ್ಲ‘ ಎಂದು ನಾಗೇಂದ್ರ ಉತ್ತರಿಸಿದರು.