<p><strong>ತೆಕ್ಕಲಕೋಟೆ</strong>: ಇಲ್ಲಿನ ಕರೂರು ಗ್ರಾಮದ ರೈತ ಬಿ.ಅಮರೇಶ ತಮ್ಮ ಜಮೀನಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಜೋಳದ ಬೆಳೆ ಪಡೆದಿದ್ದಾರೆ, ಆದರೆ ಬೆಳೆ ಸಮೀಕ್ಷೆಯ ತಂತ್ರಾಂಶದಲ್ಲಿ ಮುಂಗಾರು ಜೋಳ ಎಂದು ನಮೂದಾಗಿದ್ದು, ಖರೀದಿ ಕೇಂದ್ರದಲ್ಲಿ ಜೋಳ ಖರೀದಿಸದೇ ಇರುವುದರಿಂದ ರೈತನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.</p>.<p>‘ಕೃಷಿ ಅಧಿಕಾರಿಗಳು ಕಳೆದ ವರ್ಷವೂ ಇದೇ ರೀತಿ ಬೆಳೆ ನಮೂದು ಮಾಡಿದ್ದು, ಈ ವರ್ಷವೂ ತಪ್ಪು ನಮೋದಿಸಿ ಜೋಳ ಮಾರಾಟ ಮಾಡಲು ಪರದಾಡುವಂತಾಗಿದೆ’ ಎಂದು ರೈತ ಅಮರೇಶ ಅಳಲು ತೋಡಿಕೊಂಡರು.</p>.<p>ಕೃಷಿ ಅಧಿಕಾರಿ ಪರಮೇಶ್ವರರೆಡ್ಡಿ ಬೆಳೆ ಕಾಲಂನಲ್ಲಿ ಹಿಂಗಾರು ಬದಲಾಗಿ ಮುಂಗಾರು ಎಂದು ನಮೂದಾಗಿದ್ದು ಜೋಳ ಖರೀದಿಗೆ ನೋಂದಾಯಿಸಲು ಬರುವುದಿಲ್ಲ. ಇದರಿಂದ ಸಾಕಷ್ಟು ರೈತರಿಗೆ ಅನ್ಯಾಯವಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ರೈತ ಬಿ.ಅಮರೇಶ ಒತ್ತಾಯಿಸಿದ್ದಾರೆ.</p>.<p>‘ತಂತ್ರಾಂಶದಲ್ಲಿ ಬೆಳೆ ನೋಂದಣಿ ಸಮಯದಲ್ಲಿ ಆಗಿರುವ ಗೊಂದಲದಿಂದಾಗಿ ಈ ಸಮಸ್ಯೆ ಉಂಟಾಗಿದೆ, ಇನ್ನು ಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ಕ್ರಮ ವಹಿಸಲಾಗುವುದು’ ಎಂದು ಸಿರುಗುಪ್ಪ ಪ್ರಭಾರ ತಹಶೀಲ್ದಾರ್ ನರಸಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ</strong>: ಇಲ್ಲಿನ ಕರೂರು ಗ್ರಾಮದ ರೈತ ಬಿ.ಅಮರೇಶ ತಮ್ಮ ಜಮೀನಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಜೋಳದ ಬೆಳೆ ಪಡೆದಿದ್ದಾರೆ, ಆದರೆ ಬೆಳೆ ಸಮೀಕ್ಷೆಯ ತಂತ್ರಾಂಶದಲ್ಲಿ ಮುಂಗಾರು ಜೋಳ ಎಂದು ನಮೂದಾಗಿದ್ದು, ಖರೀದಿ ಕೇಂದ್ರದಲ್ಲಿ ಜೋಳ ಖರೀದಿಸದೇ ಇರುವುದರಿಂದ ರೈತನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.</p>.<p>‘ಕೃಷಿ ಅಧಿಕಾರಿಗಳು ಕಳೆದ ವರ್ಷವೂ ಇದೇ ರೀತಿ ಬೆಳೆ ನಮೂದು ಮಾಡಿದ್ದು, ಈ ವರ್ಷವೂ ತಪ್ಪು ನಮೋದಿಸಿ ಜೋಳ ಮಾರಾಟ ಮಾಡಲು ಪರದಾಡುವಂತಾಗಿದೆ’ ಎಂದು ರೈತ ಅಮರೇಶ ಅಳಲು ತೋಡಿಕೊಂಡರು.</p>.<p>ಕೃಷಿ ಅಧಿಕಾರಿ ಪರಮೇಶ್ವರರೆಡ್ಡಿ ಬೆಳೆ ಕಾಲಂನಲ್ಲಿ ಹಿಂಗಾರು ಬದಲಾಗಿ ಮುಂಗಾರು ಎಂದು ನಮೂದಾಗಿದ್ದು ಜೋಳ ಖರೀದಿಗೆ ನೋಂದಾಯಿಸಲು ಬರುವುದಿಲ್ಲ. ಇದರಿಂದ ಸಾಕಷ್ಟು ರೈತರಿಗೆ ಅನ್ಯಾಯವಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ರೈತ ಬಿ.ಅಮರೇಶ ಒತ್ತಾಯಿಸಿದ್ದಾರೆ.</p>.<p>‘ತಂತ್ರಾಂಶದಲ್ಲಿ ಬೆಳೆ ನೋಂದಣಿ ಸಮಯದಲ್ಲಿ ಆಗಿರುವ ಗೊಂದಲದಿಂದಾಗಿ ಈ ಸಮಸ್ಯೆ ಉಂಟಾಗಿದೆ, ಇನ್ನು ಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ಕ್ರಮ ವಹಿಸಲಾಗುವುದು’ ಎಂದು ಸಿರುಗುಪ್ಪ ಪ್ರಭಾರ ತಹಶೀಲ್ದಾರ್ ನರಸಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>