<p><strong>ತೋರಣಗಲ್ಲು</strong>: ಸಮೀಪದ ತಾರಾನಗರ ಗ್ರಾಮದ ಕಾರ್ತಿಕೇಯ ಪ್ರೌಢಶಾಲೆಯ ಆವರಣದಲ್ಲಿರುವ ಅಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಗ್ರಾಮದ ಮೂರು ಸ್ಥಳಗಳಲ್ಲಿ ಕರಡಿಗಳು ನಿರಂತರವಾಗಿ ಕಾಣಿಕೊಳ್ಳುತ್ತಿದ್ದು, ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.</p>.<p>ಕರಡಿಯು ಶುಕ್ರವಾರ ತಡರಾತ್ರಿ ಗ್ರಾಮದ ಕಾರ್ತಿಕೇಯ ಪ್ರೌಢಶಾಲೆಯ ಆವರಣದಲ್ಲಿರುವ ಅಂಜನೇಯಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ಒಳಗೆ ನುಗ್ಗಿರುವ ದೃಶ್ಯಾವಳಿಯನ್ನು ಜನರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಜನರು ಗಲಾಟೆ ನಡೆಸಿದ್ದರಿಂದ ಕರಡಿಯು ಓಡಿ ಹೋಗಿದೆ.</p>.<p>ಕಳೆದ ವರ್ಷವೂ ಕರಡಿಯು ಗ್ರಾಮದ ಒಳಕ್ಕೆ ನುಗ್ಗಿ ಜನರನ್ನು ಭಯಪಡಿಸಿತ್ತು. ಜನರ ಮನವಿಯ ಮೇರೆಗೆ ಅರಣ್ಯ ಇಲಖೆಯವರು ಬೋನ್ ಅಳವಡಿಸಿ ಸೆರೆ ಹಿಡಿದಿದ್ದರು. ಈ ವರ್ಷ ಮತ್ತೆ ಕರಡಿಯು ಗ್ರಾಮದ ಒಳಗೆ ನುಗ್ಗಿದ್ದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.</p>.<p>‘ಕರಡಿಯನ್ನು ತ್ವರಿತವಾಗಿ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಪಂಚಾಯಿತಿ ವತಿಯಿಂದ ಪತ್ರ ಬರೆಯಲಾಗಿದೆ’ ಎಂದು ತಾರಾನಗರ ಗ್ರಾಮ ಪಂಚಾಯಿತಿ ಪಿಡಿಒ ಪ್ರಭುವನಗೌಡ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋರಣಗಲ್ಲು</strong>: ಸಮೀಪದ ತಾರಾನಗರ ಗ್ರಾಮದ ಕಾರ್ತಿಕೇಯ ಪ್ರೌಢಶಾಲೆಯ ಆವರಣದಲ್ಲಿರುವ ಅಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಗ್ರಾಮದ ಮೂರು ಸ್ಥಳಗಳಲ್ಲಿ ಕರಡಿಗಳು ನಿರಂತರವಾಗಿ ಕಾಣಿಕೊಳ್ಳುತ್ತಿದ್ದು, ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.</p>.<p>ಕರಡಿಯು ಶುಕ್ರವಾರ ತಡರಾತ್ರಿ ಗ್ರಾಮದ ಕಾರ್ತಿಕೇಯ ಪ್ರೌಢಶಾಲೆಯ ಆವರಣದಲ್ಲಿರುವ ಅಂಜನೇಯಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ಒಳಗೆ ನುಗ್ಗಿರುವ ದೃಶ್ಯಾವಳಿಯನ್ನು ಜನರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಜನರು ಗಲಾಟೆ ನಡೆಸಿದ್ದರಿಂದ ಕರಡಿಯು ಓಡಿ ಹೋಗಿದೆ.</p>.<p>ಕಳೆದ ವರ್ಷವೂ ಕರಡಿಯು ಗ್ರಾಮದ ಒಳಕ್ಕೆ ನುಗ್ಗಿ ಜನರನ್ನು ಭಯಪಡಿಸಿತ್ತು. ಜನರ ಮನವಿಯ ಮೇರೆಗೆ ಅರಣ್ಯ ಇಲಖೆಯವರು ಬೋನ್ ಅಳವಡಿಸಿ ಸೆರೆ ಹಿಡಿದಿದ್ದರು. ಈ ವರ್ಷ ಮತ್ತೆ ಕರಡಿಯು ಗ್ರಾಮದ ಒಳಗೆ ನುಗ್ಗಿದ್ದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.</p>.<p>‘ಕರಡಿಯನ್ನು ತ್ವರಿತವಾಗಿ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಪಂಚಾಯಿತಿ ವತಿಯಿಂದ ಪತ್ರ ಬರೆಯಲಾಗಿದೆ’ ಎಂದು ತಾರಾನಗರ ಗ್ರಾಮ ಪಂಚಾಯಿತಿ ಪಿಡಿಒ ಪ್ರಭುವನಗೌಡ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>