<p>ಸಿರುಗುಪ್ಪ: ಶರೀರದಲ್ಲಿನ ಎಲ್ಲ ಭಾಗಗಳು ಸಹಕಾರ ನೀಡಿದರೆ ಮಾತ್ರ ದೇಹ ಚೈತನ್ಯವಾಗಿರುತ್ತದೆ. ಅದರಂತೆ ವಿವಿಧ ರಂಗಗಳಲ್ಲಿ ನಾಗರಿಕರ ಸಹಕಾರ ಅತಿಮುಖ್ಯ, ವಿಶ್ವಾಸದ ಸಹಕಾರವೇ ಸಮೃದ್ಧಿಯಾಗಿದೆ ಎಂದು ಚರಣಗಿರಿ ಹಾಲ್ವಿ ಅಭಿನವ ಮಹಾಂತ ಸ್ವಾಮೀಜಿ ಹೇಳಿದರು.</p>.<p>ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬಳ್ಳಾರಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ರಾತ್ರಿ ನಡೆದ ಸೌಹಾರ್ದ ಚಳುವಳಿಯ ರಜತ ಮಹೋತ್ಸವದಲ್ಲಿ ಮಾತನಾಡಿದರು.</p>.<p>ವಿಶ್ವಾಸಾರ್ಹ, ಪಾರದರ್ಶಕತೆ, ಸೇವಾಭಾವದಿಂದ ಇಂದು ಸಹಕಾರ ಸಂಘಗಳು ಬೃಹತ್ ಪ್ರಮಾಣದವರೆಗೆ ಬೆಳೆದಿವೆ ಎಂದರು.</p>.<p>ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಮಿತ ರಾಜ್ಯ ಅಧ್ಯಕ್ಷ ಜಿ.ನಂಜನಗೌಡ ಮಾತನಾಡಿದ ಅವರು, 1905 ಜುಲೈ 8 ರಂದು ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಏಷ್ಯಾದ ಪ್ರಪ್ರಥಮ ಸಹಕಾರಿ ಕೃಷಿ ಪತ್ತಿನ ಸಂಘವನ್ನು ಸ್ಥಾಪಿಸಿದರು. ಗ್ರಾಮೀಣರ ಸಹಕಾರ ಮತ್ತು ರೈತರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಿ ಸಹಕಾರಿ ಚಳುವಳಿ ಪ್ರಾರಂಭಿಸಿದರು ಎಂದರು.</p>.<p>ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಮಿತ ನಿರ್ದೇಶಕ ಎಚ್.ಜೆ.ಹನುಮಂತಯ್ಯ, ಗುರು ಬಸವ ಮಠದ ಬಸವಭೂಷಣ ಸ್ವಾಮೀಜಿ, ಕಲಬುರಗಿ ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರಾಕಲೇ, ಮೇಘಾ ಸೌಹಾರ್ದ ಸಹಕಾರಿ ಬಳ್ಳಾರಿ ಅಧ್ಯಕ್ಷರಾದ ಸತ್ಯನಾರಾಯಣ ಮಾತನಾಡಿದರು.</p>.<p>ಸಹಕಾರಿ ರಜತಮಹೋತ್ಸವ ಅಂಗವಾಗಿ ಏರ್ಪಡಿಸಿದ ಕ್ರೀಡಾ ಕೂಟದಲ್ಲಿ ವಿಜೇತ ತಂಡಕ್ಕೆ ಬಹುಮಾನ ಪ್ರಶಸ್ತಿ ನೀಡಿದರು.</p>.<p>ರಾಜ್ಯ ಮಟ್ಟದ ‘ಸಹಕಾರಿ ರತ್ನ’ ಪ್ರಶಸ್ತಿ ಪಡೆದ ವಿಶ್ವಸಿರಿ ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ವಜ್ರಗಿರಿ ನಟರಾಜ ಅವರನ್ನು ಸನ್ಮಾನಿಸಿ ಗೌರವಿಸಿದರು. ಸೂರ್ಯಕಲಾ ಟ್ರಸ್ಟ್ ನ ಬಳ್ಳಾರಿ ಅಭಿಷೇಕ್ ತಂಡ ಹಾಗೂ ಅಪ್ಪು ನೃತ್ಯ ಅಕಾಡೆಮಿ, ಸೂಪರ್ ಚಾನಸ್ ಅಕಾಡೆಮಿ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.</p>.<p>ಪಿ.ಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನ ಗೌಡ, ಸಂಯುಕ್ತ ಸಹಕಾರಿಯ ನಿರ್ದೇಶಕಿ ಶೈಲಜಾ ತಪಲಿ, ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ, ಲೆಕ್ಕಪರಿಶೋಧಕರ ನಾಗನಗೌಡ, ವಿಷ್ಣು ವಿಲಾಸ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ಅನೀಲಕುಮಾರ, ಹಾಸ್ಯ ಕಲಾವಿದ ಜೆ.ನರಸಿಂಹ ಮೂರ್ತಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿರುಗುಪ್ಪ: ಶರೀರದಲ್ಲಿನ ಎಲ್ಲ ಭಾಗಗಳು ಸಹಕಾರ ನೀಡಿದರೆ ಮಾತ್ರ ದೇಹ ಚೈತನ್ಯವಾಗಿರುತ್ತದೆ. ಅದರಂತೆ ವಿವಿಧ ರಂಗಗಳಲ್ಲಿ ನಾಗರಿಕರ ಸಹಕಾರ ಅತಿಮುಖ್ಯ, ವಿಶ್ವಾಸದ ಸಹಕಾರವೇ ಸಮೃದ್ಧಿಯಾಗಿದೆ ಎಂದು ಚರಣಗಿರಿ ಹಾಲ್ವಿ ಅಭಿನವ ಮಹಾಂತ ಸ್ವಾಮೀಜಿ ಹೇಳಿದರು.</p>.<p>ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬಳ್ಳಾರಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ರಾತ್ರಿ ನಡೆದ ಸೌಹಾರ್ದ ಚಳುವಳಿಯ ರಜತ ಮಹೋತ್ಸವದಲ್ಲಿ ಮಾತನಾಡಿದರು.</p>.<p>ವಿಶ್ವಾಸಾರ್ಹ, ಪಾರದರ್ಶಕತೆ, ಸೇವಾಭಾವದಿಂದ ಇಂದು ಸಹಕಾರ ಸಂಘಗಳು ಬೃಹತ್ ಪ್ರಮಾಣದವರೆಗೆ ಬೆಳೆದಿವೆ ಎಂದರು.</p>.<p>ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಮಿತ ರಾಜ್ಯ ಅಧ್ಯಕ್ಷ ಜಿ.ನಂಜನಗೌಡ ಮಾತನಾಡಿದ ಅವರು, 1905 ಜುಲೈ 8 ರಂದು ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಏಷ್ಯಾದ ಪ್ರಪ್ರಥಮ ಸಹಕಾರಿ ಕೃಷಿ ಪತ್ತಿನ ಸಂಘವನ್ನು ಸ್ಥಾಪಿಸಿದರು. ಗ್ರಾಮೀಣರ ಸಹಕಾರ ಮತ್ತು ರೈತರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಿ ಸಹಕಾರಿ ಚಳುವಳಿ ಪ್ರಾರಂಭಿಸಿದರು ಎಂದರು.</p>.<p>ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಮಿತ ನಿರ್ದೇಶಕ ಎಚ್.ಜೆ.ಹನುಮಂತಯ್ಯ, ಗುರು ಬಸವ ಮಠದ ಬಸವಭೂಷಣ ಸ್ವಾಮೀಜಿ, ಕಲಬುರಗಿ ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರಾಕಲೇ, ಮೇಘಾ ಸೌಹಾರ್ದ ಸಹಕಾರಿ ಬಳ್ಳಾರಿ ಅಧ್ಯಕ್ಷರಾದ ಸತ್ಯನಾರಾಯಣ ಮಾತನಾಡಿದರು.</p>.<p>ಸಹಕಾರಿ ರಜತಮಹೋತ್ಸವ ಅಂಗವಾಗಿ ಏರ್ಪಡಿಸಿದ ಕ್ರೀಡಾ ಕೂಟದಲ್ಲಿ ವಿಜೇತ ತಂಡಕ್ಕೆ ಬಹುಮಾನ ಪ್ರಶಸ್ತಿ ನೀಡಿದರು.</p>.<p>ರಾಜ್ಯ ಮಟ್ಟದ ‘ಸಹಕಾರಿ ರತ್ನ’ ಪ್ರಶಸ್ತಿ ಪಡೆದ ವಿಶ್ವಸಿರಿ ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ವಜ್ರಗಿರಿ ನಟರಾಜ ಅವರನ್ನು ಸನ್ಮಾನಿಸಿ ಗೌರವಿಸಿದರು. ಸೂರ್ಯಕಲಾ ಟ್ರಸ್ಟ್ ನ ಬಳ್ಳಾರಿ ಅಭಿಷೇಕ್ ತಂಡ ಹಾಗೂ ಅಪ್ಪು ನೃತ್ಯ ಅಕಾಡೆಮಿ, ಸೂಪರ್ ಚಾನಸ್ ಅಕಾಡೆಮಿ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.</p>.<p>ಪಿ.ಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನ ಗೌಡ, ಸಂಯುಕ್ತ ಸಹಕಾರಿಯ ನಿರ್ದೇಶಕಿ ಶೈಲಜಾ ತಪಲಿ, ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ, ಲೆಕ್ಕಪರಿಶೋಧಕರ ನಾಗನಗೌಡ, ವಿಷ್ಣು ವಿಲಾಸ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ಅನೀಲಕುಮಾರ, ಹಾಸ್ಯ ಕಲಾವಿದ ಜೆ.ನರಸಿಂಹ ಮೂರ್ತಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>