<figcaption>""</figcaption>.<p><strong>ಬಳ್ಳಾರಿ:</strong> ಜಿಲ್ಲೆಯ ವಿಭಜನೆ ವಿರುದ್ಧ ಪ್ರತಿಭಟನೆ ಅಂಗವಾಗಿ ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಅವರನ್ನು ಪೊಲೀಸರು ವಶಕ್ಕೆ ಪಡೆದರು.</p>.<p>ನಗರದ ನಗರೂರು ನಾರಾಯಣರಾವ್ ಉದ್ಯಾನದಿಂದ ಜಿಲ್ಲಾ ಹೋರಾಟ ಸಮಿತಿ ಏರ್ಪಡಿಸಿದ್ದ ಪ್ರತಿಭಟನೆ ಮೆರವಣಿಗೆಯಲ್ಲಿ ಲಾರಿ ಏರಿ ಬಂದ ನಾಗರಾಜ್ ಮತ್ತು ನೂರಾರು ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.</p>.<p>ಮನವಿ ಪಡೆಯಲು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್ ಅವರು ಬರುತ್ತಿದ್ದಂತೆ ಮೇಲೆದ್ದ ವಾಟಾಳ್ ನಾಗರಾಜ್ ಪೊಲೀಸರ ಬ್ಯಾರಿ ಕೇಡ್ ದಾಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಆವರಣದೊಳಕ್ಕೆ ಧಾವಿಸಿದರು. ಅವರ ಬೆಂಬಲಿಗರು ಕೂಡ ಹೆಚ್ಷುವರಿ ಜಿಲ್ಲಾಧಿಕಾರಿಯನ್ನು ತಳ್ಳಿಕೊಂಡೇ ಮುನ್ನುಗ್ಗಿದರು.</p>.<p>ಈ ಸಂದರ್ಭದಲ್ಲಿ ಕೆಲ ಕ್ಷಣ ತಳ್ಳಾಟ ಏರ್ಪಟ್ಟಿತು. ಇದೇ ವೇಳೆ ಕಚೇರಿ ಮೆಟ್ಟಿಲು ಹತ್ತಲು ಮುಂದಾದ ವಾಟಾಳ್ ನಾಗರಾಜ್ ಅವರನ್ನು ಬ್ರೂಸ್ಪೇಟೆ ಠಾಣೆ ಇನ್ ಸ್ಪೆಕ್ಟರ್ ನಾಗರಾಜ್ ತಡೆದು ನಿಲ್ಲಿಸಿದರು.</p>.<p>ಪೊಲೀಸ್ ಸಿಬ್ಬಂದಿ ಕೂಡಲೇ ನಾಗರಾಜ್ ಮತ್ತು ಗೋವಿಂದು ಅವರನ್ನು ಹೊತ್ತುಕೊಂಡು ಕೆಎಸ್ ಆರ್ಪಿ ವಾಹನದೆಡೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ, ವಿಭಜನೆ ವಿರುದ್ಧ ವಾಟಾಳ್ ಧಿಕ್ಕಾರ ಕೂಗಿದರು.</p>.<p>ನಂತರ ಉಳಿದ ಮುಖಂಡರು ಮನವಿ ಸಲ್ಲಿಸಿದರು. ಮುಖಂಡರಾದ ಎಸ್. ಪನ್ನರಾಜ್, ಎ.ಮಾನಯ್ಯ, ಪಾಟೀಲ, ಕಪ್ಪಗಲ್ ಆಚಾರ್, ದರೂರು ಪುರುಷೋತ್ತಮ ಗೌಡ, ಮುಂಡ್ರಿಗಿ ನಾಗರಾಜ್, ಮೋಹನ್ ಕುಮಾರ್, ಕುಡುತಿನಿ ಶ್ರೀನಿವಾಸ್, ವಿಜಯಕುಮಾರ್, ಶ್ರೀಧರಗೌಡ, ಸಿದ್ಮಲ್ ಮಂಜುನಾಥ್, ಜೆ.ಸತ್ಯಬಾಬು, ಟಿ.ಜಿ.ವಿಠಲ್, ಚಂದ್ರಕುಮಾರಿ ಪಾಲ್ಗೊಂಡಿದ್ದರು.</p>.<figcaption>ಬಳ್ಳಾರಿ ವಿಭಜನೆಯನ್ನು ವಿರೋಧಿಸಿ ಬಳ್ಳಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ನೂರಾರು ಮುಖಂಡರು ಬಳ್ಳಾರಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಕುಡುತಿನಿ ಶ್ರೀನಿವಾಸ್ ಪಾಲ್ಗೊಂಡಿದ್ದರು</figcaption>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಬಳ್ಳಾರಿ:</strong> ಜಿಲ್ಲೆಯ ವಿಭಜನೆ ವಿರುದ್ಧ ಪ್ರತಿಭಟನೆ ಅಂಗವಾಗಿ ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಅವರನ್ನು ಪೊಲೀಸರು ವಶಕ್ಕೆ ಪಡೆದರು.</p>.<p>ನಗರದ ನಗರೂರು ನಾರಾಯಣರಾವ್ ಉದ್ಯಾನದಿಂದ ಜಿಲ್ಲಾ ಹೋರಾಟ ಸಮಿತಿ ಏರ್ಪಡಿಸಿದ್ದ ಪ್ರತಿಭಟನೆ ಮೆರವಣಿಗೆಯಲ್ಲಿ ಲಾರಿ ಏರಿ ಬಂದ ನಾಗರಾಜ್ ಮತ್ತು ನೂರಾರು ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.</p>.<p>ಮನವಿ ಪಡೆಯಲು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್ ಅವರು ಬರುತ್ತಿದ್ದಂತೆ ಮೇಲೆದ್ದ ವಾಟಾಳ್ ನಾಗರಾಜ್ ಪೊಲೀಸರ ಬ್ಯಾರಿ ಕೇಡ್ ದಾಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಆವರಣದೊಳಕ್ಕೆ ಧಾವಿಸಿದರು. ಅವರ ಬೆಂಬಲಿಗರು ಕೂಡ ಹೆಚ್ಷುವರಿ ಜಿಲ್ಲಾಧಿಕಾರಿಯನ್ನು ತಳ್ಳಿಕೊಂಡೇ ಮುನ್ನುಗ್ಗಿದರು.</p>.<p>ಈ ಸಂದರ್ಭದಲ್ಲಿ ಕೆಲ ಕ್ಷಣ ತಳ್ಳಾಟ ಏರ್ಪಟ್ಟಿತು. ಇದೇ ವೇಳೆ ಕಚೇರಿ ಮೆಟ್ಟಿಲು ಹತ್ತಲು ಮುಂದಾದ ವಾಟಾಳ್ ನಾಗರಾಜ್ ಅವರನ್ನು ಬ್ರೂಸ್ಪೇಟೆ ಠಾಣೆ ಇನ್ ಸ್ಪೆಕ್ಟರ್ ನಾಗರಾಜ್ ತಡೆದು ನಿಲ್ಲಿಸಿದರು.</p>.<p>ಪೊಲೀಸ್ ಸಿಬ್ಬಂದಿ ಕೂಡಲೇ ನಾಗರಾಜ್ ಮತ್ತು ಗೋವಿಂದು ಅವರನ್ನು ಹೊತ್ತುಕೊಂಡು ಕೆಎಸ್ ಆರ್ಪಿ ವಾಹನದೆಡೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ, ವಿಭಜನೆ ವಿರುದ್ಧ ವಾಟಾಳ್ ಧಿಕ್ಕಾರ ಕೂಗಿದರು.</p>.<p>ನಂತರ ಉಳಿದ ಮುಖಂಡರು ಮನವಿ ಸಲ್ಲಿಸಿದರು. ಮುಖಂಡರಾದ ಎಸ್. ಪನ್ನರಾಜ್, ಎ.ಮಾನಯ್ಯ, ಪಾಟೀಲ, ಕಪ್ಪಗಲ್ ಆಚಾರ್, ದರೂರು ಪುರುಷೋತ್ತಮ ಗೌಡ, ಮುಂಡ್ರಿಗಿ ನಾಗರಾಜ್, ಮೋಹನ್ ಕುಮಾರ್, ಕುಡುತಿನಿ ಶ್ರೀನಿವಾಸ್, ವಿಜಯಕುಮಾರ್, ಶ್ರೀಧರಗೌಡ, ಸಿದ್ಮಲ್ ಮಂಜುನಾಥ್, ಜೆ.ಸತ್ಯಬಾಬು, ಟಿ.ಜಿ.ವಿಠಲ್, ಚಂದ್ರಕುಮಾರಿ ಪಾಲ್ಗೊಂಡಿದ್ದರು.</p>.<figcaption>ಬಳ್ಳಾರಿ ವಿಭಜನೆಯನ್ನು ವಿರೋಧಿಸಿ ಬಳ್ಳಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ನೂರಾರು ಮುಖಂಡರು ಬಳ್ಳಾರಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಕುಡುತಿನಿ ಶ್ರೀನಿವಾಸ್ ಪಾಲ್ಗೊಂಡಿದ್ದರು</figcaption>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>