<p><strong>ಕೊಟ್ಟೂರು</strong>: ತಾಲ್ಲೂಕಿನ ನಿಂಬಳಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು ರೈತರ ಸಂಕಟ ಕೇಳುವವರಿಲ್ಲದಂತಾಗಿದೆ.</p>.<p>ಸಕಾಲಕ್ಕೆ ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ರೈತರ ಮನೆಯಲ್ಲಿ ಸಂತಸ ಮನೆ ಮಾಡಿದೆ. ರೈತರು ಜಮೀನುಗಳಲ್ಲಿ ಜೋಳ, ಮೆಕ್ಕೆಜೋಳ ಮುಂತಾದ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.</p>.<p>ಬಿತ್ತನೆ ಮಾಡಿದ ಬೀಜಗಳು ಮೊಳಕೆ ಹೊಡೆಯುವ ಹಂತದಲ್ಲಿರುವಾಗ ರಾತ್ರಿ ವೇಳೆ ಕಾಡು ಹಂದಿಗಳು ಸಾಲು ಹಿಡಿದು ಬೀಜಗಳನ್ನು ತಿಂದು ನಾಶ ಮಾಡುತ್ತಿರುವುದರಿಂದ ರೈತರು ಕಾಡು ಹಂದಿಗಳು ಹೊಲಕ್ಕೆ ನುಗ್ಗದಂತೆ ರಾತ್ರಿ ವೇಳೆ ಬೆಂಕಿ ಹಚ್ಚಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ನಿಂಬಳಗೆರೆ ಗ್ರಾಮದ ಬಾರಿ ಕೊಟ್ರೇಶಪ್ಪ, ಎಂ.ರಾಜಪ್ಪ, ಕರಿಯಣ್ಣರ ಕಲ್ಲೇಶ್, ಬಿ.ಶೇಖರಪ್ಪ , ನೀಲಪ್ಪ ಮುಂತಾದ ರೈತರ ಜಮೀನಿಗಳಲ್ಲಿ ಕಳೆದ ಮಂಗಳವಾರ ಬಿತ್ತಿದ್ದ ಮೆಕ್ಕೆಜೋಳ ಬೀಜಗಳನ್ನು ಕಾಡು ಹಂದಿಗಳು ದಾಳಿ ಮಾಡಿ ಮೊಳಕೆ ಹೊಡೆದ ಬೀಜಗಳನ್ನು ತಿಂದು ನಾಶ ಮಾಡಿವೆ.</p>.<p>ಸಾಲ ಸೂಲ ಮಾಡಿ ದುಬಾರಿ ಬೀಜ ರಸಗೊಬ್ಬರ ಖರೀದಿಸಿ ಕೂಲಿ ಆಳುಗಳಿಂದ ತತ್ತರಿಸಿ ತಲೆ ಮೇಲೆ ಕೈಹೊತ್ತು ಕೂತಿರುವ ರೈತರ ನೆರವಿಗೆ ಅರಣ್ಯ ಇಲಾಖೆ ಮುಂದಾಗುವುದೇ ಎಂದು ಈ ಭಾಗದ ರೈತರು ಕಾದು ನೋಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟೂರು</strong>: ತಾಲ್ಲೂಕಿನ ನಿಂಬಳಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು ರೈತರ ಸಂಕಟ ಕೇಳುವವರಿಲ್ಲದಂತಾಗಿದೆ.</p>.<p>ಸಕಾಲಕ್ಕೆ ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ರೈತರ ಮನೆಯಲ್ಲಿ ಸಂತಸ ಮನೆ ಮಾಡಿದೆ. ರೈತರು ಜಮೀನುಗಳಲ್ಲಿ ಜೋಳ, ಮೆಕ್ಕೆಜೋಳ ಮುಂತಾದ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.</p>.<p>ಬಿತ್ತನೆ ಮಾಡಿದ ಬೀಜಗಳು ಮೊಳಕೆ ಹೊಡೆಯುವ ಹಂತದಲ್ಲಿರುವಾಗ ರಾತ್ರಿ ವೇಳೆ ಕಾಡು ಹಂದಿಗಳು ಸಾಲು ಹಿಡಿದು ಬೀಜಗಳನ್ನು ತಿಂದು ನಾಶ ಮಾಡುತ್ತಿರುವುದರಿಂದ ರೈತರು ಕಾಡು ಹಂದಿಗಳು ಹೊಲಕ್ಕೆ ನುಗ್ಗದಂತೆ ರಾತ್ರಿ ವೇಳೆ ಬೆಂಕಿ ಹಚ್ಚಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ನಿಂಬಳಗೆರೆ ಗ್ರಾಮದ ಬಾರಿ ಕೊಟ್ರೇಶಪ್ಪ, ಎಂ.ರಾಜಪ್ಪ, ಕರಿಯಣ್ಣರ ಕಲ್ಲೇಶ್, ಬಿ.ಶೇಖರಪ್ಪ , ನೀಲಪ್ಪ ಮುಂತಾದ ರೈತರ ಜಮೀನಿಗಳಲ್ಲಿ ಕಳೆದ ಮಂಗಳವಾರ ಬಿತ್ತಿದ್ದ ಮೆಕ್ಕೆಜೋಳ ಬೀಜಗಳನ್ನು ಕಾಡು ಹಂದಿಗಳು ದಾಳಿ ಮಾಡಿ ಮೊಳಕೆ ಹೊಡೆದ ಬೀಜಗಳನ್ನು ತಿಂದು ನಾಶ ಮಾಡಿವೆ.</p>.<p>ಸಾಲ ಸೂಲ ಮಾಡಿ ದುಬಾರಿ ಬೀಜ ರಸಗೊಬ್ಬರ ಖರೀದಿಸಿ ಕೂಲಿ ಆಳುಗಳಿಂದ ತತ್ತರಿಸಿ ತಲೆ ಮೇಲೆ ಕೈಹೊತ್ತು ಕೂತಿರುವ ರೈತರ ನೆರವಿಗೆ ಅರಣ್ಯ ಇಲಾಖೆ ಮುಂದಾಗುವುದೇ ಎಂದು ಈ ಭಾಗದ ರೈತರು ಕಾದು ನೋಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>