ಸದಾಶಿವ ಪ್ರಭು ಅವರು ಕರ್ನಾಟಕ ಅಪೆಲೆಟ್ ಟ್ರಿಬ್ಯುನಲ್ ಸದಸ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನು, ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ ಅವರಿಗೆ ಸರ್ಕಾರ ಸ್ಥಳ ತೋರಿಸಿಲ್ಲ. ಜಿಲ್ಲೆ ರಚನೆಗೊಂಡ ನಂತರ ಮೊದಲ ಸಿಇಒ ಆಗಿ ನೇಮಕಗೊಂಡಿದ್ದರು. 2021ರ ಅಕ್ಟೋಬರ್ 11ರಂದು ಅಧಿಕಾರ ಸ್ವೀಕರಿಸಿದ್ದರು. ನವೆಂಬರ್ 4ರಂದು ಅನಿರುದ್ಧ್ ಶ್ರವಣ್ ಪಿ., ಡಾ. ಅರುಣ್ ಕೆ. ಅವರನ್ನು ಕ್ರಮವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಾನದಿಂದ ಬೇರೆಡೆ ವರ್ಗಾವಣೆಗೊಳಿಸಲಾಗಿತ್ತು. ಇವರಿಬ್ಬರು ಹರ್ಷಲ್ಗಿಂತ ಒಂಬತ್ತು ದಿನಗಳ ಮುಂಚೆ ಅಂದರೆ 2021ರ ಅ.2ರಂದು ಅಧಿಕಾರ ಸ್ವೀಕರಿಸಿದ್ದರು. ಜಿಲ್ಲೆಗೆ ಒಟ್ಟಿಗೆ ಬಂದಿದ್ದ ಮೂವರು ಅಧಿಕಾರಿಗಳನ್ನು ಕೆಲವೇ ದಿನಗಳ ಅಂತರದೊಳಗೆ ವರ್ಗಾವಣೆಗೊಳಿಸಲಾಗಿದೆ. ಮೂವರು ದಕ್ಷತೆಗೆ ಹೆಸರಾಗಿದ್ದರು. ಆರಂಭಿಕ ಹಂತದಲ್ಲಿ ಹೊಸ ಜಿಲ್ಲೆ ಕಟ್ಟಲು ಸಾಕಷ್ಟು ಶ್ರಮ ವಹಿಸಿದ್ದರು.